ಆ್ಯಪ್ನಗರ

ನಾಯಿ ದಾಳಿಗೆ ಕುದುರೆ ಮರಿ ಸಾವು: ಕಲ್ಲೆದೆ ಕರಗಿಸುತ್ತೆ'ಅಮ್ಮ'ನ ಕಣ್ಣೀರು

ಮಂಡ್ಯದಲ್ಲಿ ಶ್ವಾನಗಳ ದಾಳಿಯಿಂದ ತನ್ನ ಮರಿ ಸಾವಿಗೀಡಾದ ಹಿನ್ನೆಲೆಯಲ್ಲಿ ದಿಕ್ಕು ತೋಚದಂತಾದ ತಾಯಿ ಕುದುರೆ ಸುಮಾರು 5 ಗಂಟೆಗಳ ಕಾಲ ಮರಿಯ ಮೃತದೇಹದ ಮುಂದೆ ನಿಂತು ರೋದಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

Vijaya Karnataka Web 23 Dec 2019, 3:30 pm
ಮಂಡ್ಯ : ಶ್ವಾನಗಳ ದಾಳಿಯಿಂದ ತನ್ನ ಮರಿ ಸಾವಿಗೀಡಾದ ಹಿನ್ನೆಲೆಯಲ್ಲಿ ದಿಕ್ಕು ತೋಚದಂತಾದ ತಾಯಿ ಕುದುರೆ ಸುಮಾರು 5 ಗಂಟೆಗಳ ಕಾಲ ಮರಿಯ ಮೃತದೇಹದ ಮುಂದೆ ನಿಂತು ರೋದಿಸಿದ ಮನ ಕಲಕುವ ಘಟನೆ ಶ್ರೀರಂಗಪಟ್ಟಣದ ಗಂಜಾಮ್ನಲ್ಲಿ ನಡೆದಿದೆ.
Vijaya Karnataka Web horse


ತಾಯಿ ಪ್ರೀತಿ ಮುಂದೆ ಎಲ್ಲವೂ ನಶ್ವರ. ಅದರಲ್ಲೂ ಪ್ರಾಣಿಗಳ ಪ್ರೀತಿ ಮುಂದೆ ಮಾನವನು ಕೂಡ ಕಣ್ಣೀರು ಹಾಕಬೇಕು. ಶ್ವಾನಗಳ ದಾಳಿಗೆ ತನ್ನ ಮರಿ ಸಾವಿಗೀಡಾದ ನೋವಿನಿಂದ ಹೊರ ಬರಲಾಗದೆ ಕುದುರೆಯು ನೋವು ಅನುಭವಿಸುತ್ತಿದ್ದನ್ನು ನೋಡಿದ ಜನ ಕೂಡ ಮರುಕ ವ್ಯಕ್ತಪಡಿಸಿದರು.

ಗ್ರಾಮದ ಟಬು ಎಂಬುವರು ಸಾಕಿದ್ದ ಕುದುರೆ ಹಾಗೂ ಅದರ ಮರಿಯನ್ನು ರಾತ್ರಿ ಮನೆಯ ಮುಂದೆ ಕಟ್ಟಲಾಗಿತ್ತು. ಆದರೆ ನಾಯಿಗಳ ಹಿಂಡು ಕುದುರೆ ಮರಿಯನ್ನು ಎಳೆದೊಯ್ದು ಕಚ್ಚಿ ಕೊಂದು ಹಾಕಿವೆ. ತನ್ನ ಮರಿಯ ಸಾವಿನಿಂದ ಕಂಗಾಲಾದ ತಾಯಿ ಕುದುರೆ ಮೃತ ಮರಿ ಕುದುರೆ ಮುಂದೆ ನಿಂತು ಮೂಕ ರೋದನೆ ಅನುಭವಿಸಿದೆ.

ಮಾತ್ರವಲ್ಲ ಸ್ಥಳದಲ್ಲಿದ್ದ ಶ್ವಾನಗಳ ಹಿಂಡನ್ನು ಓಡಿಸಿ ಕಳೇಬರದ ಬಳಿ ತೆರಳಲು ಯಾರಿಗೂ ಅವಕಾಶ ಕೊಡದೆ ಕಣ್ಣೀರು ಹಾಕುತ್ತಿದ್ದ ತಾಯಿ ಕುದುರೆ ಸ್ಥಿತಿ ಕಂಡು ಸ್ಥಳೀಯರು ಕಂಬಿನಿ ಮಿಡಿದಿದ್ದಾರೆ. ಜತೆಗೆ ಬೀದಿ ನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ