ಆ್ಯಪ್ನಗರ

ಕೈಕೊಟ್ಟ ಕಾರು, ದರೋಡೆ ಸಂಚು ವಿಫಲ

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka 16 Feb 2020, 5:00 am
ಮದ್ದೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ನಡೆಸಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web failure to rob by car problem
ಕೈಕೊಟ್ಟ ಕಾರು, ದರೋಡೆ ಸಂಚು ವಿಫಲ


ಬೆಂಗಳೂರು ಪದ್ಮನಾಭ ನಗರದ ಓಂ ಪ್ರಕಾಶ್‌, ಉತ್ತರಹಳ್ಳಿಯ ಸುರೇಶ್‌, ಮದ್ದೂರು ಲೀಲಾವತಿ ಬಡಾವಣೆ ನಿವಾಸಿ ಸಂಜಯ್‌ ಹಾಗೂ ಪ್ರಜ್ವಲ್‌ ಅವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಕಾರ್ತಿಕ್‌ ಪರಾರಿಯಾಗಿದ್ದಾನೆ. ಬೆಂಗಳೂರು ಮೂಲದ ಓಂಪ್ರಕಾಶ್‌ ಎಂಬುವರಿಗೆ ಸೇರಿದ ಕಾರಿಗೆ ನಕಲಿ ನಂಬರ್‌ ಪ್ಲೇಟ್‌ ಅಳವಡಿಸಿಕೊಂಡಿದ್ದ ಐವರು ಆರೋಪಿಗಳು ಹೆದ್ದಾರಿ ದರೋಡೆಗೆ ಸಂಚು ರೂಪಿಸಿ ತೆರಳುತ್ತಿದ್ದರು.

ಕಾರಿನಲ್ಲಿ ಚಾಕು, ಡ್ರ್ಯಾಗರ್‌, ಮಂಕಿ ಕ್ಯಾಪ್‌, ಹ್ಯಾಂಡ್‌ ಗ್ಲೌಸ್‌, ಕಬ್ಬಿಣದ ಮೊಳೆಗಳು, ಪೆಪ್ಪರ್‌ ಸ್ಪ್ರೇ ಹಾಗೂ ಮಾಸ್ಕ್‌ ಮತ್ತಿತರ ವಸ್ತುಗಳನ್ನು ಇಟ್ಟುಕೊಂಡು ತೆರಳುತ್ತಿದ್ದ ವೇಳೆ ಹೆದ್ದಾರಿಯ ಕೊಪ್ಪ ವೃತ್ತದ ಬಳಿ ಕಾರು ಕೆಟ್ಟು ನಿಂತಿದೆ. ಪರಿಣಾಮ ಹೆದ್ದಾರಿ ಸಂಚಾರಕ್ಕೆ ತೊಡಕುಂಟಾಗಿ ಹಿಂದಿನಿಂದ ಬರುತ್ತಿದ್ದ ವಾಹನ ಗಳ ಚಾಲಕರು ಕಾರನ್ನು ಪಕ್ಕಕ್ಕೆ ಸರಿಸುವಂತೆ ಸೂಚಿಸಿದರು. ಆದರೆ ಪಾನಮತ್ತರಾಗಿದ್ದ ಆರೋಪಿಗಳು ಅವರೊಂದಿಗೆ ಮಾತಿನ ಚಕಮಕಿಗಿಳಿದು ಹಲ್ಲೆಗೆ ಮುಂದಾಗಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಥಳೀಯರು ಆರೋಪಿಗಳನ್ನು ಸಮಾಧಾನಪಡಿಸಲೆತ್ನಿಸಿ ವಿಫಲರಾದರು. ಆಗ ಕಾರಿನಲ್ಲಿದ್ದ ಮಾರಕಾಸ್ತ್ರಗಳನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅಲ್ಲದೇ, ಸ್ಥಳದಿಂದ ತೆರಳದಂತೆ ಆರೋಪಿಗಳಿಗೆ ದಿಗ್ಭಂಧನ ವಿಧಿಸಿದರು.

ಸ್ಥಳಕ್ಕಾಗಮಿಸಿದ ಮದ್ದೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆಯುವ ವೇಳೆ ಒಬ್ಬ ಪರಾರಿಯಾಗಿದ್ದು, ನಾಲ್ವರನ್ನು ವಶಕ್ಕೆ ಪಡೆಯುವಲ್ಲಿಯಶಸ್ವಿಯಾದರು. ಬಂಧಿತ ನಾಲ್ವರ ಪೈಕಿ ಮದ್ದೂರು ಬಿಜೆಪಿ ಘಟಕದ ಪ್ರಮುಖರೊಬ್ಬರ ಪುತ್ರ ಹಾಗೂ ಪೊಲೀಸ್‌ ಗುಪ್ತಚರ ಇಲಾಖೆಯ ಪೇದೆಯೊಬ್ಬರ ಪುತ್ರನೂ ಸೇರಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಯತ್ನಕ್ಕೆ ಬಿಜೆಪಿ ಮುಖಂಡ ಒತ್ತಡ ಹೇರಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆರೋಪಿಗಳನ್ನು ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮದ್ದೂರು ಠಾಣೆ ಪಿಎಸ್‌ಐ ಮಂಜೇಗೌಡ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ