ತಂತ್ರಜ್ಞಾನ, ವಿಜ್ಞಾನ, ಜ್ಞಾನದಿಂದ ಕೃಷಿ ಮಾಡಿ
ನಾಗಮಂಗಲ: ರೈತನದ್ದು ನೀಡುವ ಕೈ ಹೊರತು ಬೇಡುವ ಕೈಯಲ್ಲ ಎಂದು ನಿವೃತ್ತ ಹಿರಿಯ ಕೃಷಿ ವಿಜ್ಞಾನಿ ಅರಸುಮಲ್ಲಯ್ಯ ಹೇಳಿದರು.
ಪಟ್ಟಣದಲ್ಲಿ ಕೃಷಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ 'ಇಲಾಖೆಗಳ ನಡಿಗೆ ರೈತನೆಡೆಗೆ' ಎಂಬ ಕಾರ್ಯಕ್ರಮದಡಿ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ರೈತರು ಸಹಕಾರ ಮನೋಭಾವನೆ ಇತ್ತು. ಇಲ್ಲದವರಿಂದ ಇರುವವರು ಕೊಟ್ಟು ತೆಗೆದುಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಸಹಕರಿಸುತ್ತಿದ್ದರು. ಆದರೆ, ಇಂದು ಅದು ಮಾಯವಾಗಿದೆ. ಇದು ಗ್ರಾಮೀಣರ ಬದುಕನ್ನು ಕ್ಲಿಷ್ಟವಾಗಿಸಿದೆ. ಭೂಮಿ ಎಂದು ಮೋಸ ಮಾಡುವುದಿಲ್ಲ, ಬೆಳೆಗೆ ತಕ್ಕಂತೆ ಭೂಮಿಯನ್ನು ಕನಿಷ್ಠ ಉಳುಮೆ ಮಾಡಿ, ಅದನ್ನು ಆಳವಾಗಿ ಉಳುಮೆ ಮಾಡಬೇಡಿ, ಇದರಿಂದ ಭೂಮಿಯಲ್ಲಿರುವ ಪೌಷ್ಟಿಕಾಂಶಗಳು ನಶಿಸುತ್ತವೆ ಎಂದರು.
ವಿದೇಶಗಳಲ್ಲಿ ವಿದ್ಯಾವಂತರು ಕೃಷಿ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಅದರಿಂದ ವಿಮುಖರಾಗುತ್ತಿದ್ದಾರೆ. ಇದು ಭವಿಷ್ಯದಲ್ಲಿ ಕೃಷಿ ವಲಯದ ಮೇಲೆ ತೀವ್ರತರವಾದ ಪರಿಣಾಮವನ್ನುಂಟು ಮಾಡುತ್ತದೆ. ವಿದ್ಯಾವಂತರು ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನವನ್ನು ಉಪಯೋಗಿಸಿ ಕೃಷಿ ಮಾಡಬೇಕು. ಭೂಮಿಯನ್ನು ಅರ್ಥ ಮಾಡಿಕೊಂಡು ಕೃಷಿ ಮಾಡಿದರೆ ರೈತನಿಗೆ ಸೋಲಿಲ್ಲ ಎಂದು ಹೇಳಿದರು.
ಮಣ್ಣು ವಿಜ್ಞಾನಿ ಭಾಗ್ಯಲಕ್ಷ್ಮೀ ಮಾತನಾಡಿ, ಭೂಮಿಗೆ ರಸಾಯನಿಕ ಗೊಬ್ಬರ ಬಳಸುವುದನ್ನು ಕಡಿಮೆ ಮಾಡಿ. ಮಣ್ಣನ್ನು ಪರೀಕ್ಷಿಸುವ ಮೂಲಕ ಅದರ ಆರೋಗ್ಯವನ್ನು ಕಾಪಾಡಿ ಮತ್ತು ಅದಕ್ಕೆ ಬೇಕಿರುವ ಪೋಷಕಾಂಶಗಳನ್ನು ಪರೀಕ್ಷೆಯ ಆಧಾರದ ಮೇಲೆ ನೀಡಿ. ಕರಲು ಮಣ್ಣನ್ನು ಹೋಗಲಾಡಿಸಲು ಜೀಪ್ಸಂ ಬಳಸಿ ಎಂದರು.
ಆಹಾರ ಮತ್ತು ಪೌಷ್ಟಿಕಾಂಶ ವಿಜ್ಞಾನಿ ಶೋಭ, ಸಿರಿಧಾನ್ಯ ವಿಜ್ಞಾನಿ ಕಮಲಾಬಾಯಿ ನಾನಾ ವಿಷಯಗಳ ಬಗ್ಗೆ ತಮ್ಮ ವಿಚಾರವನ್ನು ಮಂಡಿಸಿದರು.
ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಮಂಜುನಾಥ ಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶಿವರಾಜು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್, ರೇಷ್ಮೆ ಇಲಾಖೆಯ ಆರಾಧ್ಯ, ತೋಟಗಾರಿಕೆ ಇಲಾಖೆಯ ಚರಣ್, ಕೃಷಿ ಅಧಿಧಿಕಾರಿ ದೇವರಾಜೇಗೌಡ, ರೈತ ಸಂಘದ ಹರಲಕೆರೆ ಗೋಪಾಲಕೃಷ್ಣ, ಮುಖಂಡ ಚಿನ್ನೇಗೌಡ ಇದ್ದರು.
ಕೃಷಿ ಇಲಾಖೆಯ ಮುಂಭಾಗ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಗಳು ಸೇರಿದಂತೆ ಕೃಷಿ ಸಂಬಂಧಿತ ಯಂತ್ರಗಳ ಪ್ರದರ್ಶನ ಮತ್ತು ಸಿರಿಧಾನ್ಯಗಳ ಪ್ರದರ್ಶನವನ್ನು ರೈತರು ಆಸಕ್ತಿಯಿಂದ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ನಾಗಮಂಗಲ: ರೈತನದ್ದು ನೀಡುವ ಕೈ ಹೊರತು ಬೇಡುವ ಕೈಯಲ್ಲ ಎಂದು ನಿವೃತ್ತ ಹಿರಿಯ ಕೃಷಿ ವಿಜ್ಞಾನಿ ಅರಸುಮಲ್ಲಯ್ಯ ಹೇಳಿದರು.
ಪಟ್ಟಣದಲ್ಲಿ ಕೃಷಿ ಇಲಾಖೆ ಶುಕ್ರವಾರ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ 'ಇಲಾಖೆಗಳ ನಡಿಗೆ ರೈತನೆಡೆಗೆ' ಎಂಬ ಕಾರ್ಯಕ್ರಮದಡಿ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ವಿಚಾರ ಸಂಕಿರಣ ಮತ್ತು ವಸ್ತುಪ್ರದರ್ಶನದಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ರೈತರು ಸಹಕಾರ ಮನೋಭಾವನೆ ಇತ್ತು. ಇಲ್ಲದವರಿಂದ ಇರುವವರು ಕೊಟ್ಟು ತೆಗೆದುಕೊಳ್ಳುವ ಮೂಲಕ ಒಬ್ಬರಿಗೊಬ್ಬರು ಸಹಕರಿಸುತ್ತಿದ್ದರು. ಆದರೆ, ಇಂದು ಅದು ಮಾಯವಾಗಿದೆ. ಇದು ಗ್ರಾಮೀಣರ ಬದುಕನ್ನು ಕ್ಲಿಷ್ಟವಾಗಿಸಿದೆ. ಭೂಮಿ ಎಂದು ಮೋಸ ಮಾಡುವುದಿಲ್ಲ, ಬೆಳೆಗೆ ತಕ್ಕಂತೆ ಭೂಮಿಯನ್ನು ಕನಿಷ್ಠ ಉಳುಮೆ ಮಾಡಿ, ಅದನ್ನು ಆಳವಾಗಿ ಉಳುಮೆ ಮಾಡಬೇಡಿ, ಇದರಿಂದ ಭೂಮಿಯಲ್ಲಿರುವ ಪೌಷ್ಟಿಕಾಂಶಗಳು ನಶಿಸುತ್ತವೆ ಎಂದರು.
ವಿದೇಶಗಳಲ್ಲಿ ವಿದ್ಯಾವಂತರು ಕೃಷಿ ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಅದರಿಂದ ವಿಮುಖರಾಗುತ್ತಿದ್ದಾರೆ. ಇದು ಭವಿಷ್ಯದಲ್ಲಿ ಕೃಷಿ ವಲಯದ ಮೇಲೆ ತೀವ್ರತರವಾದ ಪರಿಣಾಮವನ್ನುಂಟು ಮಾಡುತ್ತದೆ. ವಿದ್ಯಾವಂತರು ತಂತ್ರಜ್ಞಾನ, ವಿಜ್ಞಾನ ಮತ್ತು ಜ್ಞಾನವನ್ನು ಉಪಯೋಗಿಸಿ ಕೃಷಿ ಮಾಡಬೇಕು. ಭೂಮಿಯನ್ನು ಅರ್ಥ ಮಾಡಿಕೊಂಡು ಕೃಷಿ ಮಾಡಿದರೆ ರೈತನಿಗೆ ಸೋಲಿಲ್ಲ ಎಂದು ಹೇಳಿದರು.
ಮಣ್ಣು ವಿಜ್ಞಾನಿ ಭಾಗ್ಯಲಕ್ಷ್ಮೀ ಮಾತನಾಡಿ, ಭೂಮಿಗೆ ರಸಾಯನಿಕ ಗೊಬ್ಬರ ಬಳಸುವುದನ್ನು ಕಡಿಮೆ ಮಾಡಿ. ಮಣ್ಣನ್ನು ಪರೀಕ್ಷಿಸುವ ಮೂಲಕ ಅದರ ಆರೋಗ್ಯವನ್ನು ಕಾಪಾಡಿ ಮತ್ತು ಅದಕ್ಕೆ ಬೇಕಿರುವ ಪೋಷಕಾಂಶಗಳನ್ನು ಪರೀಕ್ಷೆಯ ಆಧಾರದ ಮೇಲೆ ನೀಡಿ. ಕರಲು ಮಣ್ಣನ್ನು ಹೋಗಲಾಡಿಸಲು ಜೀಪ್ಸಂ ಬಳಸಿ ಎಂದರು.
ಆಹಾರ ಮತ್ತು ಪೌಷ್ಟಿಕಾಂಶ ವಿಜ್ಞಾನಿ ಶೋಭ, ಸಿರಿಧಾನ್ಯ ವಿಜ್ಞಾನಿ ಕಮಲಾಬಾಯಿ ನಾನಾ ವಿಷಯಗಳ ಬಗ್ಗೆ ತಮ್ಮ ವಿಚಾರವನ್ನು ಮಂಡಿಸಿದರು.
ತಾಲೂಕು ಕೃಷಿ ಸಮಾಜದ ಅಧ್ಯಕ್ಷ ಮಂಜುನಾಥ ಗೌಡ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶಿವರಾಜು, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್, ರೇಷ್ಮೆ ಇಲಾಖೆಯ ಆರಾಧ್ಯ, ತೋಟಗಾರಿಕೆ ಇಲಾಖೆಯ ಚರಣ್, ಕೃಷಿ ಅಧಿಧಿಕಾರಿ ದೇವರಾಜೇಗೌಡ, ರೈತ ಸಂಘದ ಹರಲಕೆರೆ ಗೋಪಾಲಕೃಷ್ಣ, ಮುಖಂಡ ಚಿನ್ನೇಗೌಡ ಇದ್ದರು.
ಕೃಷಿ ಇಲಾಖೆಯ ಮುಂಭಾಗ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಸಂಗೋಪನೆ ಇಲಾಖೆಗಳು ಸೇರಿದಂತೆ ಕೃಷಿ ಸಂಬಂಧಿತ ಯಂತ್ರಗಳ ಪ್ರದರ್ಶನ ಮತ್ತು ಸಿರಿಧಾನ್ಯಗಳ ಪ್ರದರ್ಶನವನ್ನು ರೈತರು ಆಸಕ್ತಿಯಿಂದ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.