ಆ್ಯಪ್ನಗರ

ಮಂಡ್ಯ: ದಾಯಾದಿ ಕಲಹ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ವಿರುದ್ಧ ಎಫ್‌ಐಆರ್

​ಅಚ್ಚರಿ ಎಂದರೆ ದೂರು ನೀಡಿದ 20 ತಿಂಗಳ ಬಳಿಕ ಕೋರ್ಟ್ ಆದೇಶನ್ವಯ ಮಾರ್ಚ್ 28ರಂದು ಎ್ಐಆರ್ ದಾಖಲಾಗಿದೆ

Vijaya Karnataka Web 7 Jun 2019, 8:00 pm
ಕಿಕ್ಕೇರಿ: ದಾಯಾದಿ ಕಲಹ ಹಿನ್ನಲೆಯಲ್ಲಿ ಪ್ರಸಿದ್ಧ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ವಿರುದ್ಧ ಕೆ.ಆರ್.ಪೇಟೆ ತಾಲೂಕು ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಅಚ್ಚರಿ ಎಂದರೆ ದೂರು ನೀಡಿದ 20 ತಿಂಗಳ ಬಳಿಕ ಕೋರ್ಟ್ ಆದೇಶನ್ವಯ ಮಾರ್ಚ್ 28ರಂದು ಎ್ಐಆರ್ ದಾಖಲಾಗಿದೆ!

ರಂಗರಾಜು ಎಂಬುವರು ನೀಡಿದ ದೂರಿನ ಮೇರೆಗೆ ಕಿಕ್ಕೇರಿ ಕೃಷ್ಣಮೂರ್ತಿ ಮತ್ತವರ ಪತ್ನಿ ಲತಾ ವಿರುದ್ಧ ಐಪಿಸಿ ಸೆಕ್ಷನ್ 114, 323, 324, 504, 506 ಹಾಗೂ 34ರ ಪ್ರಕಾರ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.

ದೂರುದಾರ ರಂಗರಾಜು ಅವರು ಕಿಕ್ಕೇರಿ ಕೃಷ್ಣಮೂರ್ತಿ ಅವರ ಹಿರಿಯ ಸೋದರರಾಗಿದ್ದಾರೆ.

ಏನಿದು ಘಟನೆ?


2017 ಜುಲೈ 5ರಂದು ತಮ್ಮ ಮನೆಗೆ ಬಂದಿದ್ದ ಸೋದರ ಕಿಕ್ಕೇರಿ ಕೃಷ್ಣಮೂರ್ತಿ ಮತ್ತವರ ಪತ್ನಿ ಲತಾ ಅವರು ಹಣದ ವಿಚಾರವಾಗಿ ನಮ್ಮೊಂದಿಗೆ ಗಲಾಟೆ ಮಾಡಿ ಹಲ್ಲೆ ಮಾಡಿದ್ದಾರೆ. ಕುತ್ತಿಗೆ ಅದುಮಿ ಕೊಲೆಗೆ ಯತ್ನಿಸಿದ್ದಾರೆ. ನಾವು ನೀಡಿದ್ದ 5 ಲಕ್ಷ ರೂ. ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ಪತ್ನಿಯ ಕುಮ್ಮಕ್ಕಿನಿಂದ ನನ್ನ ಮೇಲೆಯೇ ಕೃಷ್ಣಮೂರ್ತಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 2019 ಮಾ.28ರಂದು ಎ್ಐಆರ್ ದಾಖಲಾಗಿದೆ.

ತಡವಾಗಿದ್ದೇಕೆ?

ಘಟನೆ ಸಂಬಂಧ 2017 ಜುಲೈ 13ರಂದು ಕಿಕ್ಕೇರಿ ಪೊಲೀಸರಿಗೆ ದೂರು ನೀಡಿದ್ದೇನೆ. ಆದರೆ, ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ ಪೊಲೀಸರು, ಕೇವಲ ಎನ್‌ಸಿಆರ್ ಮಾಡಿಕೊಂಡು ನಮ್ಮನ್ನು ವಾಪಸ್ ಕಳುಹಿಸಿದರು. ಈ ಹಿನ್ನೆಲೆಯಲ್ಲಿ ಹೀಗಾಗಿ ದೂರು ದಾಖಲಿಸುವಂತೆ ನಿರ್ದೇಶನ ಕೋರಿ ಕೆ.ಆರ್.ಪೇಟೆ ಜೆಎಂಎಫ್‌ಸಿ ನ್ಯಾಯಾಲಯ ಮೊರೆ ಹೋಗಿದ್ದೆ. ನ್ಯಾಯಾಲಯವು ದೂರು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳುವಂತೆ ಕಿಕ್ಕೇರಿ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಅದರಂತೆ ತಡವಾಗಿ ಎಫ್‌ಆರ್‌ಐ ದಾಖಲಾಗಿದೆ ಎಂದು ದೂರುದಾರ ರಂಗರಾಜು ಅವರು ತಿಳಿಸಿದ್ದಾರೆ.

ಮತ್ತೊಂದು ದೂರು

ನ್ಯಾಯಾಲಯದ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದೂರು ಸಂಬಂಧ ಬಿ ವರದಿ ಸಲ್ಲಿಸಲು ತಯಾರಿ ಮಾಡುತ್ತಿದ್ದಾರೆ. ಸಾಕ್ಷಿದಾರರಿಗೆ ಬೆದರಿಕೆ ಹಾಕಿ ಸುಳ್ಳು ಹೇಳಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಕಿಕ್ಕೇರಿ ಕೃಷ್ಣಮೂರ್ತಿ, ಬಲರಾಮ, ಸುಬ್ಬಣ್ಣ ಎಂಬುವರ ವಿರುದ್ಧ ಕ್ರಮ ವಹಿಸಬೇಕೆಂದು ಪೊಲೀಸರಿಗೆ ಜೂ. 6ರಂದು ದೂರು ನೀಡಿದೆ.

ಆದರೆ, ದೂರು ಅರ್ಜಿ ಸಲ್ಲಿಸಲು ಪೊಲೀಸರು ನಿರಾಕರಿಸಿದರು. ಹೀಗಾಗಿ ವಕೀಲರ ಮೂಲಕ ಅಂಚೆ ಮೂಲಕ ದೂರು ಅರ್ಜಿ ಸಲ್ಲಿಸಲಾಗಿದೆ ಎಂದು ರಂಗರಾಜು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ