ಆ್ಯಪ್ನಗರ

ಮದ್ದೂರಿನ ಬ್ಯಾಂಕ್ ಮುಂದೆ ರೈತರ ಧರಣಿ

ವಿಜಯ ಬ್ಯಾಂಕಿನಲ್ಲಿ ಗಿರಿವಿಯಿಟ್ಟಿದ್ದ ರೈತರ ಆಭರಣಗಳನ್ನು ಹರಾಜು ಪ್ರಕ್ರಿಯೆ ನಡೆಸಲು ಮುಂದಾದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತ ಮುಖಂಡ ರು ಪ್ರತಿಭಟನೆ ನಡೆಸಿ ಹರಾಜು ಪ್ರಕ್ರಿಯೆ ಯನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾ ದರು.

Vijaya Karnataka 13 Dec 2017, 5:16 am
ಮದ್ದೂರು: ವಿಜಯ ಬ್ಯಾಂಕಿನಲ್ಲಿ ಗಿರಿವಿಯಿಟ್ಟಿದ್ದ ರೈತರ ಆಭರಣಗಳನ್ನು ಹರಾಜು ಪ್ರಕ್ರಿಯೆ ನಡೆಸಲು ಮುಂದಾದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸ್ಥಳೀಯ ರೈತ ಮುಖಂಡ ರು ಪ್ರತಿಭಟನೆ ನಡೆಸಿ ಹರಾಜು ಪ್ರಕ್ರಿಯೆ ಯನ್ನು ರದ್ದುಗೊಳಿಸುವಲ್ಲಿ ಯಶಸ್ವಿಯಾ ದರು.
Vijaya Karnataka Web farmers in front of bank of madur
ಮದ್ದೂರಿನ ಬ್ಯಾಂಕ್ ಮುಂದೆ ರೈತರ ಧರಣಿ


ತಾಲೂಕಿನ ಗೆಜ್ಜಲಗೆರೆ ವಿಜಯ ಬ್ಯಾಂಕ್ ಶಾಖೆಯ ಮುಂದೆ ಜಮಾಯಿಸಿದ ಪ್ರತಿಭಟನಾ ಕಾರರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಒಡವೆಗಳನ್ನು ಹರಾಜು ಮಾಡದಿರುವಂತೆ ಒತ್ತಾಯಿಸಿ ಪ್ರತಿಭಟಿಸಿದರು.

ಈ ವೇಳೆ ರೈತ ಮುಖಂಡ ಲಿಂಗಪ್ಪಾಜಿ ಮಾತನಾಡಿ, ‘‘ಕಳೆದ 3 ವರ್ಷಗಳಿಂದಲೂ ವಿ.ಸಿ.ನಾಲೆಯಲ್ಲಿ ನೀರು ಹರಿಯದ ಜತೆಗೆ ಮಳೆ, ಬೆಳೆ ಇಲ್ಲದೆ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ಸರಕಾರ ರೈತರ ಯಾವುದೇ ಒಡವೆಗಳನ್ನು ಹರಾಜು ಮಾಡಬಾರದೆಂಬ ಆದೇಶ ನೀಡಿದ್ದರೂ, ಬ್ಯಾಂಕ್ ಅಧಿಕಾರಿಗಳು ಹರಾಜು ಪ್ರಕ್ರಿಯೆ ಮುಂದಾಗಿದ್ದಾರೆ,’’ ಎಂದು ದೂರಿದರು.

‘‘ಈ ಸಂಬಂಧ ಯಾವುದೇ ನೋಟೀಸ್ ನೀಡದೆ ಏಕಾಏಕಿ ರೈತರ ಒಡವೆಯನ್ನು ಹರಾಜು ಮಾಡಲು ಮುಂದಾಗಿರುವುದು ಸೂಕ್ತವಲ್ಲ. ರೈತರ ಕಷ್ಟವನ್ನು ಅರಿತು ಸಮಯ ನೀಡಲು ಮುಂದಾಗಬೇಕು. ಜಿಲ್ಲೆಯ ಯಾವುದೇ ಬ್ಯಾಂಕುಗಳಲ್ಲಿ ರೈತರ ಒಡವೆ ಳನ್ನು ಹರಾಜು ಮಾಡಲು ಮುಂದಾದಲ್ಲಿ ಅಂತಹವರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ,’’ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬ್ಯಾಂಕ್ ವ್ಯವಸ್ಥಾಪಕಿ ಇಂದುಮತಿ ಮಾತನಾಡಿ, ‘‘ಮೇಲಧಿಕಾರಿಗಳ ಆದೇಶದ ಮೇರೆಗೆ ಹರಾಜು ಪ್ರಕ್ರಿಯೆಯನ್ನು ಹಮ್ಮಿಕೊಳ್ಳ ಲಾಗಿದ್ದು, ರೈತರ ಒತ್ತಾಯದ ಮೇರೆಗೆ ಹರಾಜು ಪ್ರಕ್ರಿಯೆಯನ್ನು ನಿಲ್ಲುಸುತ್ತಿರು ವುದಾಗಿ,’’ ತಿಳಿಸಿದ ಬಳಿಕ ಪ್ರತಿಭಟನೆ ಹಿಂಪಡೆಯ ಲಾಯಿತು. ಪ್ರತಿಭಟನೆಯಲ್ಲಿ ಜಯರಾಮು, ಜಿ.ಕೆ. ರಾಮು, ಜಿ.ಸಿ. ಪುಟಸ್ವಾಮಿ, ರಾಮಚಂದ್ರ, ಶ್ರೀನಿವಾಸ, ಪುಟ್ಟಸ್ವಾಮಿ, ಶಿವರಾಂ. ಜಯವೀರ, ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ