ಆ್ಯಪ್ನಗರ

ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

ಸಾಲಕ್ಕೆ ಹೆದರಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Vijaya Karnataka 22 Jun 2019, 5:00 am
ಕಿಕ್ಕೇರಿ(ಕೆ.ಆರ್‌.ಪೇಟೆ ತಾ.): ಸಾಲಕ್ಕೆ ಹೆದರಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Vijaya Karnataka Web farmer commits suicide fearing debt
ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ


ಕೆ.ಆರ್‌.ಪೇಟೆ ತಾಲೂಕಿನ ದೊಡ್ಡತರಾರಹಳ್ಳಿಯ ವೀರಭದ್ರಶೆಟ್ಟಿ ಎಂಬುವರ ಪುತ್ರ ಮಂಜುನಾಥ್‌(35)ಮೃತರು.

ಗಡಿ ಗ್ರಾಮವಾದ ದೊಡ್ಡತರಾರಹಳ್ಳಿಯಲ್ಲಿ ವಾಸವಿದ್ದ ಮಂಜುನಾಥ್‌, ಚನ್ನರಾಯಪಟ್ಟಣದ ಕಸಬಾ ಹೋಬಳಿಗೆ ಸೇರಿದ ಪ್ಯಾಲಸಮುದ್ರ ಗ್ರಾಮದಲ್ಲಿ ಜಮೀನು ಹೊಂದಿದ್ದರು. ಶುಕ್ರವಾರ ಬೆಳಗ್ಗೆ ಜಮೀನಿಗೆ ತೆರಳಿದ ಮಂಜುನಾಥ್‌ ಅಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುನಾಥ್‌ ಚನ್ನರಾಯಪಟ್ಟಣದ ಖಾಸಗಿ ಬ್ಯಾಂಕ್‌ನಲ್ಲಿ 35 ಸಾವಿರ ರೂ., ಮಹಿಳಾ ಸಂಘಗಳು ಹಾಗೂ ಕೈಸಾಲವಾಗಿ ಹಲವರ ಬಳಿ 3ರಿಂದ 5ಲಕ್ಷ ರೂ. ಸಾಲ ಮಾಡಿದ್ದರು. ಸಾಲಗಾರರು ನಿತ್ಯ ಸಾಲ ಮರುಪಾವತಿಗೆ ಪೀಡಿಸುತ್ತಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಚನ್ನರಾಯಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಕಿಕ್ಕೇರಿ ಠಾಣೆಯ ಪಿಎಸ್‌ಐ ಚಂದ್ರಶೇಖರ್‌ ಹಾಗೂ ಚನ್ನರಾಯಪಟ್ಟಣದ ಪಿಎಸ್‌ಐ ಮಂಜುನಾಥ್‌ ಭೇಟಿ ನೀಡಿ ಪರಿಶೀಲಿಸಿದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ