ಆ್ಯಪ್ನಗರ

ಮಂಡ್ಯ: ಭಾರಿ ಮಳೆ, ಗಗನಚುಕ್ಕಿ ಜಲಪಾತಕ್ಕೆ ಬಂತು ಜೀವ ಕಳೆ

ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿತ್ತು. ಹೀಗಾಗಿ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಎರಡು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಬಿಡಲಾಗಿತ್ತು. ಇದರಿಂದ ಜಲಪಾತಕ್ಕೆ ಜೀವಕಳೆ ಬಂದಿದೆ.

Vijaya Karnataka Web 6 Aug 2020, 10:32 pm
ಮಂಡ್ಯ: ನೆರೆಯ ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ 40 ಸಾವಿರಕ್ಕೂ ಅದಿಕ ಪ್ರಮಾಣದ ನೀರನ್ನು ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಜೋಗ್‌ಪಾಲ್ಸ್ ಎಂದೇ ಹೆಸರಾದ ಮಳವಳ್ಳಿ ತಾಲೂಕು ಶಿಂಷಾ ಬಳಿಯ ಗಗನಚುಕ್ಕಿ ಜಲಪಾತ ಮೈದುಂಬಿದೆ.
Vijaya Karnataka Web ಭರಚುಕ್ಕಿ ಜಲಪಾತ
ಭರಚುಕ್ಕಿ ಜಲಪಾತ


ಅವಳಿ ಜಲಪಾತಗಳು ಎಂದೇ ಹೆಸರಾದ ಗಗನಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳು ಬೋರ್ಗರೆಯುತ್ತಿವೆ.

ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿತ್ತು. ಹೀಗಾಗಿ ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ಎರಡು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಬಿಡಲಾಗಿತ್ತು.

ಆದರೀಗ ಒಂದು ವಾರ ಮೊದಲೇ ನದಿಗೆ ನೀರನ್ನು ಬಿಡಲಾರಂಭಿಸಲಾಗಿದೆ. ವನಸಿರಿಯೊಂದಿಗಿನ ಪ್ರಕೃತಿಯ ರಮ್ಯ ಸೊಬಗು ಗಗನಚುಕ್ಕಿ ಜಲಪಾತವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಜಲಪಾತದಿಂದ ಧುಮ್ಮಿಕ್ಕುತ್ತಿದೆ. ಇದರಿಂದ ಮೂರ್ನಾಲ್ಕು ದಿನಗಳ ಹಿಂದಿನವರೆಗೆ ನೀರಿಲ್ಲದೆ ಒಣಗಿದ್ದ ಜಲಾಶಯವು ಇದೀಗ ಜೀವಕಳೆ ಪಡೆದಿದೆ.

ಆದರೆ, ಈ ಜಲಸಿರಿಯನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಇಲ್ಲವಾಗಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಜನರು ಸೇರುವುದನ್ನು ನಿರ್ಬಂಧಿಸಿರುವುದರಿಂದ ಜಲಪಾತ ವೀಕ್ಷಣೆಗೆ ಅವಕಾಶ ಇಲ್ಲವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ