ಆ್ಯಪ್ನಗರ

ಧಾರ್ಮಿಕ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತವರ ಕಡೆಯವರು ಅಲ್ಪಸಂಖ್ಯಾತ ಸಮುದಾಯ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈವರೆಗೆ ಮಸೀದಿಗಳು ಮತ್ತು ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದ ಹುರಿಯಾಳುಗಳು ಭಾನುವಾರ ಚರ್ಚ್‌ಗೂ ಕಾಲಿಟ್ಟಿದ್ದರು.

Vijaya Karnataka 15 Apr 2019, 5:00 am
ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತ್ತವರ ಕಡೆಯವರು ಅಲ್ಪಸಂಖ್ಯಾತ ಸಮುದಾಯ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಈವರೆಗೆ ಮಸೀದಿಗಳು ಮತ್ತು ಮುಸ್ಲಿಂ ಮುಖಂಡರ ಮನೆಗಳಿಗೆ ಭೇಟಿ ನೀಡುತ್ತಿದ್ದ ಹುರಿಯಾಳುಗಳು ಭಾನುವಾರ ಚರ್ಚ್‌ಗೂ ಕಾಲಿಟ್ಟಿದ್ದರು.
Vijaya Karnataka Web MDY-MDY14N5


ಪ್ರತಿ ಭಾನುವಾರ ಎಲ್ಲ ಕ್ರೈಸ್ತ ಧರ್ಮೀಯರು ತಪ್ಪದೇ ಚರ್ಚ್‌ ಆಗಮಿಸಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂಬುದನ್ನು ಅರಿತು ಚರ್ಚ್‌ಗಳಲ್ಲಿ ಮತಬೇಟೆ ನಡೆಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತ ಅಂಬರೀಶ್‌ ಮತ್ತು ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರ ಸ್ವಾಮಿ ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರು ಭಾನುವಾರ ಮಂಡ್ಯದಲ್ಲಿನ ಚರ್ಚ್‌ಗಳಿಗೆ ಭೇಟಿ ಕ್ರೈಸ್ತ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸುವ ಜತೆಗೆ ಮತಯÞಚಿಸಿದರು.

ಈ ಮೂಲಕ ಪ್ರತ್ಯೇಕವಾಗಿ ಕ್ರೈಸ್ತ ಧರ್ಮೀಯರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಿದರು. ಮಂಡ್ಯದ ಕ್ರಿಶ್ಚಿಯನ್‌ ಕಾಲನಿಯಲ್ಲಿರುವ ಸಾಡೇ ಸ್ಮಾರಕ ದೇವಾಲಯಕ್ಕೆ ಭೇಟಿ ನೀಡಿದ ಸುಮಲತ ಅಂಬರೀಷ್‌, ಕ್ರೈಸ್ತ ಸಮುದಾಯದವೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ನಂತರ ಕ್ರೈಸ್ತ ಬಾಂಧವರಲ್ಲಿ ಮತಯಾಚನೆ ಮಾಡಿದರು. ಇತ್ತೀಚೆಗಷ್ಟೆ ಶ್ರೀರಂಗಪಟ್ಟಣದ ಗಂಜಾಂ ಹಾಗೂ ಶನಿವಾರ ರಾತ್ರಿ ಕೆ.ಆರ್‌.ಪೇಟೆಯಲ್ಲಿ ಮುಸ್ಲಿಂ ಸಮುದಾಯವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮತ ಯಾಚಿಸಿದ್ದರು.

ಪುತ್ರನ ಪರ ತಾಯಿ ಪ್ರಚಾರ

ಮತ್ತೊಂದೆಡೆ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಪರವಾಗಿ ತಾಯಿ, ಶಾಸಕಿ ಅನಿತಾ ಕುಮಾರಸ್ವಾಮಿ ಅವರು ನಗರದ ಬಿ.ಜಿ.ದಾಸೇಗೌಡ ವೃತ್ತದಲ್ಲಿ(ಫ್ಯಾಕ್ಟರಿ ಸರ್ಕಲ್‌) ಮೈಸೂರು-ಬೆಂಗಳೂರು ಹೆದ್ದಾರಿ ಬದಿಯಲ್ಲಿನ ಸಂತ ಜೊಸೇಫರ ದೇವಾಲಯಕ್ಕೆ ಭೇಟಿ ನೀಡಿದ್ದರು.

ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯೂ ಆದ ಪುತ್ರ ನಿಖಿಲ್‌ ಕುಮಾರಸ್ವಾಮಿ ಪರ ಕ್ರೈಸ್ತ ಬಾಂಧವರಲ್ಲಿ ಮತಯಾಚನೆ ಮಾಡಿದರು. ಬಳಿಕ ಚರ್ಚ್‌ನ ಧಾರ್ಮಿಕ ಮುಖಂಡರೊಂದಿಗೆ ಗೌಪ್ಯವಾಗಿ ಸಭೆ ನಡೆಸಿದ ಅನಿತಾ ಕುಮಾರ ಸ್ವಾಮಿ ಅವರು, ಅಲ್ಪ ಸಂಖ್ಯಾತರ ಏಳಿಗೆಗೆ ಮೈತ್ರಿ ಸರಕಾರ ಬದ್ದವಾಗಿದ್ದು, ತಮ್ಮ ಪುತ್ರನಿಗೆ ಮತ ನೀಡಿ ಗೆಲ್ಲಿಸಬೇಕು. ದೇವೇಗೌಡರು ಕುಟುಂಬ ರಾಜಕೀಯಕ್ಕೆ ಬಂದಿರುವುದು ಅಧಿಕಾರಕ್ಕಾಗಿ ಅಲ್ಲ. ಸೇವೆಗಾಗಿ ಆದ್ದರಿಂದ ಮೈತ್ರಿ ಪಕ್ಷದ ಅಭ್ಯರ್ಥಿಯಾದ ನಿಖಿಲ್‌ಗೆ ಮತ ನೀಡಬೇಕು ಎಂದು ಎಂದು ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.

ಇದಕ್ಕೂ ಮೊದಲು ಶನಿವಾರ ರಾತ್ರಿ ನಗರದ ಕರ್ನಾಟಕ ಸಂಘದ ಕಚೇರಿ ಆವರಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಜಿಲ್ಲೆಯ ಬಹುತೇಕ ಮಸೀದಿಗಳ ಸಮಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಕಾರ‍್ಯದರ್ಶಿಗಳ ಸಭೆ ನಡೆಸಿ ಸಮಾಲೋಚಿಸಿದರು. ಈ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಮುಖಂಡರು ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸುವ ತೀರ್ಮಾನ ತೆಗೆದುಕೊಂಡರು. ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಫ್ರುಲ್ಲಾಖಾನ್‌ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ