ಆ್ಯಪ್ನಗರ

ಗ್ರಾಮ ಪಂಚಾಯಿತಿ ಸದಸ್ಯನನ್ನು ಕೊಚ್ಚಿ ಕೊಲೆ ಮಾಡಿದ ಗ್ರಾಮಸ್ಥರು: ನಾಲ್ವರಿಗೆ ಗಂಭೀರ ಗಾಯ

ಗ್ರಾಮದೇವತೆ ದೇವಿರಮ್ಮನ ಹಬ್ಬ ನಡೆಯುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ನಾಲ್ವರು ಗ್ರಾ. ಪಂ ಸದಸ್ಯ ತಿಮ್ಮೇಗೌಡ ಎಂಬುವರನ್ನು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ.

Vijaya Karnataka Web 19 Feb 2019, 11:00 am
ಮಂಡ್ಯ: ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಗ್ರಾ. ಪಂ ಸದಸ್ಯರನ್ನು ಮಚ್ಚು ಲಾಂಗ್ಗಳಿಂದ ಕೊಚ್ಚಿಕೊಲೆ ಮಾಡಲಾಗಿದೆ. ಪಾಂಡವಪುರ ತಾಲ್ಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾ. ಪಂ ಸದಸ್ಯ ತಿಮ್ಮೇಗೌಡ (50) ಕೊಲೆಯಾಗಿದ್ದು, ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮೀಗೌಡ, ಗಿರೀಗೌಡ ಪುತ್ರ ಗೌತಮ್, ವಿನಾಯಕ, ಮಹೇಶ್ ಅವರು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web 170a20e8-257b-4d7e-adb8-1d2f1e34563c


ಸೋಮವಾರ ಮಧ್ಯರಾತ್ರಿ ಗ್ರಾಮದಲ್ಲಿ ಗ್ರಾಮದೇವತೆ ದೇವಿರಮ್ಮನ ಹಬ್ಬ ನಡೆಯುತ್ತಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ನಾಲ್ವರು ಕೃತ್ಯ ನಡೆಸಿದ್ದಾರೆ. ಅದೇ ಗ್ರಾಮದ ದೇವೇಗೌಡ, ಯೋಗೇಗೌಡ, ಪುತ್ರ ಮದನ್, ಕುಮಾರ್, ಚಂದು ಅವರಿಂದ ಕೃತ್ಯ ನಡೆಸಿರುವ ಆರೋಪಿಗಳು.

ಘಟನೆಯಲ್ಲಿ ಗ್ರಾ. ಪಂ ಸದಸ್ಯ ತಿಮ್ಮೇಗೌಡ (50) ಕೊಲೆಯಾಗಿದ್ದು, ಮೃತ ವ್ಯಕ್ತಿಯ ದೇಹವನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಸ್ಥಳಕ್ಕೆ ಎಸ್ ಪಿ ಶಿವಪ್ರಕಾಶ್ ದೇವರಾಜು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಹಿನ್ನೆಲೆ
ತಿಮ್ಮೇಗೌಡರ ತಮ್ಮ ಜ್ಞಾನೇಶ್ ಎಂಬುವವರ ಮಗಳು ಸಹನಾಳನ್ನು ಆರೋಪಿ ಮದನ್ ಪ್ರೀತಿಸಿ ಮದುವೆಯಾಗಿರುತ್ತಾನೆ. ಮದುವೆಯಾದ ನಂತರ ವರದಕ್ಷಿಣೆ ಕಿರುಕುಳ ನೀಡಿ ಮನೆಗೆ ಕಳುಹಿಸಿರುತ್ತಾನೆ. ಆಗ ಮೂರು ಲಕ್ಷ ರೂ. ಹಣ ಕೂಡ ನೀಡಿರುತ್ತಾರೆ. ಮತ್ತೆ ವರದಕ್ಷಿಣೆ ಕಿರುಕುಳ ನೀಡಿದ್ದರಿಂದ ಸಹನಾ ಗಂಡನನ್ನು ಬಿಟ್ಟು ಮನೆಗೆ ಬಂದಿರುತ್ತಾಳೆ. ಇದರ ನ್ಯಾಯ ಪಂಚಾಯ್ತಿಯನ್ನು ಕೊಲೆಯಾದ ತಿಮ್ಮೇಗೌಡ ನೇತೃತ್ವದಲ್ಲಿ ನಡೆದಿರುತ್ತದೆ. ಈ ದ್ವೇಷದಿಂದ ರಾತ್ರಿ ಹಬ್ಬ ನಡೆಯುವಾಗ ಮದನ್ ಕಡೆಯವರು ಗಲಾಟೆ ಮಾಡಿರುತ್ತಾರೆ. ಇದ್ರಿಂದ ಊರಿನವರು ತಿಮ್ಮೇಗೌಡರನ್ನು ಮನೆಗೆ ಕಳುಹಿಸಿ ಬರಬೇಡಿ ಎನ್ನುತ್ತಾರೆ. ಈ ವೇಳೆ ಅಪರಿಚಿತರು ಕರೆ ಮಾಡಿ ನಿಮ್ಮ ಮಗ ವಿನಾಯಕನಿಗೆ ಚಾಕುವಿನಲ್ಲಿ ಇರಿದಿದ್ದಾರೆ ಎಂದು ಹುಸಿ ಕರೆ ಮಾಡುತ್ತಾರೆ. ಇದನ್ನು ಕೇಳಿ ದೇವರ ಮೆರವಣಿಗೆ ಬಳಿ ಬಂದ ತಿಮ್ಮೇಗೌಡರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಕೊಲೆ ತಡೆಯಲು ಹೋದ ಎಪಿಎಂಸಿ ಸದಸ್ಯ ಸ್ವಾಮೀಗೌಡ, ಗೌತಮ್, ತಿಮ್ಮೇಗೌಡರ ಮಗ ವಿನಾಯಕ್ ಹಾಗೂ ಮಹೇಶ್ ಎಂಬುವವರ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮದನ್, ಮದನ್ ತಂದೆ ಯೋಗೇಗೌಡ, ಸಂಬಂಧಿ ದೇವೇಗೌಡ, ಸ್ನೇಹಿತರಾದ ಕುಮಾರ್, ಚಂದು ಎಂಬುವವರು ಈ ಕೃತ್ಯ ಎಸಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ