ಆ್ಯಪ್ನಗರ

ನೇತ್ರ ದಾನದಿಂದ ಅಂಧರ ಬಾಳು ಬೆಳಕು

ವಿಕ ಸುದ್ದಿಲೋಕ ಮಂಡ್ಯ ಸತ್ತ ನಂತರ ಬೂದಿಯಾಗುವ ನೇತ್ರಗಳನ್ನು ದಾನ ಮಾಡುವ ಮೂಲಕ ಅಂಧರ ಬದುಕಿಗೆ ಬೆಳಕಾಗಬೇಕು ಎಂದು ಕೃಷಿಕ ಲಯನ್ಸ್‌ ಕ್ಲಬ್‌ನ ಕೆಟಿಹನುಮಂತು ಸಲಹೆ ನೀಡಿದರು...

Vijaya Karnataka 17 Oct 2018, 5:00 am
ಮಂಡ್ಯ: ಸತ್ತ ನಂತರ ಬೂದಿಯಾಗುವ ನೇತ್ರಗಳನ್ನು ದಾನ ಮಾಡುವ ಮೂಲಕ ಅಂಧರ ಬದುಕಿಗೆ ಬೆಳಕಾಗಬೇಕು ಎಂದು ಕೃಷಿಕ ಲಯನ್ಸ್‌ ಕ್ಲಬ್‌ನ ಕೆ.ಟಿ.ಹನುಮಂತು ಸಲಹೆ ನೀಡಿದರು.
Vijaya Karnataka Web donation of the eye awareness program in mandya
ನೇತ್ರ ದಾನದಿಂದ ಅಂಧರ ಬಾಳು ಬೆಳಕು


ನಗರದ ಬನ್ನೂರು ರಸ್ತೆಯಲ್ಲಿರುವ ಧನ್ವಂತರಿ ಮೆಡಿಕಲ್ಸ್‌ ಆವರಣದಲ್ಲಿ ಸ್ಯಾಂಜ್ಯೋ ಆಸ್ಪತ್ರೆ, ಕೃಷಿಕ ಲಯನ್ಸ್‌ ಕ್ಲಬ್‌ ಮತ್ತು ನಂಜಮ್ಮ ಮೋಟೇಗೌಡ ಚಾರಿಟಬಲ್‌ ಟ್ರಸ್ಟ್‌ ಸಹಯೋಗದಲ್ಲಿ ನಡೆದ ಕಣ್ಣಿನ ಉಧಿಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಪಂಚದ ಶೇ.51ರಷ್ಟು ಜನರಿಗೆ ಕಣ್ಣಿನ ಪೊರೆ ಸಮಸ್ಯೆಯಿದೆ. ಆದರೆ, ನಮ್ಮ ದೇಶದಲ್ಲಿ ಶೇ.81ರಷ್ಟು ಜನರು ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಜನರು ಕಣ್ಣಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ನೇತ್ರ ತಜ್ಞ ಡಾ.ಧನಂಜಯ ಮಾತನಾಡಿ, ಕಣ್ಣಿನ ತಪಾಸಣೆ ಶಿಬಿರಗಳು ಎಲ್ಲೆಡೆ ನಡೆಯುತ್ತಿವೆ. ಆದರೆ, ಮುಖ್ಯವಾಗಿ ಜನರಲ್ಲಿ ಕಣ್ಣಿನ ಕಾಯಿಲೆ ಬಗ್ಗೆ ಅರಿವು ಇರಬೇಕು. ಆಗ ಮುಂದಿನ ಅನಾಹುತಗಳನ್ನು ತಡೆಯಬಹುದು ಎಂದು ತಿಳಿಸಿದರು.

ಸಕ್ಕರೆ ಕಾಯಿಲೆ ರೋಗಿಗಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚು, ಅಂತಹ ರೋಗಿಗಳು ಕಾಲ ಕಾಲಕ್ಕೆ ಚಿಕಿತ್ಸೆ ಪಡೆಯಬೇಕು. ಶೇ.70ರಷ್ಟು ಸಕ್ಕರೆ ಖಾಯಿಲೆ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ತಿಳುವಳಿಕೆ ಇಲ್ಲದೆ ಕಣ್ಣು ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು. ಮೋಹನ್‌ಕುಮಾರ್‌, ಬಸವರಾಜು ಮತ್ತು ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ