ಆ್ಯಪ್ನಗರ

ಕಾವೇರಿ ನೀರಿಗಾಗಿ ಧರಣಿ ನಿರತ ರೈತ ಆತ್ಮಹತ್ಯೆ ಯತ್ನ

ವಿಕ ಸುದ್ದಿಲೋಕ 16 Nov 2016, 3:59 pm
ಮಂಡ್ಯ: ನಾಲೆ ಮೂಲಕ ಮದ್ದೂರು ಕೊನೆ ಭಾಗಕ್ಕೆ ಕಾವೇರಿ ನೀರು ಹರಿಯದ ಹಿನ್ನೆಲೆಯಲ್ಲಿ ರೈತರೊಬ್ಬರು ಮರ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದೇಶಹಳ್ಳಿಯ ರೈತ ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದವರು.
Vijaya Karnataka Web farmer try to suicide for cauvery water
ಕಾವೇರಿ ನೀರಿಗಾಗಿ ಧರಣಿ ನಿರತ ರೈತ ಆತ್ಮಹತ್ಯೆ ಯತ್ನ


ಮದ್ದೂರು ಕಡೇ ಭಾಗದ ರೈತರಿಗೆ ನಾಲೆ ನೀರು ಹರಿಸಿ ಎಂದು ಮದ್ದೂರಿನ ನೀರಾವರಿ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ರೈತರು ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತ ಪ್ರಸಾದ್‌ ಅವರುಮರಕ್ಕೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮರಕ್ಕೆ ಏಣಿ ಹಾಕಿ ಅವರನ್ನು ಪೊಲೀಸರು ಕೆಳಗಿಳಿಸಿದರು. ಕೆಳಗಿಳಿಸಿದ ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆಯಲು ಮುಂದಾದದರು. ಇದಕ್ಕೆ ಅಲ್ಲಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ