* ಮಂಡ್ಯ ಕ್ಷೇತ್ರದ ಅಭ್ಯರ್ಥಿ ಇನ್ನೂ ತೀರ್ಮಾನವಾಗಿಲ್ಲ
ಮಂಡ್ಯ: ಮುಂದಿನ ಐದು ವರ್ಷ ಸಮ್ಮಿಶ್ರ ಸರಕಾರವೇ ಅಧಿಕಾರದಲ್ಲಿರುತ್ತದೆ. ನಾವು ಅಧಿಕಾರಾವಧಿ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಯಾವ ರೀತಿ ಸರಕಾರವನ್ನು ಉಳಿಸಬೇಕು, ಹೇಗೆ ಆಡಳಿತ ನಡೆಸಬೇಕೆಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ, ಕೆಲವು ಮಾಧ್ಯಮದವರು ಸರಕಾರದ ಅಸ್ತಿತ್ವದ ಬಗ್ಗೆ ಅವರವರೇ ತೀರ್ಮಾನ ತೆಗೆದುಕೊಂಡು, ಡೆಡ್ಲೈನ್ ನಿಗದಿಪಡಿಸುತ್ತಿದ್ದಾರೆ,'' ಎಂದು ಮಾರ್ಮಿಕವಾಗಿ ನುಡಿದರು.
ಮೈತ್ರಿಗೆ ಸಮಸ್ಯೆಯಿಲ್ಲ: ''ಜೆಡಿಎಸ್-ಕಾಂಗ್ರೆಸ್ ಸರಕಾರದ ಮೈತ್ರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆಯಾಗಿದೆ. ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನೂ ಉಭಯ ಪಕ್ಷಗಳು ಒಮ್ಮತದಿಂದ ಎದುರಿಸಬೇಕೆಂಬ ತೀರ್ಮಾನವಾಗಿದೆ. ಅದರಂತೆಯೇ ಚುನಾವಣೆ ಎದುರಿಸಲಾಗುವುದು. ಲೋಕಸಭೆ ಚುನಾವಣೆಗೆ ಎಲ್ಲ ರೀತಿಯಲ್ಲೂ ತಯಾರಿ ನಡೆದಿದೆ. ಈಗಾಗಲೆ ಹಾಸನ, ತುಮಕೂರಿನಲ್ಲಿ ಸಭೆ ನಡೆಸಿದ್ದೇನೆ. ಮಂಡ್ಯದಲ್ಲಿ ಉಪ ಚುನಾವಣೆ ಮೂಲಕ ಸಾರ್ವತ್ರಿಕ ಚುನಾವಣೆಯ ತಯಾರಿಯೂ ನಡೆದಿದೆ,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಭ್ಯರ್ಥಿ ತೀರ್ಮಾನವಾಗಿಲ್ಲ: ''ಮಂಡ್ಯ ಕ್ಷೇತ್ರದ ಅಭ್ಯರ್ಥಿ ಯಾರೆಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ನಿಖಿಲ್ ಅವರನ್ನು ಕಣಕ್ಕಿಳಿಸಬೇಕೆಂದು ಅಭಿಮಾನಿಗಳು, ಜಿಲ್ಲೆಯ ಶಾಸಕರು, ಜಿ.ಪಂ. ಸದಸ್ಯರು ಒತ್ತಾಯಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ನಿಖಿಲ್ ಚುನಾವಣಾ ಪ್ರಚಾರ ನಡೆಸಿದ್ದಾರೆ. ಹೀಗಾಗಿ ನಮ್ಮ ಕುಟುಂಬ ಮತ್ತು ಮಂಡ್ಯದ ನಡುವಿನ ಬಾಂಧವ್ಯದ ಕೊಂಡಿಯನ್ನು ಬಿಗಿಗೊಳಿಸುವ ಆಶಯದಿಂದ ನಿಖಿಲ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೋರಾಟ ನಡೆಸಲು ಇದೇನು ಕುರುಕ್ಷೇತ್ರವೇ,'' ಎಂದು ಪ್ರಶ್ನಿಸಿದರು.
ಅಂಬರೀಷ್ ಕಾಂಗ್ರೆಸ್ ಅಲ್ಲವೇ?: ''ಅಂಬರೀಷ್ ಕಾಂಗ್ರೆಸ್ ಅಲ್ಲವೇ? ಅವರೇನು ಜೆಡಿಎಸ್ನಲ್ಲಿ ಬಂದಿರಲಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್ ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಅಂಬರೀಷ್ ಮತ್ತವರ ಕುಟುಂಬದ ವಿಚಾರದಲ್ಲಿ ನಾನು ರಾಜಕಾರಣ ಬೆರೆಸಲ್ಲ. ಅಂಬರೀಷ್ ನಿಧನರಾದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನಾನು ನನ್ನ ಜವಾಬ್ದಾರಿ, ಕರ್ತವ್ಯ ನಿರ್ವಹಿಸಿದ್ದೇನೆ. ಜನರ ಮನವಿಯಂತೆ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರಲಾಯಿತು. ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಜನರ ಭಾವನೆಯಂತೆ ಗೌರವ ಸಲ್ಲಿಸಿದ್ದೇವೆ. ಯಾರೇ ಸಿಎಂ ಆಗಿದ್ದರೂ ನಾನು ತೆಗೆದುಕೊಂಡ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದ್ದರು,'' ಎಂದು ಹೇಳಿದರು.
ಉದ್ದೇಶಪೂರ್ವಕವಲ್ಲ: ''ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಅಂಬರೀಷ್ ಶ್ರದ್ದಾಂಜಲಿ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತಾವು ಬಾರದಿರುವುದು ಉದ್ದೇಶಪೂರ್ವಕವಲ್ಲ. ನಾನು ಮುಖ್ಯಮಂತ್ರಿ. ನನಗೆ ನನ್ನದೇ ಆದ ಕಾರ್ಯಭಾರವಿರುತ್ತದೆ. ಯಾರೋ ಬಂದು ಕರೆದ ತಕ್ಷಣ ಹೋಗಲು ಸಾಧ್ಯವೇ? ನನ್ನನ್ನು ಕೇಳಿ ಆಯೋಜಕರು ದಿನಾಂಕ ನಿಗದಿಪಡಿಸಿಲ್ಲ. ದಿನಾಂಕ ನಿಗದಿಪಡಿಸಿ ಆಹ್ವಾನ ನೀಡಿದರು. ಆದರೆ, ಬೇರೆ ಕೆಲಸವಿದ್ದಿದ್ದರಿಂದ ನಾನು ಬರಲಿಲ್ಲವಷ್ಟೆ. ಕಾರ್ಯಕ್ರಮಕ್ಕೆ ಹೋಗದಂತೆ ಯಾರನ್ನೂ ತಡೆದಿಲ್ಲ,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜ.17ರಂದು ಅಲ್ಪಸಂಖ್ಯಾತರ ಸಮಾವೇಶ: ''ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.17ರಂದು ಜೆಡಿಎಸ್ ಪಕ್ಷದಿಂದ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಲಾಗಿದೆ. ಇದಕ್ಕಾಗಿ ಎಲ್ಲ ತಯಾರಿ ನಡೆದಿದ್ದು, ಮಂಡ್ಯ ಜಿಲ್ಲೆಯಿಂದಲೂ ಎಂಟತ್ತು ಸಾವಿರ ಮಂದಿ ಜೆಡಿಎಸ್ನ ಅಲ್ಪಸಂಖ್ಯಾತ ಕಾರ್ಯಕರ್ತರು ಭಾಗವಹಿಸಲಿದ್ದಾರೆ,'' ಎಂದು ತಿಳಿಸಿದರು.
ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿ.ಪಂ. ಸದಸ್ಯ ಬಿ.ಎಲ್.ದೇವರಾಜು ಹಾಜರಿದ್ದರು.
ಮಂಡ್ಯ: ಮುಂದಿನ ಐದು ವರ್ಷ ಸಮ್ಮಿಶ್ರ ಸರಕಾರವೇ ಅಧಿಕಾರದಲ್ಲಿರುತ್ತದೆ. ನಾವು ಅಧಿಕಾರಾವಧಿ ಪೂರ್ಣಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಯಾವ ರೀತಿ ಸರಕಾರವನ್ನು ಉಳಿಸಬೇಕು, ಹೇಗೆ ಆಡಳಿತ ನಡೆಸಬೇಕೆಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ, ಕೆಲವು ಮಾಧ್ಯಮದವರು ಸರಕಾರದ ಅಸ್ತಿತ್ವದ ಬಗ್ಗೆ ಅವರವರೇ ತೀರ್ಮಾನ ತೆಗೆದುಕೊಂಡು, ಡೆಡ್ಲೈನ್ ನಿಗದಿಪಡಿಸುತ್ತಿದ್ದಾರೆ,'' ಎಂದು ಮಾರ್ಮಿಕವಾಗಿ ನುಡಿದರು.
ಮೈತ್ರಿಗೆ ಸಮಸ್ಯೆಯಿಲ್ಲ: ''ಜೆಡಿಎಸ್-ಕಾಂಗ್ರೆಸ್ ಸರಕಾರದ ಮೈತ್ರಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೊಂದಾಣಿಕೆಯಾಗಿದೆ. ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನೂ ಉಭಯ ಪಕ್ಷಗಳು ಒಮ್ಮತದಿಂದ ಎದುರಿಸಬೇಕೆಂಬ ತೀರ್ಮಾನವಾಗಿದೆ. ಅದರಂತೆಯೇ ಚುನಾವಣೆ ಎದುರಿಸಲಾಗುವುದು. ಲೋಕಸಭೆ ಚುನಾವಣೆಗೆ ಎಲ್ಲ ರೀತಿಯಲ್ಲೂ ತಯಾರಿ ನಡೆದಿದೆ. ಈಗಾಗಲೆ ಹಾಸನ, ತುಮಕೂರಿನಲ್ಲಿ ಸಭೆ ನಡೆಸಿದ್ದೇನೆ. ಮಂಡ್ಯದಲ್ಲಿ ಉಪ ಚುನಾವಣೆ ಮೂಲಕ ಸಾರ್ವತ್ರಿಕ ಚುನಾವಣೆಯ ತಯಾರಿಯೂ ನಡೆದಿದೆ,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಭ್ಯರ್ಥಿ ತೀರ್ಮಾನವಾಗಿಲ್ಲ: ''ಮಂಡ್ಯ ಕ್ಷೇತ್ರದ ಅಭ್ಯರ್ಥಿ ಯಾರೆಂಬ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ನಿಖಿಲ್ ಅವರನ್ನು ಕಣಕ್ಕಿಳಿಸಬೇಕೆಂದು ಅಭಿಮಾನಿಗಳು, ಜಿಲ್ಲೆಯ ಶಾಸಕರು, ಜಿ.ಪಂ. ಸದಸ್ಯರು ಒತ್ತಾಯಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ನಿಖಿಲ್ ಚುನಾವಣಾ ಪ್ರಚಾರ ನಡೆಸಿದ್ದಾರೆ. ಹೀಗಾಗಿ ನಮ್ಮ ಕುಟುಂಬ ಮತ್ತು ಮಂಡ್ಯದ ನಡುವಿನ ಬಾಂಧವ್ಯದ ಕೊಂಡಿಯನ್ನು ಬಿಗಿಗೊಳಿಸುವ ಆಶಯದಿಂದ ನಿಖಿಲ್ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹೋರಾಟ ನಡೆಸಲು ಇದೇನು ಕುರುಕ್ಷೇತ್ರವೇ,'' ಎಂದು ಪ್ರಶ್ನಿಸಿದರು.
ಅಂಬರೀಷ್ ಕಾಂಗ್ರೆಸ್ ಅಲ್ಲವೇ?: ''ಅಂಬರೀಷ್ ಕಾಂಗ್ರೆಸ್ ಅಲ್ಲವೇ? ಅವರೇನು ಜೆಡಿಎಸ್ನಲ್ಲಿ ಬಂದಿರಲಿಲ್ಲ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಅವರ ಕುಟುಂಬದವರಿಗೆ ಟಿಕೆಟ್ ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಅಂಬರೀಷ್ ಮತ್ತವರ ಕುಟುಂಬದ ವಿಚಾರದಲ್ಲಿ ನಾನು ರಾಜಕಾರಣ ಬೆರೆಸಲ್ಲ. ಅಂಬರೀಷ್ ನಿಧನರಾದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿ ನಾನು ನನ್ನ ಜವಾಬ್ದಾರಿ, ಕರ್ತವ್ಯ ನಿರ್ವಹಿಸಿದ್ದೇನೆ. ಜನರ ಮನವಿಯಂತೆ ಅವರ ಪಾರ್ಥೀವ ಶರೀರವನ್ನು ಮಂಡ್ಯಕ್ಕೆ ತರಲಾಯಿತು. ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. ಜನರ ಭಾವನೆಯಂತೆ ಗೌರವ ಸಲ್ಲಿಸಿದ್ದೇವೆ. ಯಾರೇ ಸಿಎಂ ಆಗಿದ್ದರೂ ನಾನು ತೆಗೆದುಕೊಂಡ ನಿರ್ಧಾರವನ್ನೇ ತೆಗೆದುಕೊಳ್ಳುತ್ತಿದ್ದರು,'' ಎಂದು ಹೇಳಿದರು.
ಉದ್ದೇಶಪೂರ್ವಕವಲ್ಲ: ''ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ಅಂಬರೀಷ್ ಶ್ರದ್ದಾಂಜಲಿ ಮತ್ತು ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ತಾವು ಬಾರದಿರುವುದು ಉದ್ದೇಶಪೂರ್ವಕವಲ್ಲ. ನಾನು ಮುಖ್ಯಮಂತ್ರಿ. ನನಗೆ ನನ್ನದೇ ಆದ ಕಾರ್ಯಭಾರವಿರುತ್ತದೆ. ಯಾರೋ ಬಂದು ಕರೆದ ತಕ್ಷಣ ಹೋಗಲು ಸಾಧ್ಯವೇ? ನನ್ನನ್ನು ಕೇಳಿ ಆಯೋಜಕರು ದಿನಾಂಕ ನಿಗದಿಪಡಿಸಿಲ್ಲ. ದಿನಾಂಕ ನಿಗದಿಪಡಿಸಿ ಆಹ್ವಾನ ನೀಡಿದರು. ಆದರೆ, ಬೇರೆ ಕೆಲಸವಿದ್ದಿದ್ದರಿಂದ ನಾನು ಬರಲಿಲ್ಲವಷ್ಟೆ. ಕಾರ್ಯಕ್ರಮಕ್ಕೆ ಹೋಗದಂತೆ ಯಾರನ್ನೂ ತಡೆದಿಲ್ಲ,'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜ.17ರಂದು ಅಲ್ಪಸಂಖ್ಯಾತರ ಸಮಾವೇಶ: ''ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.17ರಂದು ಜೆಡಿಎಸ್ ಪಕ್ಷದಿಂದ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಲಾಗಿದೆ. ಇದಕ್ಕಾಗಿ ಎಲ್ಲ ತಯಾರಿ ನಡೆದಿದ್ದು, ಮಂಡ್ಯ ಜಿಲ್ಲೆಯಿಂದಲೂ ಎಂಟತ್ತು ಸಾವಿರ ಮಂದಿ ಜೆಡಿಎಸ್ನ ಅಲ್ಪಸಂಖ್ಯಾತ ಕಾರ್ಯಕರ್ತರು ಭಾಗವಹಿಸಲಿದ್ದಾರೆ,'' ಎಂದು ತಿಳಿಸಿದರು.
ಸಚಿವ ಸಾ.ರಾ.ಮಹೇಶ್, ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಜಿ.ಪಂ. ಸದಸ್ಯ ಬಿ.ಎಲ್.ದೇವರಾಜು ಹಾಜರಿದ್ದರು.