ಆ್ಯಪ್ನಗರ

ಮಾನವೀಯ ಮೌಲ್ಯ ರೂಢಿಸಿಕೊಳ್ಳಿ

ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಪಿಇಎಸ್ ಕಾಲೇಜು ನಿವತ್ತ ಪ್ರಾಧ್ಯಾಪಕ ಡಾ. ಎಚ್.ಎಸ್. ಮುದ್ದೇಗೌಡ ತಿಳಿಸಿದರು.

Vijaya Karnataka 25 Dec 2017, 5:15 am
ಮದ್ದೂರು: ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಸಮಾಜದ ಪ್ರಗತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಪಿಇಎಸ್ ಕಾಲೇಜು ನಿವತ್ತ ಪ್ರಾಧ್ಯಾಪಕ ಡಾ. ಎಚ್.ಎಸ್. ಮುದ್ದೇಗೌಡ ತಿಳಿಸಿದರು.
Vijaya Karnataka Web get humanity value
ಮಾನವೀಯ ಮೌಲ್ಯ ರೂಢಿಸಿಕೊಳ್ಳಿ


ತಾಲೂಕಿನ ಕೆ.ಹೊನ್ನಲಗೆರೆ ಗ್ರಾಮದ ಆರ್.ಕೆ. ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಜಾತ್ರೆಯಲ್ಲಿ ಸಾಂಸ್ಕೃತಿಕ ಹೆಜ್ಜೆಗಳು ಹಾಗೂ ರಾಕ ಹೊನ್ನುಡಿ ಶಾಲಾ ವಾರ್ಷಿಕೋತ್ಸವ ಕಾರ‌್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇಂತಹ ವೇದಿಕೆಗಳ ಮೂಲಕ ಅನಾವರಣ ಗೊಳಿಸುವ ಜತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಮುಂಬರುವ ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳಿಗೆ ಅಣಿಯಾಗುವಂತೆ ಹೇಳಿದರು.

ಜನಪದ, ಸಾಹಿತ್ಯ, ಸಂಸ್ಕೃತಿ, ಕಲೆ ಇವುಗಳ ಉಳಿವಿಗೆ ಪ್ರತಿಯೊಬ್ಬರು ಮುಂದಾಗುವ ಮೂಲಕ ಅಳಿವಿನ ಹಂಚಿನಲ್ಲಿರುವ ಗ್ರಾಮೀಣ ಸೊಗಡನ್ನು ಕಟ್ಟಿ ಬೆಳೆಸಬೇಕು. ಇದು ಯುವ ಸಮುದಾಯದ ಆದ್ಯ ಕರ್ತವ್ಯವಾಗಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೇ ಜನಪದ ಉಳಿವಿಗೆ ಮುಂದಾಗಬೇಕು ಎಂದು ತಿಳಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್‌ರಾಮಕಷ್ಣ ಮಾತನಾಡಿ, ಪ್ರತಿ ವರ್ಷ ರಾಕ ಹೊನ್ನುಡಿ ಎಂಬ ಕಾರ‌್ಯಕ್ರಮವನ್ನು ಆಯೋಜಿ ಸುವ ಮೂಲಕ ಜಿಲ್ಲೆಯ ಗ್ರಾಮೀಣ ಪ್ರತಿಭೆ ಗಳನ್ನು ಗುರುತಿಸುತ್ತಿರುವುದಾಗಿ ಹೇಳಿದರು.
ವಿಜೇತರ ವಿವರ: ಜಾನಪದ ಗೀತೆ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಶ್ರೀರಂಗಪಟ್ಟಣ ಜಿ.ಕುಶಾಲ್ (ಪ್ರ) ಸೆಂಟ್‌ಆನ್ಸ್ ಪ್ರೌಢಶಾಲೆ ಮದ್ದೂರು ಎ.ಕೀರ್ತನಾ (ದ್ವಿ) ಮೊರಾರ್ಜಿ ದೇಸಾಯಿ ವಸತಿಶಾಲೆ, ಕೆ.ಹೊನ್ನಲಗೆರೆ ಟಿ.ಎಸ್.ಸತ್ಯಮೂರ್ತಿ (ತ) ಬಹುಮಾನಕ್ಕೆ ಭಾಜನರಾದರು.

ಸಮಾಧನಕರ ಬಹುಮಾನ : ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೆ.ಹೊನ್ನಲಗೆರೆ ಸಿ.ಎಸ್.ನಿತಿನ್‌ಗೌಡ, ಡೆಪೋಡಿಲ್ಸ್ ಪಬ್ಲಿಕ್ ಶಾಲೆ ಮಂಡ್ಯ ಎಚ್.ಆರ್.ಲಿಖಿತರಾಮ್, ಪೂರ್ಣ ಪ್ರಜ್ಞ ಪ್ರೌಢಶಾಲೆ, ಶಿವಪುರ ಸಿ.ಆರ್.ಸ್ಪಂದನಾ ಡಿ.ವೆಂಕಟೇಶ್, ಬಿ.ಕೆ.ಗೌಡಪ್ರೌಢಶಾಲೆ, ಚಂದು ಪುರ, ಆರ್.ಕೆ.ಪ್ರೌಢಶಾಲೆ, ಕೆ.ಹೊನ್ನಲಗೆರೆ ಕೆ.ಎನ್.ಅಮೂಲ್ಯ ಸಮಾಧಾನಕರ ಬಹುಮಾನ ಪಡೆದರು.

ಸಂಸ್ಥೆಯ ಕಾರ್ಯದರ್ಶಿ ಎನ್.ಚಂದ್ರಕಲಾರಾಮಕಷ್ಣ, ಬಿಇಒ ರೇಣುಕಮ್ಮ, ನಿರ್ದೇಶಕರಾದ ಆರ್.ಸಿ. ಶಿವಲಿಂಗೇಗೌಡ, ಕೀರ್ತನಾ ರಾಮಕಷ್ಣ, ಆಡಳಿತಾಧಿಕಾರಿ ಡಾ. ಸತೀಶ್‌ಬಾಬು, ಶಿಕ್ಷಣ ಸಂಯೋಜನಾಧಿಕಾರಿ ಕೆ.ಎಸ್. ಮಹದೇವೇಗೌಡ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ