ಆ್ಯಪ್ನಗರ

ಮದ್ದೂರಿನಲ್ಲಿ ಕಾರ್ - ಬಸ್ ಡಿಕ್ಕಿ; ಒಂದೇ ಕುಟುಂಬದ ನಾಲ್ವರ ದುರ್ಮರಣ

ಮದ್ದೂರಿನಲ್ಲಿ ಭೀಕರ ಅಪಘಾತ ಸಂಭವಿಸಿದ್ದು 2 ಮಕ್ಕಳು ಸೇರಿದಂತೆ ನಾಲ್ವರು ದುರ್ಮರಣವನ್ನಪ್ಪಿದ್ದಾರೆ.

Vijaya Karnataka Web 27 Jul 2019, 3:27 pm
ಮಂಡ್ಯ: ಸ್ವಿಫ್ಟ್ ಕಾರ್ ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಮೃತರಲ್ಲಿ ಇಬ್ಬರು ಮಕ್ಕಳು ಸಹ ಸೇರಿದ್ದಾರೆ
Vijaya Karnataka Web Accident 11


ಅಪಘಾತದಲ್ಲಿ ಮೃತಪಟ್ಟವರನ್ನು ರವಿ (30), ಪತ್ನಿ ಮಂಜುಳ (25), ಪುತ್ರ ಸಾಗರ್ (6), ಪುತ್ರಿ ಸುಕನ್ಯಾ (10) ಎಂದು ಗುರುತಿಸಲಾಗಿದೆ. ಮಂಡ್ಯ ತಾಲೂಕಿನ ಹೆಬಕವಾಡಿ ಗ್ರಾಮದವರಾಗಿರುವ ಇವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ವಾಸವಿದ್ದು ವಾರದ ರಜೆ ಹಿನ್ನೆಲೆಯಲ್ಲಿ ಮನೆಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ.

ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಮಂಡ್ಯಕ್ಕೆ ಚಿಕಿತ್ಸೆಗೆಂದು ಸಾಗಿಸುವ ವೇಳೆ ಅಸುನೀಗಿದ್ದಾರೆ ಎನ್ನಲಾಗುತ್ತಿದೆ.

ಬೆಂಗಳೂರಿಂದ ಮೈಸೂರಿನೆಡೆ ಸಾಗುತ್ತಿದ್ದ ಕಾರ್ ರಸ್ತೆ ವಿಭಜಕ ದಾಟಿ ಬಲಭಾಗದ ರಸ್ತೆಗಿಳಿದಾಗ ಎದುರು ಬಂದ ಬಸ್‌ಗೆ ಮುಖಾಮುಖಿ ಡಿಕ್ಕಿಯಾಗಿದೆ. ಮಿಮ್ಸ್ ಶವಾಗಾರದ ಬಳಿ ಕುಟುಂಬ ಸದಸ್ಯರು ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.

ಈ ಅಪಘಾತದಿಂದ ಬೆಂಗಳೂರು-ಮೈಸೂರು ಸಂಚಾರ ಕೆಲ ಕಾಲ ಸಂಪೂರ್ಣ ಅಸ್ತವ್ಯಸ್ತವಾಗಿತ್ತು.

ಸ್ಥಳಕ್ಕೆ ಸಿಪಿಐ ಮಹೇಶ್ ಹಾಗೂ ಸಂಚಾರಿ ಪಿಎಸ್ಐ ಮೋಹನ್ ಡಿ. ಪಟೇಲ್ ಭೇಟಿ ನೀಡಿ ಅಪಘಾತ ಸ್ಥಳವನ್ನು ಸಂಪೂರ್ಣ ಸಂಚಾರವನ್ನು ಸುಗಮಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ