ಆ್ಯಪ್ನಗರ

ಚಿನ್ನಾಭರಣ ಹರಾಜು ಖಂಡಿಸಿ ಧರಣಿ

ವಿಕ ಸುದ್ದಿಲೋಕ ಮಂಡ್ಯ ರೈತರು ಗಿರವಿ ಇಟ್ಟಿರುವ ಚಿನ್ನಾಭರಣ ಹರಾಜು ಖಂಡಿಸಿ ಮಂಡ್ಯ ತಾಲೂಕು ಹೊಳಲು ಗ್ರಾಮದ ಎಸ್‌ಬಿಐ ಬ್ಯಾಂಕ್‌ ಎದುರು ರೈತಸಂಘದ ಕಾರ‍್ಯಕರ್ತರು ಬುಧವಾರ ...

Vijaya Karnataka 12 Apr 2018, 5:00 am

ವಿಕ ಸುದ್ದಿಲೋಕ ಮಂಡ್ಯ

ರೈತರು ಗಿರವಿ ಇಟ್ಟಿರುವ ಚಿನ್ನಾಭರಣ ಹರಾಜು ಖಂಡಿಸಿ ಮಂಡ್ಯ ತಾಲೂಕು ಹೊಳಲು ಗ್ರಾಮದ ಎಸ್‌ಬಿಐ ಬ್ಯಾಂಕ್‌ ಎದುರು ರೈತಸಂಘದ ಕಾರ‍್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಬ್ಯಾಂಕ್‌ನ ಎದುರು ಜಮಾಯಿಸಿದ ರೈತ ಸಂಘದ ಕಾರ್ಯಕರ್ತರು, ಬ್ಯಾಂಕಿನಿಂದ ನೀಡಿದ್ದ ನೋಟಿಸ್‌ಗಳನ್ನು ಸುಟ್ಟು ಬ್ಯಾಂಕ್‌ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸತತ ನಾಲ್ಕು ವರ್ಷದ ಬರಗಾಲ ಎದುರಾಗಿದ್ದು, ಬೆಳೆ ಬೆಳೆಯಲಾಗದೆ ರೈತರು ಸಂಕಷ್ಟದಲ್ಲಿದ್ದಾರೆ. ಜೀವನ ನಿರ್ವಹಣೆಗಾಗಿ ಹಣವಿಲ್ಲದೆ ಚಿನ್ನಾಭರಣಗಳನ್ನು ಬ್ಯಾಂಕ್‌ಗಳಲ್ಲಿ ಒತ್ತೆ ಇಟ್ಟಿದ್ದಾರೆ. ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿರುವಾಗ ಚಿನ್ನಾಭರಣಗಳನ್ನು ತಕ್ಷಣಕ್ಕೆ ಬಿಡಿಸಿಕೊಳ್ಳುವುದು ಅಥವಾ ಬಡ್ಡಿ ಹಣವನ್ನು ಕಟ್ಟುವುದಾದರೂ ಹೇಗೆ ಎಂದು ಅಳಲು ತೋಡಿಕೊಂಡರು.

ಕೆಆರ್‌ಎಸ್‌ ಅಣೆಕಟ್ಟೆಯಿಂದ ಸರಿಯಾಗಿ ನೀರು ಬಿಡದ ಹಿನ್ನೆಲೆಯಲ್ಲಿ ಬೆಳೆಯೂ ಸಿಕ್ಕಿಲ್ಲ. ಹೀಗಾಗಿ ಪಡೆದ ಸಾಲ ತೀರಿಸಲು ಸಾಧ್ಯವಾಗದೇ ನೂರಾರೂ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನಾಭರಣ ಹರಾಜು ಮಾಡುವುದು ಸರಿಯಲ್ಲ. ಹೀಗಾಗಿ ಹರಾಜು ಪ್ರಕ್ರಿಯೆ ಮುಂದೂಡಿ, ಆರು ತಿಂಗಳ ಕಾಲಾವಕಾಶ ಕೊಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಮಣಿದ ಬ್ಯಾಂಕ್‌ ಅಧಿಕಾರಿಗಳು ಬುಧವಾರ ನಡೆಯಬೇಕಿದ್ದ ಚಿನ್ನಾಭರಣ ಹರಾಜು ಪ್ರಕ್ರಿಯೆಯನ್ನು ಮುಂದೂಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್‌, ಮುಖಂಡಾದ ಹಲ್ಲೆಗೆರೆ ಶಿವರಾಂ, ನಾಗಣ್ಣ, ಜೋಗಯ್ಯ, ಪಟೇಲ್‌ ರಾಮು, ಲತಾ ಶಂಕರ್‌ ಇತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ