ಆ್ಯಪ್ನಗರ

ಮನೆ ಗೋಡೆ ಕುಸಿದು ಯುವಕ ಸಾವು

ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಗ್ರಾಮದಲ್ಲಿಮನೆ ಗೋಡೆ ಕುಸಿದು ಯುವಕ ಮೃತಪಟ್ಟಿದ್ದಾನೆ.

Vijaya Karnataka 23 Oct 2019, 5:00 am
ಕೆ.ಆರ್‌.ಪೇಟೆ (ಮಂಡ್ಯ ಜಿಲ್ಲೆ): ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ತಾಲೂಕಿನ ಬೂಕನಕೆರೆ ಹೋಬಳಿ ಗಂಜಿಗೆರೆ ಗ್ರಾಮದಲ್ಲಿಮನೆ ಗೋಡೆ ಕುಸಿದು ಯುವಕ ಮೃತಪಟ್ಟಿದ್ದಾನೆ.
Vijaya Karnataka Web home wall collapses death of a young man
ಮನೆ ಗೋಡೆ ಕುಸಿದು ಯುವಕ ಸಾವು


ಮುರುಕನಹಳ್ಳಿ ಗ್ರಾಮದ ನಂಜಯ್ಯ ಎಂಬುವವರ ಪುತ್ರ ಕುಮಾರ್‌ (26) ಮೃತರು. ಕೂಲಿ ಕಾರ್ಮಿಕರಾಗಿದ್ದ ಕುಮಾರ್‌ ಅಜ್ಜಿ ಮನೆ ಗಂಜಿಗೆರೆಗೆ ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ರಾತ್ರಿ ಮನೆಯಲ್ಲಿಮಲಗಿದ್ದ ಸಮಯದಲ್ಲಿಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್‌ ಈತನ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್‌ ಎಂ.ಶಿವಮೂರ್ತಿ, ರಾಜಸ್ವ ನಿರೀಕ್ಷಕ ಕೃಷ್ಣೇಗೌಡ, ತಾ.ಪಂ. ಸದಸ್ಯ ಮುರುಕನಹಳ್ಳಿ ವಿಜಯಕುಮಾರ್‌ ಇತರರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ