ಆ್ಯಪ್ನಗರ

ಜ್ಯೋತಿಷಿಗಳ 'ಹಸ್ತ'ಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಚುನಾವಣಾ ನೀತಿ ಸಂಹಿತೆ ಹಸ್ತ ಸಾಮುದ್ರಿಕಾ ಶಾಸ್ತ್ರಜ್ಞರಿಗೆ, ಜ್ಯೋತಿಷಿಗಳಿಗೆ ತಟ್ಟಿದೆ. ಹಸ್ತದ ಚಿಹ್ನೆಯನ್ನು ಬಳಸುವಂತಿಲ್ಲ ಎಂಬ ಚುನಾವಣಾ ಆಯೋಗದ ಸೂಚನೆಯಿಂದ, ಹಲವರು ತಮ್ಮ ಬೋರ್ಡ್‌ಗಳಲ್ಲಿರುವ ಕೈ ಚಿಹ್ನೆಗೆ ಪೇಪರ್ ಮುಚ್ಚಿದ್ದಾರೆ.

Vijaya Karnataka 13 Mar 2019, 10:46 am
ಮಂಡ್ಯ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಬಿಸಿ ಕೇವಲ ರಾಜಕಾರಣಿಗಳು, ರಾಜಕೀಯ ಪಕ್ಷದ ಕಾರ‍್ಯಕರ್ತರಲ್ಲದೆ ಜ್ಯೋತಿಷಿಗಳಿಗೂ ತಟ್ಟಿದೆ!
Vijaya Karnataka Web Astrologer


ಜ್ಯೋತಿಷ್ಯ ಕೇಂದ್ರದ ಪ್ರಚಾರಕ್ಕಾಗಿ ಬಳಸುತ್ತಿದ್ದ ಹಸ್ತ ಮುದ್ರೆಯ ಬೋರ್ಡ್‌ ಇದೀಗ ಚುನಾವಣಾ ಆಯೋಗದ ಕಣ್ಣಿಗೆ ಗುರಿಯಾಗಿದೆ. ನಗರದ ಅಶೋಕನಗರದ ಜ್ಯೋತಿಷ್ಯ ಕೇಂದ್ರವೊಂದರ ಬೋರ್ಡ್‌ನಲ್ಲಿ ನಿಮ್ಮ ಹಸ್ತ, ಜಾತಕ, ಮುಖಲಕ್ಷಣ, ಭಾವಚಿತ್ರ ನೋಡಿ ಜ್ಯೋತಿಷ್ಯ ಹೇಳಲಾಗುತ್ತದೆ ಎನ್ನುವುದನ್ನು ಹೊರತುಪಡಿಸಿ, ಕಾಂಗ್ರೆಸ್‌ ಪಕ್ಷದ ಚಿಹ್ನೆ ಹೋಲುವ ಹಸ್ತದ ಚಿಹ್ನೆಯನ್ನು ಚುನಾವಣಾಧಿಕಾರಿಗಳ ಆದೇಶದ ಮೇರೆಗೆ ಪೇಪರ್‌ ಹಾಕಿ ಮುಚ್ಚಲಾಗಿದೆ.

ಇನ್ನು ಹಸ್ತ ಸಾಮುದ್ರಿಕೆ ನೋಡಿ ಭವಿಷ್ಯ ಹೇಳುವ ಜ್ಯೋತಿಷಿಗಳು ಜಿಲ್ಲೆಯ ಎಲ್ಲೆಡೆ ಕಾಣಸಿಗುತ್ತಾರೆ. ನೀತಿ ಸಂಹಿತೆಯಡಿ ಅವರ ಜ್ಯೋತಿಷ್ಯ ಕೇಂದ್ರದ ಹಸ್ತದ ಚಿಹ್ನೆ ಇರುವ ಬೋರ್ಡ್‌ಗಳ ಕಥೆಯೂ ಹೀಗೆ ಆಗಿದೆ. ಚುನಾವಣೆ ಘೋಷಣೆಯಾದ ದಿನದಿಂದಲೇ ನೀತಿ ಸಂಹಿತೆ ಜಾರಿ ಮಾಡಿರುವ ಚುನಾವಣಾ ಆಯೋಗ ರಾಜಕೀಯ ಪಕ್ಷಗಳು, ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟಿದೆ. ಇಷ್ಟೇ ಅಲ್ಲದೇ, ದೇವಸ್ಥಾನಗಳಲ್ಲಿ ನಡೆಯುವ ಕಾರ‍್ಯಕ್ರಮಗಳು, ಅಭ್ಯರ್ಥಿಗಳ ಪರ ಧಾರ್ಮಿಕ ಚಿಹ್ನೆ, ಪಕ್ಷದ ಭಾವುಟ ಪ್ರದರ್ಶಿಸಿ ಪ್ರಚಾರ ಮಾಡುವಂತಿಲ್ಲ ಎಂದು ಈಗಾಗಲೇ ಚುನಾವಣೆ ಆಯೋಗ ಸೂಚನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ