ಆ್ಯಪ್ನಗರ

ಕಾವೇರಿ ನಡುಗಡ್ಡೆಯಿಂದ ಬರಲೊಲ್ಲದ ಸ್ವಾಮೀಜಿ

ಕಾವೇರಿ ನಡುಗಡ್ಡೆಯಿಂದ ಬರಲೊಲ್ಲದ ಸ್ವಾಮೀಜಿ -ಪ್ರವಾಹ ಬಂದಾಗಿನಿಂದ ಗೌತಮ ಕ್ಷೇತ್ರದಲ್ಲೇ ಉಳಿದಿರುವ ಗಜಾನನ ಶ್ರೀ: ಎನ್‌ಡಿಆರ್‌ಎಫ್‌ ಪಡೆ ಪ್ರಯತ್ನ ವಿಫಲ ವಿಕ ...

Vijaya Karnataka 19 Jul 2018, 5:00 am
-ಪ್ರವಾಹ ಬಂದಾಗಿನಿಂದ ಗೌತಮ ಕ್ಷೇತ್ರದಲ್ಲೇ ಉಳಿದಿರುವ ಗಜಾನನ ಶ್ರೀ: ಎನ್‌ಡಿಆರ್‌ಎಫ್‌ ಪಡೆ ಪ್ರಯತ್ನ ವಿಫಲ
Vijaya Karnataka Web gajanana swamiji wont came back from cauvery is a freefall near srirangapattana
ಕಾವೇರಿ ನಡುಗಡ್ಡೆಯಿಂದ ಬರಲೊಲ್ಲದ ಸ್ವಾಮೀಜಿ

ಶ್ರೀರಂಗಪಟ್ಟಣ: ತಾಲೂಕಿನ ದೊಡ್ಡೇಗೌಡನ ಕೊಪ್ಪಲು ಹೊರವಲಯದಲ್ಲಿ ಕಾವೇರಿ ನದಿ ನಡುಗಡ್ಡೆ ಪ್ರದೇಶದಲ್ಲಿರುವ ಗಜಾನನ ಆಶ್ರಮದಲ್ಲಿ ಇರುವ ಗಜಾನನ ಸ್ವಾಮೀಜಿಯನ್ನು ಹೊರ ಕರೆತರಲು ತಾಲೂಕು ಆಡಳಿತ ಬುಧವಾರ ನಡೆಸಿದ ಪ್ರಯತ್ನ ವಿಫಲಗೊಂಡಿದೆ.

ಕೆಆರ್‌ಎಸ್‌ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ನದಿಗೆ ನೀರು ಹರಿಸುತ್ತಿರುವುದರಿಂದ ಈ ನಡುಗಡ್ಡೆ ಪ್ರದೇಶ ಜಲಾವೃತವಾಗಿದೆ. ಆದರೆ ಆಶ್ರಮಕ್ಕೆ ಯಾವುದೇ ಅಪಾಯವಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಸ್ವಾಮೀಜಿಯವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರಲು ಹಿರಿಯ ಅಧಿಕಾರಿಗಳು ನಡೆಸುತ್ತಿದ್ದಾರೆ. ಆದರೆ ಸ್ವಾಮೀಜಿ, ''ನಾನು ಸುರಕ್ಷಿತವಾಗಿದ್ದೇನೆ, ಹೊರಬರುವುದಿಲ್ಲ,''ಎಂದು ಹೇಳುತ್ತಿದ್ದಾರೆ.

ಬುಧವಾರ ತಹಸೀಲ್ದಾರ್‌ ಡಿ.ನಾಗೇಶ್‌ ನೇತೃತ್ವದ ಅಧಿಕಾರಿಗಳ ತಂಡ, ಎನ್‌ಡಿಆರ್‌ಎಫ್‌ ತಂಡದ ಜತೆ ಬೋಟ್‌ ಸಹಾಯದಿಂದ ಕಾವೇರಿ ನದಿ ದಾಟಿ ಆಶ್ರಮಕ್ಕೆ ತೆರಳಿ, ಮೂರು ದಿನಗಳಿಂದ ನಡುಗಡ್ಡೆಯಲ್ಲಿರುವ ಸ್ವಾಮೀಜಿ ಹಾಗೂ ಅವರ ಸೇವಕರನ್ನು ಸುರಕ್ಷಿತ ಸ್ಥಳಕ್ಕೆ ಬರುವಂತೆ ಮನವೊಲಿಸಲು ಯತ್ನಿಸಿತು.

ಆದರೆ, ಇದಕ್ಕೆ ನಿರಾಕರಿಸಿದ ಗಜಾನನ ಸ್ವಾಮೀಜಿ, ''ನಾನು ಮತ್ತು ನನ್ನ ನಾಲ್ಕು ಮಂದಿ ಸೇವಕರು ಸುರಕ್ಷಿತವಾಗಿದ್ದೇವೆ. ನಮಗೆ ಯಾವುದೇ ತೊಂದರೆಯಾಗಿಲ್ಲ. ಆಹಾರ ಪದಾರ್ಥ, ವಿದ್ಯುತ್‌ ಸಂಪರ್ಕ ಎಲ್ಲವೂ ಇದೆ. ನಾವು ಆಶ್ರಮದಿಂದ ಯಾವುದೇ ಕಾರಣಕ್ಕೂ ಬರುವುದಿಲ್ಲ'' ಎಂದು ಹೇಳಿದರು.

''ನಮಗೆ ಯಾವುದೇ ಹಾನಿ ಸಂಭವಿಸಿದರೂ ಅದಕ್ಕೆ ನಾವೇ ಜವಾಬ್ದಾರರು'' ಎಂದು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ''ಸುರಕ್ಷ ತೆ ದೃಷ್ಟಿಯಿಂದ ನಡುಗಡ್ಡೆ ಪ್ರದೇಶದಿಂದ ಹೊರಗೆ ಕರೆತರಲು ಯತ್ನಿಸಿದೆವು, ಅವರು ಒಪ್ಪಲಿಲ್ಲ'' ಎಂದು ತಹಸೀಲ್ದಾರ್‌ ಡಿ.ನಾಗೇಶ್‌ ತಿಳಿಸಿದ್ದಾರೆ.

ನಿಯೋಗದಲ್ಲಿ ತೆರಳಿದ್ದ ವೈದ್ಯರನ್ನು ನಡುಗಡ್ಡೆಯಲ್ಲಿರುವ ಆಶ್ರಮದ ಸ್ವಾಮೀಜಿಯವರ ಆರೋಗ್ಯ ತಪಾಸಣೆಗೆ ಕರೆದೊಯ್ಯಲಿಲ್ಲ. ಇದಕ್ಕೆ ಕೆಲವರು, 'ವೈದ್ಯರ ಸಮಯವನ್ನು ವಿನಾಕಾರಣ ಹಾಳು ಮಾಡಲಾಯಿತು' ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿವೈಎಸ್‌ಪಿ ವಿಶ್ವನಾಥ್‌, ಸಿಪಿಐ ರವೀಂದ್ರ, ಪಿಎಸ್‌ಐ ಪುನೀತ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ