ಆ್ಯಪ್ನಗರ

ಖಾಸಗಿ ಶಾಲೆಗಳ ವ್ಯಾಮೋಹ ಬೇಡ

ಖಾಸಗಿ ಶಾಲೆಗಳ ವ್ಯಾಮೋಹ ಬೇಡ ವಿಕ ಸುದ್ದಿಲೋಕ ಮಂಡ್ಯ ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ತ್ಯಜಿಸಬೇಕು ಎಂದು ರಾಜ್ಯ ಪತ್ರಿಕಾ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ...

Vijaya Karnataka 6 Jan 2019, 5:00 am
ಮಂಡ್ಯ:ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ತ್ಯಜಿಸಬೇಕು ಎಂದು ರಾಜ್ಯ ಪತ್ರಿಕಾ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ಹೇಳಿದರು.
Vijaya Karnataka Web do not love english language school
ಖಾಸಗಿ ಶಾಲೆಗಳ ವ್ಯಾಮೋಹ ಬೇಡ


ನಗರದ ಗಾಂಧಿಭವನದಲ್ಲಿ ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ಶ್ರೀವಿನಾಯಕ ಗೆಳೆಯರ ಬಳಗ ಮತ್ತು ನಿವೃತ್ತ ಶಿಕ್ಷಕ ವೆಂಕಟಶೆಟ್ಟಿ ಶಿಷ್ಯಂದಿರು ಮತ್ತು ಸ್ನೇಹಿತ ಜತೆಗೂಡಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

''ಸರಕಾರಿ ಶಾಲೆಗಳ ಉಳಿವಿಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಪೋಷಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹವನ್ನು ಬಿಡಬೇಕು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಸಾಧ್ಯವಿದೆ ಎಂಬ ಧನಾತ್ಮಕ ಚಿಂತನೆಯೊಂದಿಗೆ ಮಕ್ಕಳನ್ನು ದಾಖಲಿಸಬೇಕು,'' ಎಂದು ಸಲಹೆ ನೀಡಿದರು.

''ವೆಂಕಟಶೆಟ್ಟಿ ಅವರು ಸರಕಾರಿ ಶಾಲಾ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ. ಅವರ ಶಿಷ್ಯಂದಿರು ಹಲವು ಉನ್ನತ ಹುದ್ದೆ ಅಲಂಕರಿಸಿ, ಶಾಲೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ,'' ಎಂದು ಬಣ್ಣಿಸಿದರು.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಯ್ಯ ಮಾತನಾಡಿ, ''ಶಿಕ್ಷಕರು ಮಕ್ಕಳ ಜತೆಗೆ ತುಂಬಾ ಲವಲವಿಕೆಯಿಂದ ಇದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಆ ನಿಟ್ಟಿನಲ್ಲಿ ವೆಂಕಟಶೆಟ್ಟಿ ಅವರು ಮಕ್ಕಳೊಂದಿಗೆ ಕಲೆತು ಉತ್ತಮ ಹೆಸರು ಪಡೆದಿದ್ದಾರೆ. ಇಂತಹವರಿಂದ ಸರಕಾರಿ ಶಾಲೆಗಳು ಉಳಿಯುವ ಜತೆಗೆ ಗುಣಾತ್ಮಕ ಶಿಕ್ಷಣ ಕೊಡಲು ಸಹಕಾರಿಯಾಗುತ್ತದೆ,'' ಎಂದರು.

ಭಾರತ ಸೇವಾದಳದ ಜಿಲ್ಲಾ ಕಾರ‍್ಯದರ್ಶಿ ಜಿ.ವಿ.ನಾಗರಾಜು ಮಾತನಾಡಿ, ''ಸರಕಾರಿ ಶಾಲೆ ಹಾಗೂ ಶಿಕ್ಷಕರು ಉತ್ತಮ ಅರ್ಹತೆ ಹೊಂದಿದವರು. ಅತ್ಯುತ್ತಮ ತರಬೇತಿ ಪಡೆದವರು. ಆದರೂ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮಕ್ಕಳ ದಾಖಲಾತಿ ಹೆಚ್ಚಿಸಲು ಶ್ರಮಿಸಬೇಕಿದೆ,'' ಎಂದರು.

ಇದೇ ವೇಳೆ ಮಂಡ್ಯ ದಕ್ಷಿಣ ವಲಯ ಕ್ಷೇತ್ರ ಸಮನ್ವಯಾಧಿಧಿಕಾರಿ ಡಾ.ಸಿ.ಆರ್‌.ಚಂದ್ರಶೇಖರ್‌, ಹೊಸಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷ ಕ ವೆಂಕಟಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಬಿ.ಗೌಡಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷ ಕ ಲಿಂಗರಾಜು, ಶಿಕ್ಷ ಕರಾದ ಲಿಂಗರಾಜು, ಎಂ.ಎನ್‌.ಜ್ಯೋತಿ, ವಿಜಯ್‌, ಕೆ.ಎಸ್‌.ಹರೀಶ್‌, ಕೆ.ಎಂ.ಬಸವರಾಜ್‌, ಬಿ.ಪಾಪಯ್ಯ, ಕೆ.ಬಿ.ನಾಗರಾಜು, ಕೆ.ಬಿ.ಮಹೇಂದ್ರ, ಶೋಭಾ, ಸುಕನ್ಯಾಸಂಗಳ್‌, ಲಿಂಗರಾಜು, ಮಹಮದ್‌ ಜಿಯಾವುಲ್ಲಾ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ