ಆ್ಯಪ್ನಗರ

ಮಂಡ್ಯ ಜಿಲ್ಲಾ ಜೆಡಿಎಸ್‌ನಲ್ಲಿ ತಮ್ಮನ್ನು ಕಡೆಗಣನೆ ಮಾಡಲಾಗುತ್ತಿದೆ: ಸಂಸದ ಎಲ್.ಆರ್. ಶಿವರಾಮೇಗೌಡ

ಹೆಚ್.ಡಿ.ದೇವೇಗೌಡರ ಕುಟುಂಬ ನಂಬಿದವರಿಗೆ ಮೋಸ ಆಗಿಲ್ಲ. ನನಗೆ ಅಧಿಕಾರ ನೀಡಿದ್ದಾರೆ. ಜೆಡಿಎಸ್‌ನಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ನನ್ನ ಆಕ್ಷೇಪಣೆ ಇಲ್ಲ ಎಂದು ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.

Vijaya Karnataka Web 28 Feb 2019, 10:52 pm
ಮಂಡ್ಯ: ಜಿಲ್ಲಾ ಜೆಡಿಎಸ್‌ನಲ್ಲಿ ತಮ್ಮನ್ನು ಕಡೆಗಣನೆ ಮಾಡಲಾಗುತ್ತಿದೆ ಎಂದು ಸಂಸದ ಎಲ್.ಆರ್. ಶಿವರಾಮೇಗೌಡ ಪರೋಕ್ಷವಾಗಿ ಪಕ್ಷದ ಜಿಲ್ಲಾ ಮುಖಂಡರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
Vijaya Karnataka Web shivarame gowda


ಮುಂದಿನ ಲೋಕಸಭಾ ಚುನಾವಣೆಗೆ ನಾನೂ ಸ್ಪರ್ಧಿ. ಅಲ್ಲಿ ಇಲ್ಲಿ ಗುಸುಗುಸು ಚರ್ಚೆ ನಡೆಯುತ್ತಿದೆ. ನನಗೆ ಗೊತ್ತಿಲ್ಲದ ಹಾಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಸಮಾರಂಭಗಳಿಗೆ ಕರೆತರಲಾಗುತ್ತಿದೆ. ಕೆಲವರು ಸಿಎಂ ಕುಮಾರಸ್ವಾಮಿ ಅವರನ್ನು ಗೌಪ್ಯವಾಗಿ ಭೇಟಿಯಾಗಿ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಹೀಗಾಗಿ ನಿನ್ನೆಯ ಸಮಾರಂಭದಲ್ಲೇ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರವಾಗಿ ಬಹಿರಂಗವಾಗಿ ವಾಗ್ದಾನ ಮಾಡಿದೆ.

ಹೆಚ್.ಡಿ.ದೇವೇಗೌಡರ ಕುಟುಂಬ ನಂಬಿದವರಿಗೆ ಮೋಸ ಆಗಿಲ್ಲ. ನನಗೆ ಅಧಿಕಾರ ನೀಡಿದ್ದಾರೆ. ಜೆಡಿಎಸ್‌ನಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ನನ್ನ ಆಕ್ಷೇಪಣೆ ಇಲ್ಲ ಎಂದರು.

ದೇವೇಗೌಡರ ಕುಟುಂಬ ಹೊರತು ಪಡಿಸಿದರೆ ಬೇರೆ ಯಾರೂ ಸ್ಪರ್ಧೆಯಲ್ಲಿ ಇಲ್ಲ. ಮಂಡ್ಯಕ್ಕೆ ಬಂದರೆ ನಿಖಿಲ್ ಕುಮಾರಸ್ವಾಮಿ ಅಥವಾ ದೇವೇಗೌಡರು ಬರಬಹುದು. ಒಂದು ವೇಳೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡಿದರೆ ನನಗೆ ಏನು ಮಾಡುವಿರಿ ಎಂದು ಕೇಳುತ್ತೇನೆ.

ದೇವೇಗೌಡರ ಕುಟುಂಬ ಬಿಟ್ಟು ಬೇರೆಯವರು ಅಭ್ಯರ್ಥಿ ಆಗಲು ಸಾಧ್ಯವಿಲ್ಲ. ಅವರನ್ನು ಬಿಟ್ಟರೆ ನಾನೇ ಸ್ಪರ್ಧಿ ಎಂದರು. ಲಕ್ಷ್ಮೀ ಅಶ್ವಿನ್ ಗೌಡ ಎಲ್ಲ ಚಿಂತೆ ಬಿಟ್ಟು ಮನೆಯಲ್ಲಿ ಆರಾಮವಾಗಿ ಇದ್ದಾರೆ. ಸುಖಾಸುಮ್ಮನೆ ಅವರನ್ನು ಎಳೆಯಬೇಡಿ ಎಂದ ಅವರು, ಲೋಕಸಭಾ ಚುನಾವಣೆ ಅಂದರೆ ಗ್ರಾಮ ಪಂಚಾಯತ್ ಚುನಾವಣೆ ಅಲ್ಲ ಎಂದರು.

ಸಚಿವ ಡಿ.ಸಿ.ತಮ್ಮಣ್ಣ ರಾಜಕೀಯ ಸಂದಿಗ್ಧ ಪರಿಸ್ಥಿತಿ ತಂದರು:

ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರ ಆರಂಭ ವಿಚಾರವಾಗಿ ಸಚಿವ ಡಿ.ಸಿ.ತಮ್ಮಣ್ಣ ರಾಜಕೀಯ ಸಂದಿಗ್ಧ ಪರಿಸ್ಥಿತಿಯನ್ನು ನಿರ್ಮಾಣ ಮಾಡಿ ಮದ್ದೂರು ಪಟ್ಟಣದಲ್ಲಿ ಆರಂಭ ಮಾಡುವಂತೆ ಮಾಡಿದರು. ಕೆಲವು ಅಧಿಕಾರಿಗಳ ಚಿತಾವಣೆಯಿಂದ ಮದ್ದೂರು ಪಾಲಾಯಿತು.

ನನಗೆ ಸೇವಾ ಕೇಂದ್ರವನ್ನು ಜಿಲ್ಲಾ ಕೇಂದ್ರದಲ್ಲಿ ಆರಂಭ ಮಾಡುವ ಮನಸ್ಸು ಇತ್ತು. ಆದರೆ ಕೆಲವು ಅಧಿಕಾರಿಗಳ ಚಿತಾವಣೆಯಿಂದ ಮದ್ದೂರಿಗೆ ಹೋಯಿತು. ಅದನ್ನು ಮಂಡ್ಯಕ್ಕೆ ತರುವುದು ಕಷ್ಟದ ಕೆಲಸವಲ್ಲ. ಆದರೆ ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಇದ್ದೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ