ಚನ್ನಮಾದೇಗೌಡ ಪಾಂಡವಪುರ
ಕೆಆರ್ಎಸ್ ಅಣೆಕಟ್ಟೆಯ ಕೂಗಳತೆಯ ದೂರದಲ್ಲಿದ್ದರೂ ಸಹ ಹೊಸ ಕನ್ನಂಬಾಡಿ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಗ್ರಾಮಸ್ಥರು ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಕೆಆರ್ಎಸ್ ಅಣೆಕಟ್ಟೆ ನಿರ್ಮಾಣಕ್ಕೆ ಜಾಗಬಿಟ್ಟ ಹೊಸ ಕನ್ನಂಬಾಡಿ ಗ್ರಾಮಸ್ಥರಿಗೇ ಪ್ರಸ್ತುತ ಸಮರ್ಪಕವಾದ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಟ್ಟಿದ್ದರೂ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
ಕನ್ನಂಬಾಡಿ ಅಣೆಕಟ್ಟೆ(ಕೆಆರ್ಎಸ್) ನಿರ್ಮಾಣವಾದ ಬಳಿಕ ಡ್ಯಾಂನ ಮೇಲ್ಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡ ಹೊಸ ಕನ್ನಂಬಾಡಿ ಗ್ರಾಮಕ್ಕೆ ಮೊದಲಿಂದಲೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿತ್ತು. ಎರಡು ವರ್ಷಗಳ ಹಿಂದೆ ಬನ್ನಂಗಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಾರಂಭವಾದ ಬಳಿಕ ಅಲ್ಪಮಟ್ಟಿಗೆ ಹೊಸ ಕನ್ನಂಬಾಡಿಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ.
ಹೊಸಕನ್ನಂಬಾಡಿ ಗ್ರಾಮದ ಪಕ್ಕದಲ್ಲಿರುವ ಬಸ್ತೀಹಳ್ಳಿ ಗ್ರಾಮಕ್ಕೆ ಎರಡು ತಿಂಗಳಿಂದೀಚೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅರ್ಧಕ್ಕೆ ನಿಂತಿದೆ.
ಕನ್ನಂಬಾಡಿ ಅಣೆಕಟ್ಟೆ ಕಟ್ಟಲು ಜಾಗಬಿಟ್ಟುಕೊಟ್ಟ ನಮ್ಮೂರಿಗೆಯೇ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗೋದಿಲ್ಲ. ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ವಿದ್ಯುತ್ ಇಲ್ಲವಾದರೆ ಇನ್ನೂ ಒಂದು ದಿನ ತಡವಾಗಿ ನೀರು ಬಿಡುತ್ತಾರೆ. ತುಂಬಾ ಸಮಸ್ಯೆಯಾಗುತ್ತಿದೆ.
-ಪ್ರೇಮಮ್ಮ, ಹೊಸ ಕನ್ನಂಬಾಡಿ ಗ್ರಾಮಸ್ಥೆ.
ನಮ್ಮೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸೇರಿದ್ದರೂ ನಮ್ಮೂರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ನಮ್ಮೂರು ಕೆಆರ್ಎಸ್ ಅಣೆಕಟ್ಟೆಯಿಂದ ಒಂದೇ ಕಿಮೀ ದೂರದಲ್ಲಿದ್ದರೂ ನಮಗೆ ಕುಡಿಯುವ ನೀರಿಗೆ ಸಮಸ್ಯೆ ಇದೆ. ಗ್ರಾಮದಲ್ಲಿ ಒಂದೇ ಒಂದು ತೊಂಬೆ ನಲ್ಲಿ, ಓಪನ್ ಬೋರ್ವೆಲ್ಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವು ಸಹ ಇಲ್ಲ.
-ಶಂಕರ್, ಹೊಸಕನ್ನಂಬಾಡಿ ಗ್ರಾಮಸ್ಥ.
ಸದ್ಯಕ್ಕೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಎದುರಾಗಿಲ್ಲ. ತಾಲೂಕಿನ ಬಳಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಬಹುಗ್ರಾಮ ಕುಡಿಯುವ ನೀರಿನ ಗ್ರಾಮ ವ್ಯಾಪ್ತಿಯ ಹೊಸಕನ್ನಂಬಾಡಿ ಗ್ರಾಮದಲ್ಲಿ ಎರಡು ಮೂರು ದಿನಕ್ಕೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಜಕ್ಕನಹಳ್ಳಿ ವ್ಯಾಪ್ತಿಯ ಕದಲಗೆರೆ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಇದೀಗ ಆ ಗ್ರಾಮಗಳಲ್ಲಿ ಬೋರ್ವೆಲ್ ಕೊರೆಸಿ ನೀರಿನ ಸಮಸ್ಯೆ ನಿವಾರಿಸಿದ್ದೇವೆ.
-ಸಂಪತ್ಕುಮಾರ್, ಸಹಾಯಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.
ಕೆಆರ್ಎಸ್ ಅಣೆಕಟ್ಟೆಯ ಕೂಗಳತೆಯ ದೂರದಲ್ಲಿದ್ದರೂ ಸಹ ಹೊಸ ಕನ್ನಂಬಾಡಿ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಗ್ರಾಮಸ್ಥರು ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿದೆ.
ಕೆಆರ್ಎಸ್ ಅಣೆಕಟ್ಟೆ ನಿರ್ಮಾಣಕ್ಕೆ ಜಾಗಬಿಟ್ಟ ಹೊಸ ಕನ್ನಂಬಾಡಿ ಗ್ರಾಮಸ್ಥರಿಗೇ ಪ್ರಸ್ತುತ ಸಮರ್ಪಕವಾದ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮವು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಳಪಟ್ಟಿದ್ದರೂ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.
ಕನ್ನಂಬಾಡಿ ಅಣೆಕಟ್ಟೆ(ಕೆಆರ್ಎಸ್) ನಿರ್ಮಾಣವಾದ ಬಳಿಕ ಡ್ಯಾಂನ ಮೇಲ್ಭಾಗದಲ್ಲಿ ಹೊಸದಾಗಿ ನಿರ್ಮಾಣಗೊಂಡ ಹೊಸ ಕನ್ನಂಬಾಡಿ ಗ್ರಾಮಕ್ಕೆ ಮೊದಲಿಂದಲೂ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿತ್ತು. ಎರಡು ವರ್ಷಗಳ ಹಿಂದೆ ಬನ್ನಂಗಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಾರಂಭವಾದ ಬಳಿಕ ಅಲ್ಪಮಟ್ಟಿಗೆ ಹೊಸ ಕನ್ನಂಬಾಡಿಯಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ. ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬಿಡುತ್ತಿದ್ದಾರೆ.
ಹೊಸಕನ್ನಂಬಾಡಿ ಗ್ರಾಮದ ಪಕ್ಕದಲ್ಲಿರುವ ಬಸ್ತೀಹಳ್ಳಿ ಗ್ರಾಮಕ್ಕೆ ಎರಡು ತಿಂಗಳಿಂದೀಚೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅರ್ಧಕ್ಕೆ ನಿಂತಿದೆ.
ಕನ್ನಂಬಾಡಿ ಅಣೆಕಟ್ಟೆ ಕಟ್ಟಲು ಜಾಗಬಿಟ್ಟುಕೊಟ್ಟ ನಮ್ಮೂರಿಗೆಯೇ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗೋದಿಲ್ಲ. ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತದೆ. ವಿದ್ಯುತ್ ಇಲ್ಲವಾದರೆ ಇನ್ನೂ ಒಂದು ದಿನ ತಡವಾಗಿ ನೀರು ಬಿಡುತ್ತಾರೆ. ತುಂಬಾ ಸಮಸ್ಯೆಯಾಗುತ್ತಿದೆ.
-ಪ್ರೇಮಮ್ಮ, ಹೊಸ ಕನ್ನಂಬಾಡಿ ಗ್ರಾಮಸ್ಥೆ.
ನಮ್ಮೂರು ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸೇರಿದ್ದರೂ ನಮ್ಮೂರಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ನಮ್ಮೂರು ಕೆಆರ್ಎಸ್ ಅಣೆಕಟ್ಟೆಯಿಂದ ಒಂದೇ ಕಿಮೀ ದೂರದಲ್ಲಿದ್ದರೂ ನಮಗೆ ಕುಡಿಯುವ ನೀರಿಗೆ ಸಮಸ್ಯೆ ಇದೆ. ಗ್ರಾಮದಲ್ಲಿ ಒಂದೇ ಒಂದು ತೊಂಬೆ ನಲ್ಲಿ, ಓಪನ್ ಬೋರ್ವೆಲ್ಗಳಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವು ಸಹ ಇಲ್ಲ.
-ಶಂಕರ್, ಹೊಸಕನ್ನಂಬಾಡಿ ಗ್ರಾಮಸ್ಥ.
ಸದ್ಯಕ್ಕೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಎದುರಾಗಿಲ್ಲ. ತಾಲೂಕಿನ ಬಳಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಬಹುಗ್ರಾಮ ಕುಡಿಯುವ ನೀರಿನ ಗ್ರಾಮ ವ್ಯಾಪ್ತಿಯ ಹೊಸಕನ್ನಂಬಾಡಿ ಗ್ರಾಮದಲ್ಲಿ ಎರಡು ಮೂರು ದಿನಕ್ಕೆ ನೀರು ಸರಬರಾಜು ಆಗುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಜಕ್ಕನಹಳ್ಳಿ ವ್ಯಾಪ್ತಿಯ ಕದಲಗೆರೆ ಸೇರಿದಂತೆ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು. ಇದೀಗ ಆ ಗ್ರಾಮಗಳಲ್ಲಿ ಬೋರ್ವೆಲ್ ಕೊರೆಸಿ ನೀರಿನ ಸಮಸ್ಯೆ ನಿವಾರಿಸಿದ್ದೇವೆ.
-ಸಂಪತ್ಕುಮಾರ್, ಸಹಾಯಕ ಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.