ಆ್ಯಪ್ನಗರ

ನನ್ನ ಗಂಡನ ಸಾವಿಗೆ ಕಾರಣನಾದ ಮಾಸ್ಟರ್‌ ಮೈಂಡ್ ಉಗ್ರನ ಹತ್ಯೆ ಖುಷಿ ತಂದಿದೆ: ಯೋಧ ಗುರು ಪತ್ನಿ ಕಲಾವತಿ

ಇಡೀ ದೇಶದಲ್ಲಿ ಈಗ ಶೋಕದ ವಾತಾವರಣವಿದೆ. ನಮ್ಮಂತೆ ಇನ್ನೂ 39 ಕುಟುಂಬ ಸದಸ್ಯರು ಈಗ ಭಾರಿ ದುಃಖ ಅನುಭವಿಸುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ನೀಡಿದಂತೆ ಅವರೆಲ್ಲರ ಕುಟುಂಬಕ್ಕೂ ನೆರವು ನೀಡುತ್ತಿರುವುದು ಖುಷಿ ತಂದಿದೆ.

Vijaya Karnataka Web 18 Feb 2019, 6:26 pm
ಮಂಡ್ಯ: ಪುಲ್ವಾಮಾದಲ್ಲಿ ಬಾಂಬ್‌ ಸ್ಫೋಟಿಸಿ ನನ್ನ ಗಂಡನ ಸಾವಿಗೆ ಕಾರಣನಾದ ಮಾಸ್ಟರ್‌ ಮೈಂಡ್‌ ಹತ್ಯೆ ಮಾಡಿರುವುದು ನಿಜಕ್ಕೂ ಖುಷಿ ತಂದಿದೆ ಎಂದು ಮಂಡ್ಯದ ಯೋಧ ಗುರು ಪತ್ನಿ ಕಲಾವತಿ ತಿಳಿಸಿದ್ದಾರೆ.
Vijaya Karnataka Web ಕಲಾವತಿ
ಕಲಾವತಿ


ಮಂಡ್ಯದಲ್ಲಿ ಖಾಸಗಿ ವಾಹಿನಿ ಜತೆ ಮಾತನಾಡಿದ ಕಲಾವತಿ, ದೇಶದಲ್ಲಿ ಉಗ್ರರು ಇರದಂತೆ ನೋಡಿಕೊಳ್ಳಬೇಕಾಗಿದೆ. ಉಗ್ರರು ಇದ್ದಾರೆ ಎನ್ನುವ ಭಾವನೆಯೇ ಮೂಡಬಾರದು. ಎಲ್ಲರನ್ನೂ ಮಟ್ಟ ಹಾಕಬೇಕು ಎಂದರು.

40 ಯೋಧರ ಸಾವಿಗೆ ಕಾರಣನಾದವನನ್ನು ನಮ್ಮ ಸೇನೆಯವರು ಹೊಡೆದುರುಳಿಸಿದ್ದಾರೆ ಎಂಬ ಸುದ್ದಿ ಕೇಳಿ ಒಂದು ಕ್ಷಣ ಖುಷಿಯಾಯಿತು. ಆದರೆ ಗುರು ಇಲ್ಲದ ಈ ಸಮಯದಲ್ಲಿ ಹೆಚ್ಚು ಹೇಳಲು ಆಗುತ್ತಿಲ್ಲ ಎಂದು ತಿಳಿಸಿದರು.

ಪತಿ ಗುರು ಎಂದೂ ಸೇನಾ ಕಾರ್ಡ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರಲಿಲ್ಲ. ನಮ್ಮ ಮನೆಯ ಎಲ್ಲರಿಗೂ ಇದನ್ನು ಹೇಳಿಕೊಡುತ್ತಿದ್ದರು. ಅದನ್ನು ನಾವು ಈಗಲೂ ಪಾಲಿಸಿಕೊಂಡು ಬಂದಿದ್ದೇವೆ ಎಂದು ಕಲಾವತಿ ತಿಳಿಸಿದರು.

ಇಡೀ ದೇಶದಲ್ಲಿ ಈಗ ಶೋಕದ ವಾತಾವರಣವಿದೆ. ನಮ್ಮಂತೆ ಇನ್ನೂ 39 ಕುಟುಂಬ ಸದಸ್ಯರು ಈಗ ಭಾರಿ ದುಃಖ ಅನುಭವಿಸುತ್ತಿದ್ದಾರೆ. ನಮ್ಮ ಕುಟುಂಬಕ್ಕೆ ನೀಡಿದಂತೆ ಅವರೆಲ್ಲರ ಕುಟುಂಬಕ್ಕೂ ನೆರವು ನೀಡುತ್ತಿರುವುದು ಖುಷಿ ತಂದಿದೆ ಎಂದು ಕಲಾವತಿ ತಿಳಿಸಿದರು.

ದೇಶದ ಸೇನಾ ಯೋಧರು ಈಗ ಜಮ್ಮು ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಇನ್ನಷ್ಟು ಜೋರಾಗಿ ಸಾಗಬೇಕು. ದೇಶದ ಭದ್ರತೆಗೆ ಧಕ್ಕೆ ತರುತ್ತಿರುವ ಎಲ್ಲ ಉಗ್ರರನ್ನು ಕೇಂದ್ರ ಸರಕಾರ ಮಟ್ಟ ಹಾಕಬೇಕು ಎಂದರು.

ನಾನು ಮತ್ತು ನನ್ನಂತೆ 39 ಮಂದಿಯ ಕುಟುಂಬ ಸದಸ್ಯರು ದುಃಖ ಅನುಭವಿಸಿದಂತೆ ಮುಂದೆ ಯಾರೂ ಅನುಭವಿಸಬಾರದು. ಉಗ್ರರನ್ನು ಸಾಯಿಸಬೇಕಾಗಿದೆ ಎಂದು ಯೋಧ ಗುರು ಪತ್ನಿ ಕಲಾವತಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ