ಮಂಡ್ಯ: ಜೀವ ವೈವಿಧ್ಯದ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮೂಡಿಸುವುದು ಹಾಗೂ ಆ ಮೂಲಕ ಜೀವವೈವಿಧ್ಯ ಸಂರಕ್ಷಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಯಾಲಕ್ಕಿಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೀವ ವೈವಿಧ್ಯತೆಯನ್ನು ಕಾಪಾಡಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಜೀವ ವೈವಿಧ್ಯಗಳ ಬೆಳೆಯುವ ವಿಧಾನ, ತಾಂತ್ರಿಕತೆಯನ್ನು ಜನರಿಗೆ ತಿಳಿಸಿಕೊಡಬೇಕು. ಇದರಿಂದ ರೈತರ ಅಭಿವೃದ್ಧಿ ಜತೆಗೆ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಇದರ ಬಗ್ಗೆ ರೈತರಿಗೆ ಅರಿವಿಲ್ಲದ ಕಾರಣ ಪರಿಣಾಮಕಾರಿಯಾಗಿ ಕೃಷಿಯಲ್ಲಿ ಜಾರಿಯಾಗಿಲ್ಲ. ರೈತರು ಇನ್ನೂ ಸಾಂಪ್ರದಾಯಿಕ ಬೆಳೆಗಳಿಗೆ ಮಾರುಹೋಗಿ ಸಂಕಷ್ಟದಿಂದ ಹೊರಬರಲಾರದೇ ಪರಿತಪಿಸುತ್ತಿದ್ದಾರೆ ಎಂದು ಹೇಳಿದರು.
ಸ್ಥಳೀಯವಾಗಿ ದೊರೆಯುವ ಕಚ್ಛಾ ವಸ್ತುಗಳ ಸಾಮಗ್ರಿಗಳನ್ನು ಬಳಸಿಕೊಂಡು ಕರಕಶಲ ವಸ್ತುಗಳನ್ನು ತಯಾರಿಸಿ ಹಣ ಗಳಿಸಬಹುದು. ಈ ಮೂಲಕ ಸ್ವ ಉದ್ಯೋಗವನ್ನು ಆರಂಭಿಸಬಹುದು. ಔಷಧೀಯ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಬೆಳೆಯುವುದು ಉತ್ತಮ. ಪಪ್ಪಾಯದಲ್ಲಿ ಔಷಧೀಯ ಗುಣವಿದೆ. ಸಾಕಷ್ಟು ಬೇಡಿಕೆಯೂ ಇದೆ. ಅವುಗಳನ್ನು ರೈತರು ಬೆಳೆಯುವುದರಿಂದ ಆರ್ಥಿಕವಾಗಿ ಸದೃಢತೆ ಸಾಧಿಸಬಹುದು ಎಂದು ತಿಳಿಸಿದರು.
ಶ್ರೀಗಂಧ ಪ್ರತಿ ಕೆಜಿಗೆ 16 ಸಾವಿರ ರೂ. ಇದೆ. ರಕ್ತಚಂದನಕ್ಕೆ ಶ್ರೀಗಂಧಕ್ಕಿಂತಲೂ ಹೆಚ್ಚಿನ ಬೇಡಿಕೆ ಇದೆ. ಸುಗಂಧ ದ್ರವ್ಯಗಳನ್ನು ತಯಾರಿಸುವುದಕ್ಕೆ ಹೆಚ್ಚು ಬಳಕೆ ಮಾಡುವರು. ಅದೇ ರೀತಿ ಅಣಬೆ ಬೆಳೆಯುವುದರಿಂದಲೂ ಆದಾಯ ಗಳಿಸುವ ಅವಕಾಶವಿದೆ. ಅಣಬೆಯಿಂದ ಹಪ್ಪಳ, ಬ್ರೆಡ್, ಸಂಡಿಗೆ ಸೇರಿದಂತೆ ನಾನಾ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಇವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಇಂತಹ ಜೀವ ವೈವಿಧ್ಯಗಳು ರೈತರಿಗೆ ಹೆಚ್ಚಿನ ಹಣವನ್ನು ತಂದುಕೊಡುತ್ತವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ನಿವೃತ್ತ ವಲಯ ಅರಣ್ಯಾಧಿಕಾರಿ ಹುಚ್ಚಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಬಾಸುಮತಿ ಅಕ್ಕಿ, ಅರಿಶಿನ ಬೆಳೆಯುವುದಕ್ಕೆ ಅನುಕೂಲಕರವಾದ ವಾತಾವರಣವಿದೆ. ಇವೆರಡಕ್ಕೂ ಸಾಕಷ್ಟು ಬೇಡಿಕೆ, ಪೂರಕವಾದ ಮಾರುಕಟ್ಟೆಯಿದೆ. ಆದರೆ, ಶುಂಠಿ, ಚೆಂಡು ಹೂವನ್ನು ಯಾವ ಕಾರಣಕ್ಕೂ ಯಥೇಚ್ಛ ಪ್ರಮಾಣದಲ್ಲಿ ಬೆಳೆಯಬೇಡಿ. ಇದರಿಂದ ಭೂಮಿಯ ಸಾರ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಶುಂಠಿ ಬೆಳೆಯುವ ಜಾಗದಲ್ಲಿ ಮತ್ತ್ಯಾವುದೇ ಬೆಳೆಯನ್ನು ಬೆಳೆಯಲಾಗುವುದಿಲ್ಲ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಚೆಂಡುಹೂವನ್ನು ಬಣ್ಣ ತಯಾರಿಕೆ ಹಾಗೂ ಕೆಲವೊಂದು ಔಷಧಕ್ಕೆ ಬಳಕೆ ಮಾಡುವರು. ಇದನ್ನೂ ಯಥೇಚ್ಛವಾಗಿ ವಿಸ್ತಾರವಾದ ಪ್ರದೇಶದಲ್ಲಿ ಬೆಳೆಯಬಾರದು. ಅರಿಶಿನ ಯಥೇಚ್ಛ ಔಷಧೀಯ ಗುಣವನ್ನು ಹೊಂದಿರುವ ಜೀವ ವೈವಿಧ್ಯ. ಇದನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಅರಿಶಿನ ಅಧಿಕ ನೀರನ್ನು ಬೇಡುತ್ತದೆ. ನೀರಾವರಿ ಆಶ್ರಿತ ಪ್ರದೇಶದ ಜನರು ಭತ್ತ, ಕಬ್ಬು ಸೇರಿದಂತೆ ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟು ಇದನ್ನು ಹೆಚ್ಚಾಗಿ ಬೆಳೆಯಬಹುದು ಎಂದು ಸಲಹೆ ನೀಡಿದರು.
ಜೀವ ವೈವಿಧ್ಯಗಳ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಅನುಕೂಲವಾಗುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಔಷಧೀಯ ಸಸ್ಯಗಳು, ಜೀವ ವೈವಿಧ್ಯ ಸಸಿಗಳನ್ನು ನೆಟ್ಟಿಬೆಳೆಸಲು ನೆರವು ನೀಡಲಾಗುತ್ತಿದೆ. ಇದನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕೆಂದು ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಜಿಪಂ ಉಪ ಕಾರ್ಯದರ್ಶಿ ಡಾ.ಕೃಷ್ಣಂರಾಜು, ಜಿಪಂ ಯೋಜನಾ ನಿರ್ದೇಶಕ ಗಣಪತಿ ಸಿ.ನಾಯಕ್ ಹಾಜರಿದ್ದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೀವ ವೈವಿಧ್ಯತೆಯನ್ನು ಕಾಪಾಡಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಜೀವ ವೈವಿಧ್ಯಗಳ ಬೆಳೆಯುವ ವಿಧಾನ, ತಾಂತ್ರಿಕತೆಯನ್ನು ಜನರಿಗೆ ತಿಳಿಸಿಕೊಡಬೇಕು. ಇದರಿಂದ ರೈತರ ಅಭಿವೃದ್ಧಿ ಜತೆಗೆ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಇದರ ಬಗ್ಗೆ ರೈತರಿಗೆ ಅರಿವಿಲ್ಲದ ಕಾರಣ ಪರಿಣಾಮಕಾರಿಯಾಗಿ ಕೃಷಿಯಲ್ಲಿ ಜಾರಿಯಾಗಿಲ್ಲ. ರೈತರು ಇನ್ನೂ ಸಾಂಪ್ರದಾಯಿಕ ಬೆಳೆಗಳಿಗೆ ಮಾರುಹೋಗಿ ಸಂಕಷ್ಟದಿಂದ ಹೊರಬರಲಾರದೇ ಪರಿತಪಿಸುತ್ತಿದ್ದಾರೆ ಎಂದು ಹೇಳಿದರು.
ಸ್ಥಳೀಯವಾಗಿ ದೊರೆಯುವ ಕಚ್ಛಾ ವಸ್ತುಗಳ ಸಾಮಗ್ರಿಗಳನ್ನು ಬಳಸಿಕೊಂಡು ಕರಕಶಲ ವಸ್ತುಗಳನ್ನು ತಯಾರಿಸಿ ಹಣ ಗಳಿಸಬಹುದು. ಈ ಮೂಲಕ ಸ್ವ ಉದ್ಯೋಗವನ್ನು ಆರಂಭಿಸಬಹುದು. ಔಷಧೀಯ ಗಿಡಮೂಲಿಕೆಗಳ ಬಗ್ಗೆ ಅರಿವು ಮೂಡಿಸಿಕೊಂಡು ಬೆಳೆಯುವುದು ಉತ್ತಮ. ಪಪ್ಪಾಯದಲ್ಲಿ ಔಷಧೀಯ ಗುಣವಿದೆ. ಸಾಕಷ್ಟು ಬೇಡಿಕೆಯೂ ಇದೆ. ಅವುಗಳನ್ನು ರೈತರು ಬೆಳೆಯುವುದರಿಂದ ಆರ್ಥಿಕವಾಗಿ ಸದೃಢತೆ ಸಾಧಿಸಬಹುದು ಎಂದು ತಿಳಿಸಿದರು.
ಶ್ರೀಗಂಧ ಪ್ರತಿ ಕೆಜಿಗೆ 16 ಸಾವಿರ ರೂ. ಇದೆ. ರಕ್ತಚಂದನಕ್ಕೆ ಶ್ರೀಗಂಧಕ್ಕಿಂತಲೂ ಹೆಚ್ಚಿನ ಬೇಡಿಕೆ ಇದೆ. ಸುಗಂಧ ದ್ರವ್ಯಗಳನ್ನು ತಯಾರಿಸುವುದಕ್ಕೆ ಹೆಚ್ಚು ಬಳಕೆ ಮಾಡುವರು. ಅದೇ ರೀತಿ ಅಣಬೆ ಬೆಳೆಯುವುದರಿಂದಲೂ ಆದಾಯ ಗಳಿಸುವ ಅವಕಾಶವಿದೆ. ಅಣಬೆಯಿಂದ ಹಪ್ಪಳ, ಬ್ರೆಡ್, ಸಂಡಿಗೆ ಸೇರಿದಂತೆ ನಾನಾ ರೀತಿಯ ತಿನಿಸುಗಳನ್ನು ತಯಾರಿಸಬಹುದು. ಇವುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಇದೆ. ಇಂತಹ ಜೀವ ವೈವಿಧ್ಯಗಳು ರೈತರಿಗೆ ಹೆಚ್ಚಿನ ಹಣವನ್ನು ತಂದುಕೊಡುತ್ತವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ನಿವೃತ್ತ ವಲಯ ಅರಣ್ಯಾಧಿಕಾರಿ ಹುಚ್ಚಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಬಾಸುಮತಿ ಅಕ್ಕಿ, ಅರಿಶಿನ ಬೆಳೆಯುವುದಕ್ಕೆ ಅನುಕೂಲಕರವಾದ ವಾತಾವರಣವಿದೆ. ಇವೆರಡಕ್ಕೂ ಸಾಕಷ್ಟು ಬೇಡಿಕೆ, ಪೂರಕವಾದ ಮಾರುಕಟ್ಟೆಯಿದೆ. ಆದರೆ, ಶುಂಠಿ, ಚೆಂಡು ಹೂವನ್ನು ಯಾವ ಕಾರಣಕ್ಕೂ ಯಥೇಚ್ಛ ಪ್ರಮಾಣದಲ್ಲಿ ಬೆಳೆಯಬೇಡಿ. ಇದರಿಂದ ಭೂಮಿಯ ಸಾರ ನಾಶವಾಗುತ್ತದೆ ಎಂದು ಎಚ್ಚರಿಸಿದರು.
ಶುಂಠಿ ಬೆಳೆಯುವ ಜಾಗದಲ್ಲಿ ಮತ್ತ್ಯಾವುದೇ ಬೆಳೆಯನ್ನು ಬೆಳೆಯಲಾಗುವುದಿಲ್ಲ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಚೆಂಡುಹೂವನ್ನು ಬಣ್ಣ ತಯಾರಿಕೆ ಹಾಗೂ ಕೆಲವೊಂದು ಔಷಧಕ್ಕೆ ಬಳಕೆ ಮಾಡುವರು. ಇದನ್ನೂ ಯಥೇಚ್ಛವಾಗಿ ವಿಸ್ತಾರವಾದ ಪ್ರದೇಶದಲ್ಲಿ ಬೆಳೆಯಬಾರದು. ಅರಿಶಿನ ಯಥೇಚ್ಛ ಔಷಧೀಯ ಗುಣವನ್ನು ಹೊಂದಿರುವ ಜೀವ ವೈವಿಧ್ಯ. ಇದನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಅರಿಶಿನ ಅಧಿಕ ನೀರನ್ನು ಬೇಡುತ್ತದೆ. ನೀರಾವರಿ ಆಶ್ರಿತ ಪ್ರದೇಶದ ಜನರು ಭತ್ತ, ಕಬ್ಬು ಸೇರಿದಂತೆ ಸಾಂಪ್ರದಾಯಿಕ ಬೆಳೆಗಳನ್ನು ಕೈಬಿಟ್ಟು ಇದನ್ನು ಹೆಚ್ಚಾಗಿ ಬೆಳೆಯಬಹುದು ಎಂದು ಸಲಹೆ ನೀಡಿದರು.
ಜೀವ ವೈವಿಧ್ಯಗಳ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಅನುಕೂಲವಾಗುವಂತೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿಂದ ಜಿಲ್ಲಾ ಪಂಚಾಯಿತಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ಔಷಧೀಯ ಸಸ್ಯಗಳು, ಜೀವ ವೈವಿಧ್ಯ ಸಸಿಗಳನ್ನು ನೆಟ್ಟಿಬೆಳೆಸಲು ನೆರವು ನೀಡಲಾಗುತ್ತಿದೆ. ಇದನ್ನು ರೈತರು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕ ಪ್ರಗತಿ ಸಾಧಿಸಬೇಕೆಂದು ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಜಿಪಂ ಉಪ ಕಾರ್ಯದರ್ಶಿ ಡಾ.ಕೃಷ್ಣಂರಾಜು, ಜಿಪಂ ಯೋಜನಾ ನಿರ್ದೇಶಕ ಗಣಪತಿ ಸಿ.ನಾಯಕ್ ಹಾಜರಿದ್ದರು.