ಆ್ಯಪ್ನಗರ

ಮಂಡ್ಯ: ಕಾಡಾನೆ ದಾಳಿಯಿಂದ ಪರಂಗಿ, ಮಾವು ನಾಶ

ಕಾಡಿನಿಂದ ಜಮೀನಿಗೆ ಲಗ್ಗೆ ಹಾಕಿದ ಮೂರು ಕಾಡಾನೆಗಳು ಬಾಳೆಗಿಡಗಳನ್ನು ತಿಂದು ಹಾಳು ಮಾಡಿವೆ. ಇತ್ತೀಚೆಗೆ ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ.

Vijaya Karnataka Web 19 May 2020, 1:44 pm
ಮಂಡ್ಯ: ಮಳವಳ್ಳಿ ತಾಲ್ಲೂಕು ಧನಗೂರು ಗ್ರಾಮದ ವಾಸಿ ಸಾದಿಕ್ ಪಾಷಾ ಎಂಬುವವರಿಗೆ ಸೇರಿದ ಹನ್ನೆರಡು ಎಕರೆ ಜಮೀನಿನಲ್ಲಿ ಹಾಕಿದ್ದ ಬಾಳೆ ತೋಟಕ್ಕೆ ಮೂರು ಕಾಡಾನೆ ದಾಳಿ ನಡೆಸಿದ ಘಟನೆ ನಡೆದಿದೆ. ಆನೆಗಳು ಬಾಳೆ, ಪರಂಗಿ, ಮಾವು ಬೆಳೆಗಳನ್ನು ನಾಶಪಡಿಸಿವೆ
Vijaya Karnataka Web -


ಸುಮಾರು ಎರಡು ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ . ನಾನು ಇರುವ ಎಲ್ಲ ಬ್ಯಾಂಕುಗಳಲ್ಲೂ ಸಾಲ ಪಡೆದು ಜಮೀನಿನಲ್ಲಿ ಕೃಷಿಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಸತತ ಮೂರು ದಿನಗಳಿಂದ ಕಾಡಾನೆಗಳು ದಾಳಿ ನಡೆಸುತ್ತಿದ್ದರೂ ಕೂಡ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿಲ್ಲ. ರೈತರ ಕಷ್ಟ ಕೇಳೋರ್ಯಾರು. ಹೀಗೇ ಆನೆಗಳ ದಾಳಿ ಮುಂದುವರೆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ ಎಂದರು.

ಬೆಳೆ ನಮ್ಮ ಕೈ ಸೇರುವುದರಲ್ಲಿತ್ತು, ಅಷ್ಟರಲ್ಲಿ ಫಸಲು ಕಾಡಾನೆಗಳ ಪಾಲಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಸಾದಿಕ್ ಪಾಷಾ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ