ಹೆಬ್ಬಕವಾಡಿ ಹಾಲು ಉತ್ಪಾದಕ ಸಹಕಾರ ಸಂಘದ ಕಟ್ಟಡ ಉದ್ಘಾಟನೆ
ಮಂಡ್ಯ: ಮನ್ಮುಲ್ ನಿತ್ಯ 10 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಮನ್ಮುಲ್ ವ್ಯವಸ್ಥಾಪಕ ಡಾ.ವಿವೇಕಾನಂದ ಶೆಟ್ಟಿ ತಿಳಿಸಿದರು.
ತಾಲೂಕಿನ ಹೆಬ್ಬಕವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮೊದಲ ಸ್ಥಾನದಲ್ಲಿದೆ. ನಿತ್ಯ 10 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮನ್ಮುಲ್ 10 ದಿನಕ್ಕೆ 25 ಕೋಟಿ ರೂ.ಗಳಂತೆ ತಿಂಗಳಿಗೆ 75 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡುತ್ತಿದೆ. ಗುಣಮಟ್ಟದ ಹಾಲಿಗೆ ಪ್ರತಿ ಲೀಟರ್ಗೆ 23.50 ರೂ.ನಿಂದ 24 ರೂ.ವರೆಗೆ ನೀಡಲಾಗುತ್ತಿದೆ. ಆದರೂ ಕೆಲವರು ಒಕ್ಕೂಟಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪಶು ಆಹಾರದಲ್ಲಿ ಸಬ್ಸಿಡಿ, ಮೃತ ಹಾಲು ಉತ್ಪಾದಕರಿಗೆ ನೆರವು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನ್ಮುಲ್ ರಾಸುಗಳ ವಿಮಾ ಯೋಜನೆ ಜಾರಿಗೆ ತಂದಿದೆ. ಕಳೆದ ಮೂರು ವರ್ಷಗಳಿಂದ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಈ ಸಾಲಿನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ 60 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ರಾಸುಗಳು ಮೃತಪಟ್ಟ ಸಂದರ್ಭದಲ್ಲಿ 40 ಸಾವಿರ ರೂ.ಗಳಿಗೂ ಹೆಚ್ಚು ಹಣ ಉತ್ಪಾದಕರಿಗೆ ದೊರಕಲಿದೆ ಎಂದು ಹೇಳಿದರು.
ಹೆಬ್ಬಕವಾಡಿಯಲ್ಲಿ ಸುಂದರವಾದ ಕಟ್ಟಡ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಇಂತಹ ಕಟ್ಟಡ ನಿರ್ಮಿಸಿಲ್ಲ. ಒಕ್ಕೂಟದಿಂದ ದೊರಕುವ ಸಹಾಯವನ್ನು ಸಂಘಕ್ಕೆ ಒದಗಿಸಲಾಗುವುದು ಎಂದರು.
ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, 22 ಲಕ್ಷ ರೂ. ಅಂದಾಜು ವೆಚ್ಚ ತಯಾರಿಸಿ, ಅದರಲ್ಲಿ 4 ಲಕ್ಷ ಹಣ ಉಳಿಸಿ, 18 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಪೂರ್ಣಗೊಳಿಸಲಾಗಿದೆ. ಹಾಲು ಉತ್ಪಾದಕರ ಸಂಘದ ನಿರ್ದೇಶಕರೇ ಮುಂದೆ ನಿಂತು ಸಂಘದ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಲು ಉತ್ಪಾದಕರ ಸಂಘಗಳು ಹಾಲು ಉತ್ಪಾದಕರು ಹಾಗೂ ರೈತರಿಗೆ ಅತ್ಯಂತ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿವೆ. ಹೆಬ್ಬಕವಾಡಿ ಮಂಡ್ಯ ತಾಲೂಕಿನ ಕೊನೆಯ ಗ್ರಾಮವಾಗಿದ್ದು, ಇಲ್ಲಿ ಬಿಎಂಸಿ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಹೇಳಿದರು. ಹೆಬ್ಬಕವಾಡಿ ಹಾಲಿನ ಡೇರಿ ಅಧ್ಯಕ್ಷ ಎಚ್.ಎಂ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಸ್.ಪಿ.ಮಹೇಶ್, ಯು.ಸಿ.ಶಿವಕುಮಾರ್, ಬಿ.ಚಂದ್ರು, ಉಪ ವ್ಯವಸ್ಥಾಪಕರಾದ ಎಂ.ಶ್ರೀನಿವಾಸರೆಡ್ಡಿ, ವಿಸ್ತರಣಾಧಿಕಾರಿಗಳಾದ ಎ.ಎಸ್.ಸಿದ್ದರಾಜು, ಸಿಇಓ ಎಚ್.ಎಂ.ಲೋಕೇಶ್, ಹಾಲು ಪರೀಕ್ಷಕ ಮಲ್ಲೇಶ್, ಸಹಾಯಕರಾದ ಸಿದ್ದೇಗೌಡ, ಎಚ್.ಆರ್.ನಾಗೇಂದ್ರ ಸೇರಿದಂತೆ ಸಂಘದ ನಿರ್ದೇಶಕರು ಭಾಗವಹಿಸಿದ್ದರು.
ಮಂಡ್ಯ: ಮನ್ಮುಲ್ ನಿತ್ಯ 10 ಲಕ್ಷ ಲೀಟರ್ ಹಾಲು ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದೆ ಎಂದು ಮನ್ಮುಲ್ ವ್ಯವಸ್ಥಾಪಕ ಡಾ.ವಿವೇಕಾನಂದ ಶೆಟ್ಟಿ ತಿಳಿಸಿದರು.
ತಾಲೂಕಿನ ಹೆಬ್ಬಕವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮೇಲಂತಸ್ತಿನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದ 14 ಹಾಲು ಒಕ್ಕೂಟಗಳ ಪೈಕಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮೊದಲ ಸ್ಥಾನದಲ್ಲಿದೆ. ನಿತ್ಯ 10 ಲಕ್ಷ ಲೀಟರ್ ಹಾಲು ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮನ್ಮುಲ್ 10 ದಿನಕ್ಕೆ 25 ಕೋಟಿ ರೂ.ಗಳಂತೆ ತಿಂಗಳಿಗೆ 75 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡುತ್ತಿದೆ. ಗುಣಮಟ್ಟದ ಹಾಲಿಗೆ ಪ್ರತಿ ಲೀಟರ್ಗೆ 23.50 ರೂ.ನಿಂದ 24 ರೂ.ವರೆಗೆ ನೀಡಲಾಗುತ್ತಿದೆ. ಆದರೂ ಕೆಲವರು ಒಕ್ಕೂಟಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ಕಟ್ಟಡ ಉದ್ಘಾಟಿಸಿ ಮಾತನಾಡಿ, ಹಾಲು ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪಶು ಆಹಾರದಲ್ಲಿ ಸಬ್ಸಿಡಿ, ಮೃತ ಹಾಲು ಉತ್ಪಾದಕರಿಗೆ ನೆರವು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಮನ್ಮುಲ್ ರಾಸುಗಳ ವಿಮಾ ಯೋಜನೆ ಜಾರಿಗೆ ತಂದಿದೆ. ಕಳೆದ ಮೂರು ವರ್ಷಗಳಿಂದ ರಾಸುಗಳಿಗೆ ವಿಮೆ ಮಾಡಿಸಲಾಗುತ್ತಿದೆ. ಈ ಸಾಲಿನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ 60 ಸಾವಿರಕ್ಕೂ ಹೆಚ್ಚು ರಾಸುಗಳಿಗೆ ವಿಮಾ ಸೌಲಭ್ಯ ಕಲ್ಪಿಸಲಾಗಿದೆ. ರಾಸುಗಳು ಮೃತಪಟ್ಟ ಸಂದರ್ಭದಲ್ಲಿ 40 ಸಾವಿರ ರೂ.ಗಳಿಗೂ ಹೆಚ್ಚು ಹಣ ಉತ್ಪಾದಕರಿಗೆ ದೊರಕಲಿದೆ ಎಂದು ಹೇಳಿದರು.
ಹೆಬ್ಬಕವಾಡಿಯಲ್ಲಿ ಸುಂದರವಾದ ಕಟ್ಟಡ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಎಲ್ಲಿಯೂ ಇಂತಹ ಕಟ್ಟಡ ನಿರ್ಮಿಸಿಲ್ಲ. ಒಕ್ಕೂಟದಿಂದ ದೊರಕುವ ಸಹಾಯವನ್ನು ಸಂಘಕ್ಕೆ ಒದಗಿಸಲಾಗುವುದು ಎಂದರು.
ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, 22 ಲಕ್ಷ ರೂ. ಅಂದಾಜು ವೆಚ್ಚ ತಯಾರಿಸಿ, ಅದರಲ್ಲಿ 4 ಲಕ್ಷ ಹಣ ಉಳಿಸಿ, 18 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ಪೂರ್ಣಗೊಳಿಸಲಾಗಿದೆ. ಹಾಲು ಉತ್ಪಾದಕರ ಸಂಘದ ನಿರ್ದೇಶಕರೇ ಮುಂದೆ ನಿಂತು ಸಂಘದ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಾಲು ಉತ್ಪಾದಕರ ಸಂಘಗಳು ಹಾಲು ಉತ್ಪಾದಕರು ಹಾಗೂ ರೈತರಿಗೆ ಅತ್ಯಂತ ಹೆಚ್ಚಿನ ರೀತಿಯಲ್ಲಿ ಸಹಕಾರಿಯಾಗಿವೆ. ಹೆಬ್ಬಕವಾಡಿ ಮಂಡ್ಯ ತಾಲೂಕಿನ ಕೊನೆಯ ಗ್ರಾಮವಾಗಿದ್ದು, ಇಲ್ಲಿ ಬಿಎಂಸಿ ಕೇಂದ್ರ ತೆರೆಯಲು ಮುಂದಾಗಬೇಕು ಎಂದು ಹೇಳಿದರು. ಹೆಬ್ಬಕವಾಡಿ ಹಾಲಿನ ಡೇರಿ ಅಧ್ಯಕ್ಷ ಎಚ್.ಎಂ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಸ್.ಪಿ.ಮಹೇಶ್, ಯು.ಸಿ.ಶಿವಕುಮಾರ್, ಬಿ.ಚಂದ್ರು, ಉಪ ವ್ಯವಸ್ಥಾಪಕರಾದ ಎಂ.ಶ್ರೀನಿವಾಸರೆಡ್ಡಿ, ವಿಸ್ತರಣಾಧಿಕಾರಿಗಳಾದ ಎ.ಎಸ್.ಸಿದ್ದರಾಜು, ಸಿಇಓ ಎಚ್.ಎಂ.ಲೋಕೇಶ್, ಹಾಲು ಪರೀಕ್ಷಕ ಮಲ್ಲೇಶ್, ಸಹಾಯಕರಾದ ಸಿದ್ದೇಗೌಡ, ಎಚ್.ಆರ್.ನಾಗೇಂದ್ರ ಸೇರಿದಂತೆ ಸಂಘದ ನಿರ್ದೇಶಕರು ಭಾಗವಹಿಸಿದ್ದರು.