ಆ್ಯಪ್ನಗರ

ಹಿಂಡಸನಹಳ್ಳಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

ತಾಲೂಕಿನ ಹೊಣಕೆರೆ ಹೋಬಳಿಯ ಹಿಂಡಸನಹಳ್ಳಿ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಶವ ಪತ್ತೆಯಾಗಿದೆ.ಗ್ರಾಮದ ನಾಗೇಶ್ ಎಂಬುವರ ಪತ್ನಿ ಮೀನಾಕ್ಷಿ (28) ಮೃತೆ.

Vijaya Karnataka 29 Dec 2017, 4:01 am
ನಾಗಮಂಗಲ: ತಾಲೂಕಿನ ಹೊಣಕೆರೆ ಹೋಬಳಿಯ ಹಿಂಡಸನಹಳ್ಳಿ ಗ್ರಾಮದ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿಯೊಬ್ಬರ ಶವ ಪತ್ತೆಯಾಗಿದೆ.
Vijaya Karnataka Web housewife suspicious death in hindassanahalli
ಹಿಂಡಸನಹಳ್ಳಿಯಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

ಗ್ರಾಮದ ನಾಗೇಶ್ ಎಂಬುವರ ಪತ್ನಿ ಮೀನಾಕ್ಷಿ (28) ಮೃತೆ.

ಮಂಗಳವಾರ ತಡ ರಾತ್ರಿ ಪತಿ-ಪತ್ನಿಯರ ನಡುವೆ ನಡೆಯುತ್ತಿದ್ದ ಗಲಾಟೆ ಮತ್ತು ಬೆಳಗಿನ ಜಾವ ಮೀನಾಕ್ಷಿ ಮೃತಪಟ್ಟಿರುವ ಬಗ್ಗೆ, ಹಿಂಡಸಹಳ್ಳಿ ಗ್ರಾಮಸ್ಥರಿಂದ ದೂರವಾಣಿ ಮೂಲಕ ವಿಷಯ ತಿಳಿದು ಮೃತಳ ತವರೂರು ಕೆ.ಆರ್.ಪೇಟೆ ತಾಲೂಕಿನ ಮೈಲನಹಳ್ಳಿ ಪೋಷಕರು ಆಗಮಿಸುವಷ್ಟರಲ್ಲಿ ಪತಿ ನಾಗೇಶ್ ಪರಾರಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಪೋಷಕರ ಮಾಹಿತಿಯ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ. ಮೀನಾಕ್ಷಿಗೆ 8 ವರ್ಷದ ಯುಕ್ತ ಮತ್ತು 2 ವರ್ಷದ ಲೇಖನ ಎಂಬ ಇಬ್ಬರು ಪುತ್ರಿಯರಿದ್ದಾರೆ. ಒಂದು ವರ್ಷದಿಂದಲೂ ಆಗಾಗ ನಡೆಯುತ್ತಿದ್ದ ಕೌಟಂಬಿಕ ಕಲಹದಿಂದ ಬೇಸತ್ತಿದ್ದ ಬಗ್ಗೆ ಮೀನಾಕ್ಷಿ ತನ್ನ ಪೋಷಕರ ಬಳಿ ಹೇಳಿಕೊಂಡಿದ್ದಳು ಎಂದು ಹೇಳಲಾಗುತ್ತಿದೆ. ಮಕ್ಕಳ ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಕರಣ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ