ಆ್ಯಪ್ನಗರ

ಪತ್ನಿಯ ತಿಥಿ ದಿನವೇ ಪತಿ ಸಾವು

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಮೊಳ್ಳೆಸಿದ್ದೇಗೌಡ ಅವರ ಪುತ್ರ ಯಜಮಾನ್ ಕಾಳೇಗೌಡ ತನ್ನ ಪತ್ನಿ ಮೃತಪಟ್ಟ 11ನೇ ದಿನದ ತಿಥಿ ಕಾರ್ಯಕ್ರಮದ

Vijaya Karnataka Web 18 Nov 2018, 7:28 pm
ಶ್ರೀರಂಗಪಟ್ಟಣ: ಮೃತ ಪತ್ನಿಯ 11ನೇ ದಿನದ ಹಾಲುತುಪ್ಪ ಕಾರ‌್ಯಕ್ರಮ ಮುಗಿಸಿ ಪತ್ನಿಗೆ ಎಡೆ ಇಟ್ಟಿದ್ದ ಊಟ(ಪ್ರಸಾದ) ಸೇವಿಸುತ್ತಿದ್ದ ವೇಳೆಯೇ ಕುಸಿದು ಬಿದ್ದು ಪತಿಯೂ ಮೃತಪಟ್ಟಿರುವ ಘಟನೆ ಭಾನುವಾರ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಡೆದಿದೆ.
Vijaya Karnataka Web fdb4cae7-0c18-4bb9-9c9f-38915a824cd6


ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಮೊಳ್ಳೆಸಿದ್ದೇಗೌಡ ಅವರ ಪುತ್ರ ಯಜಮಾನ್ ಕಾಳೇಗೌಡ(80)ಮೃತರು. ಇವರ ಪತ್ನಿ ಪುಟ್ಟಮ್ಮ(75), ಕಳೆದ 11 ದಿನಗಳ ಹಿಂದೆ ಮೃತಪಟ್ಟಿದ್ದರು.

ಭಾನುವಾರ ಅವರ ಹಾಲುತುಪ್ಪ ( ತಿಥಿ ) ಕಾರ‌್ಯಕ್ರಮ ಇತ್ತು. ತಿಥಿ ಕಾರ‌್ಯಕ್ರಮ ಮುಗಿಸಿ ಮನೆಯಲ್ಲಿ ಎಡೆ ಇಟ್ಟಿದ್ದ ಪ್ರಸಾದ ಸೇವನೆ ಮಾಡುತ್ತಿದ್ದಾಗಲೇ ಕುಸಿದು ಕಾಳೇಗೌಡ ಪ್ರಾಣ ಬಿಟ್ಟಿದ್ದಾರೆ. ಸಂಜೆ ಶವ ಸಂಸ್ಕಾರ ನೆರವೇರಿಸಲಾಯಿತು. ಕಾಳೇಗೌಡರಿಗೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸೋಮಶೇಖರ್ ಸೇರಿದಂತೆ 5 ಮಂದಿ ಪುತ್ರರು ಹಾಗೂ ಒಬ್ಬ ಪುತ್ರಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ