ಆ್ಯಪ್ನಗರ

ಭಾಗ್ಯಜ್ಯೋತಿ ವಿದ್ಯುತ್ ಕಡಿತ ರೈತರ ಪ್ರತಿಭಟನೆ

ಭಾಗ್ಯಜ್ಯೋತಿ ವಿದ್ಯುತ್ ಕಡಿತ ಹಾಗೂ ಮೀಟರೀ ಕರಣ ವಿರೋಧಿಸಿ ಪ್ರಾಂತ ಕೃಷಿ ಕೂಲಿಕಾರ ಸಂಘ ಹಳೇಬೂದನೂರು ಘಟಕದ ಕಾರ‌್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವಿಕ ಸುದ್ದಿಲೋಕ 1 Jun 2016, 5:15 am
ಮಂಡ್ಯ : ಭಾಗ್ಯಜ್ಯೋತಿ ವಿದ್ಯುತ್ ಕಡಿತ ಹಾಗೂ ಮೀಟರೀ ಕರಣ ವಿರೋಧಿಸಿ ಪ್ರಾಂತ ಕೃಷಿ ಕೂಲಿಕಾರ ಸಂಘ ಹಳೇಬೂದನೂರು ಘಟಕದ ಕಾರ‌್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
Vijaya Karnataka Web farmers protest power cuts bhagyajyoti
ಭಾಗ್ಯಜ್ಯೋತಿ ವಿದ್ಯುತ್ ಕಡಿತ ರೈತರ ಪ್ರತಿಭಟನೆ


ನಗರದ ಜೆ.ಸಿ.ವೃತ್ತದಲ್ಲಿ ಸೇರಿದ ಪ್ರತಿಭಟನಾ ಕಾರರು, ಬಳಿಕ ಬೆಂಗಳೂರು-ಮೈಸೂರು ಹೆದ್ದಾರಿ ಮಾರ್ಗವಾಗಿ ಪ್ರತಿಭಟನೆ ನಡೆಸಿ ಚೆಸ್ಕಾಂ ಇಲಾಖೆ ಮುಂದೆ ಧರಣಿ ಕುಳಿತು ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ನೂರಾರು ಬಡ ಕುಟುಂಬಳು ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಫಲಾನುಭವಿಗಳಾಗಿದ್ದು, ಕೃಷಿ ಕೂಲಿಕಾರ್ಮಿಕ ರಾಗಿದ್ದಾರೆ. ಹೀಗಾಗಿ ಇವರಿಗೆ ಉಚಿತ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು. ಭಾಗ್ಯ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತೇ ವೆಂದು ಹೇಳಿ, ಇದೀಗ ಭಾಗ್ಯಜ್ಯೋತಿಗೆ ಮೀಟರ್ ಅಳವಡಿಸಿ 20 ರಿಂದ 30 ಸಾವಿರ ರೂ. ಬಿಲ್ ಹಾಕುತ್ತಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ನಿರಂತರ ಜ್ಯೋತಿ ಎಂದು ಹೇಳು ಇಲಾಖೆ ಅನಿಯಮಿತವಾಗಿ ವಿದ್ಯುತ್ ಕಡಿತಗೊಳಿಸಿ ಇಡೀ ಹಳ್ಳಿಗಳನ್ನು ಕತ್ತಲೆಯಲ್ಲಿಡುತ್ತಿವೆ. ಇಲಾಖೆಯ ಅವೈಜ್ಞಾನಿಕತೆಯಿಂದಾಗಿ ವ್ಯವಸಾಯಕ್ಕೆ, ಕುಡಿಯು ವ ನೀರಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ನಿರಂತರ ಜ್ಯೋತಿ ಬಳಕೆದಾರರಿಗೆ ದುಬಾರಿ ಶುಲ್ಕ ಹಾಕುವುದುನ್ನು ನಿಲ್ಲಿಸಬೇಕು. ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಫಲಾನುಭವಿಗಳಿಗೆ ಸರಕಾರ ಯೋಜನೆ ಜಾರಿ ಮಾಡುವಾಗ ನೀಡಿದ ಭರವಸೆಯಂತೆ ಉಚಿತ ವಿದ್ಯುತ್ ನೀಡಬೇಕು. ನಿರಂತರ ಜ್ಯೋತಿ ಬಳಕೆದಾರರಿಗೆ ದುಬಾರಿ ಶುಲ್ಕಕ್ಕೆ ಕಡಿವಾಣ ಹಾಕಬೇಕು. ಭಾಗ್ಯಜ್ಯೋತಿ ಫಲಾನುಭವಿಗಳಿಗೆ ಮೀಟರ್ ಅಳವಡಿಸಿ ವಿದ್ಯುತ್ ಕಡಿತ ಮಾಡುವುದನ್ನು ನಿಲ್ಲಿಸಬೇಕು ಎಂದರು.

ನಿರಂತರ ಜ್ಯೋತಿ ಪ್ರಸ್ತುತ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುವ ಮೂಲಕ ರೈತರ ವ್ಯವಸಾಯ, ಕುಡಿಯುವ ನೀರು ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿರುವುದರಿಂದ ಇದನ್ನು ತಪ್ಪಿಸಿ ನಿರಂತ ಜ್ಯೋತಿ ನಿರಂತರವಾಗಿ ರುವವಂತೆ ಕ್ರಮ ವಹಿಸಬೇಕು ಹಾಗೂ ಗುಣ ಮಟ್ಟದ ಟಿ.ಸಿ. ಅಳವಡಿಸಬೇಕು, ಪಂಪ್‌ಸೆಟ್ ಬಳಕೆದಾರರಿಗೆ ಉಚಿತ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.

ಪ್ರಾಂತ ಕೃಷಿ ಕೂಲಿಕಾರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಮಾದು, ಉಪಾಧ್ಯಕ್ಷ ಬಿ.ಹನುಮೇಶ್, ಸಿಐಟಿಯು ಜಿಲ್ಲಾ ಮುಖಂಡರಾದ ಸಿ.ಕುಮಾರಿ, ಪ್ರಾಂತ ಕೃಷಿ ಕೂಲಿಕಾರ ಸಂಘದ ಪದಾಧಿಕಾರಿಗಳಾದ ರಾಜು, ಕುಮಾರಿ, ಅಪ್ಪಾಜಿ, ಭಾಗ್ಯ ಹಾಗೂ ಸುನೀತ ಮತ್ತಿತರರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ