ಆ್ಯಪ್ನಗರ

ಸಾಸಲು ಗ್ರಾಮದಲ್ಲಿ ಸಗಣಿ ಓಕುಳಿ ಸಂಭ್ರಮ

ಹೋಬಳಿಯ ಸಾಸಲು ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಗಣಿ ಓಕುಳಿ(ತೊಪ್ಪೆ) ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

Vijaya Karnataka 9 Nov 2018, 9:44 pm
ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಗಣಿ ಓಕುಳಿ(ತೊಪ್ಪೆ) ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
Vijaya Karnataka Web dung to celebrate okuli
ಸಾಸಲು ಗ್ರಾಮದಲ್ಲಿ ಸಗಣಿ ಓಕುಳಿ ಸಂಭ್ರಮ


ದೀಪಾವಳಿ ಹಬ್ಬದ ಮೂರು ದಿನಗಳ ಮುಂಚೆಯಿಂದಲೇ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ದೀಪಾವಳಿ ಹಬ್ಬದ ದಿನದ ಬೆಳಗ್ಗೆ 4ರಿಂದ ದೇವಾಲಯದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾಯಿತು. ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಬುಲಿಂಗೇಶ್ವರ ಅವಳಿ ದೇವಾಲಯದಲ್ಲಿ ರುದ್ರಾಭಿಷೇಕ, ಪಂಚಾಮತ ಅಭಿಷೇಕ ನೆರವೇರಿಸಿ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಯಿತು. ಮಧ್ಯಾಹ್ನ 3 ನಂತರ ವಿಶೇಷ ಪೂಜೆ ನೆರವೇರಿಸಿ ಭಕ್ತ ದರ್ಶನಕ್ಕೆ ಅನುಕೂಲ ಮಾಡಿಕೊಡಲಾಯಿತು.

ನಂತರ ಸೋಮೇಶ್ವರ ದೇವರ ಪ್ರತಿನಿಧಿಯಾಗಿ ಶ್ರೀಸೋಮೇಶ್ವರ ದೇವರ ಅರ್ಚಕರು 12ವರ್ಷ ಮೀರದ ಮಗುವನ್ನು ಆಯ್ಕೆ ಮಾಡಿ ಮಾಣಿಕಶೆಟ್ಟಿ (ಕತ್ತೆ)ಮೇಲೆ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತಾದೆ ನಂತರ ರಂಗ ಸ್ಥಳದಲ್ಲಿ ಸಂಪನ್ನವಾಗುತ್ತದೆ ನಂತರ ಸಗಣಿ ಓಕುಳಿ ನಡೆಯಿತು.

ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಭುಲಿಂಗೇಶ್ವರ ಭಕ್ತರಾದ ವೀರಶೈವ ಲಿಂಗಾಯುತ ಸಮುದಾಯದ ಯುವಕರು ಹಾಗೂ ಶ್ರೀಭೈರವ ರಾಜನ ಭಕ್ತರಾದ ಹಾಲುಮತದ ಕುರುಬ ಸಮುದಾಯದ ಜನರು ಒಂದೆಡೆ ಸೇರಿ ರಂಗಸ್ಥಳದಲ್ಲಿ ಎರಡು ಬದಿಯಲ್ಲಿ ಹಸುವಿನ ಸಗಣಿಯನ್ನು ಮೊದಲು ಚೆನ್ನಾಗಿ ಹದ ಮಾಡುತ್ತಾರೆ. ನಂತರ ಉಂಡೆಗಾತ್ರವಾಗಿ ಮಾಡಿ ನಂತರ ಶುಭ ಮುಹೂರ್ತದಲ್ಲಿ ಗುರು ಹಿರಿಯರು ಗ್ರಾಮದ ಪ್ರಮುಖರು ಹೇಳಿದ ನಂತರ ಎರಡು ಬದಿಯ ಯುವಕರು ಸಗಣಿ ಉಂಡೆಗಳಿಂದ ಹೊಡೆದಾಡುವುದೇ ಸಂಪ್ರದಾಯವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ಶ್ರೀಭೈರವರಾಜನ ಭಕ್ತರು ಸಗಣಿ ಓಕುಳಿಯಲ್ಲಿ ಗೆದ್ದರು. ಬಳಿಕ ಕಲ್ಯಾಣಿಯಲ್ಲಿ ಶುಚಿ ಭೂತರಾಗಿ ಶ್ರೀ ಸೋಮೇಶ್ವರ ಹಾಗೂ ಶ್ರೀ ಶಂಭುಲಿಂಗೇಶ್ವರ ದೇವಾಯದಲ್ಲಿ ಪೂಜೆ ಸಲ್ಲಿಸಿ ಸಗಣಿ ಓಕುಳಿ ಹಬ್ಬಕ್ಕೆ ಅಂತ್ಯವಾಡಿದರು.

ಈ ಕಾರ‌್ಯಕ್ರಮದಲ್ಲಿ ಗ್ರಾಮದ ಯುವಕರು, ಹಿರಿಯರು ಭಾಗವಹಿಸಿ ಸಂತಸ ಪಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ