ಆ್ಯಪ್ನಗರ

ಜಗತ್ತಿಗೆ ಸುಜ್ಞಾನ ಬೋಧಿಸುವವನೇ ಗುರು

ಮಂಡ್ಯ: ಜ್ಞಾನದ ಸಂಕೇತವಾಗಿರುವ ಗುರು ಕತ್ತಲೆಯನ್ನು ಅಳಿಸಿ ಜ್ಞಾನದ ಬೆಳಕನ್ನು ನೀಡುತ್ತಾನೆ ಎಂದು ಮೈಸೂರು ಯೋಗ ಶಿಕ್ಷಣ ಸಮಿತಿ ಮುಖ್ಯಗುರು ನಾಗರಾಜು ತಿಳಿಸದರು.

Vijaya Karnataka 30 Jul 2018, 5:00 am
ಮಂಡ್ಯ: ಜ್ಞಾನದ ಸಂಕೇತವಾಗಿರುವ ಗುರು ಕತ್ತಲೆಯನ್ನು ಅಳಿಸಿ ಜ್ಞಾನದ ಬೆಳಕನ್ನು ನೀಡುತ್ತಾನೆ ಎಂದು ಮೈಸೂರು ಯೋಗ ಶಿಕ್ಷಣ ಸಮಿತಿ ಮುಖ್ಯಗುರು ನಾಗರಾಜು ತಿಳಿಸದರು.
Vijaya Karnataka Web guru is the preacher of the world
ಜಗತ್ತಿಗೆ ಸುಜ್ಞಾನ ಬೋಧಿಸುವವನೇ ಗುರು


ನಗರದ ಕೆ.ಎಚ್‌.ಬಿ. ಕಾಲನಿಯಲ್ಲಿ ನಡೆದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ 4ನೇ ವರ್ಷದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗುರು ಪೂರ್ಣಿಮೆಯನ್ನು ವಿಶೇಷವಾಗಿ ಎಲ್ಲಡೆ ಆಚರಿಸಲಾಗುತ್ತದೆ. ಗುರುವನ್ನು ಬೆಳಕು, ಜ್ಞಾನ ಎಂದು ಕರೆಯಲಾಗುತ್ತದೆ ಎಂದರು.

ಗುರುವಿಗೆ ಹುಟ್ಟೂ ಇಲ್ಲ, ಸಾವೂ ಇಲ್ಲ. ಗುರು ಹುಟ್ಟುವವನೂ ಅಲ್ಲ, ಸಾಯುವವನೂ ಅಲ್ಲ, ಗುರು ಕಾಲದಿಂದ ಕಾಲಕ್ಕೆ ಅವತಾರ ಎತ್ತಿ ಈ ಜಗತ್ತಿಗೇ ಬಂದು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುತ್ತಾನೆ. ಜ್ಞಾನದ ಬುತ್ತಿಯನ್ನು ಬಿತ್ತುತ್ತಾನೆ ಎಂದು ಹೇಳಿದರು.

ನಾವೆಲ್ಲರೂ ತ್ರಿಮೂರ್ತಿಗಳನ್ನು ಪೂಜಿಸುತ್ತೇವೆ, ಅಂತಹ ತ್ರಿಮೂರ್ತಿಗಳಿಗೂ ಗುರುವಿನ ಸ್ಥಾನದಲ್ಲಿರುವ ಪರ ಬ್ರಹ್ಮ ಸ್ವರೂಪಿಯಾಗಿರುವ ಗುರು ಎಲ್ಲರಿಗೂ ಜ್ಞಾನವನ್ನು ಧಾರೆ ಎರೆಯುತ್ತಾನೆ. ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಎಲ್ಲದ್ದಕ್ಕೂ ಗುರುವಿನ ಆಸರೆ ಬೇಕೇ ಬೇಕು. ಆಗ ಮಾತ್ರ ಸಾಧನೆ ಮಾಡಿ ನಿಗಧಿತ ಗುರಿ ತಲುಪಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪತಂಜಲಿ ಯೋಗ ಸಮಿತಿ ಜಿಲ್ಲಾ ಸಂಚಾಲಕ ಶಂಕರ ನಾರಾಯಣ ಶಾಸ್ತ್ರಿ, ಹಿರಿಯ ಯೋಗ ಶಿಕ್ಷಕಿ ತಾರಾ, ಪತಂಜಲಿ ಯೋಗ ಸಮಿತಿ ಮುಖ್ಯಸ್ಥರಾದ ಕೆ.ಎನ್‌. ಆಶಾ, ಪುಷ್ಪ ದೊರೆಸ್ವಾಮಿ, ಚಂದ್ರಮ್ಮ, ಬಿ.ಎಂ. ಅಪ್ಪಾಜಪ್ಪ, ಎಸ್‌. ಶ್ರೀನಿವಾಸಶೆಟ್ಟಿ, ಶೋಭ ಜ್ಯೋತಿ, ಬಿ.ಟಿ. ವಿಶ್ವನಾಥ್‌, ಚಂದ್ರವîೌಳಿ, ಭುಜಂಗಯ್ಯ, ಶೋಭಾ ಚೇತನ್‌, ಜ್ಯೋತಿ, ಮಹದೇವಸ್ವಾಮಿ, ಲತಾ, ವಿಜಯ ಲಕ್ಷ್ಮಿ, ರಾಮಣ್ಣ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ