ಆ್ಯಪ್ನಗರ

ನೀರು ಮಿತವ್ಯಯ ಮಾಡದಿದ್ದರೆ ಅಪಾಯ

ನೀರು ಮಿತವ್ಯಯ ಮಾಡದಿದ್ದರೆ ಅಪಾಯ -ನೀರು ಬಳಕೆದಾರರ ಸಹಕಾರ ಮಂಡಳಗಳ ಸಮನ್ವಯ ಸಮಿತಿ ಸಭೆಯಲ್ಲಿ ಡಾ...

Vijaya Karnataka 29 Nov 2018, 5:00 am
-ನೀರು ಬಳಕೆದಾರರ ಸಹಕಾರ ಮಂಡಳಗಳ ಸಮನ್ವಯ ಸಮಿತಿ ಸಭೆಯಲ್ಲಿ ಡಾ.ರಾಜೇಂದ್ರ ಪೋದ್ಧಾರ
Vijaya Karnataka Web if not saving water in future many problem may come says dr rajendra poddar
ನೀರು ಮಿತವ್ಯಯ ಮಾಡದಿದ್ದರೆ ಅಪಾಯ

ಶ್ರೀರಂಗಪಟ್ಟಣ: ನೀರನ್ನು ಹಿತ ಮಿತವಾಗಿ ಬಳಕೆ ಮಾಡುವ ಕುರಿತು ರೈತರು ಸಾರ್ವಜನಿಕರಿಗೆ ನೀರು ಬಳಕೆದಾರರ ಸಂಘಗಳ ಪದಾಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಜಲಸಂಪನ್ಮೂಲ ಇಲಾಖೆ ನೆಲ ಮತ್ತು ಜಲ ನಿರ್ವಹಣಾ ಸಂಸ್ಥೆ ನಿರ್ದೇಶಕ ಡಾ.ರಾಜೇಂದ್ರ ಪೋದ್ಧಾರ ಸಲಹೆ ನೀಡಿದರು.

ತಾಲೂಕಿನ ಕೆಆರ್‌ಎಸ್‌ ಕಾವೇರಿ ಸಭಾಂಗಣದಲ್ಲಿ ಕೆಆರ್‌ಎಸ್‌, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಕುರಿತು ಅವಲೋಕನ, ಕರ್ನಾಟಕ ನೀರು ಬಳಕೆದಾರರ ಸಹಕಾರ ಮಹಾ ಮಂಡಳಗಳ ಸಮನ್ವಯ ಸಮಿತಿ ಸಭೆಯನ್ನು ಉದ್ಘಾಟಿಸಿ ನಂತರ ಅವರು ಮಾತನಾಡಿದರು.

''ನೀರನ್ನು ಅಪವ್ಯಯ ಮಾಡಿದರೆ ಮುಂದಿನ ದಿನಗಳಲ್ಲಿ ಬೆಲೆ ತೆರಬೇಕಾಗುತ್ತದೆ. ಕಾಸು ಕೊಟ್ಟರೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಿನಿಂದಲೇ ನೀರಿನ ಸಂರಕ್ಷ ಣೆ, ನೀರು ಪೋಲಾಗದಂತೆ ತಡೆಗಟ್ಟುವ ಸಂಬಂಧ ಜಾಗೃತಿ ಮೂಡಿಸಬೇಕು. ಹನಿ, ನೀರನ್ನು ಸದುಪಯೋಗ ಮಾಡಿಕೊಳ್ಳಬೇಕು. ನೀರು ವ್ಯರ್ಥವಾಗದಂತೆ ಎಚ್ಚರ ವಹಿಸಬೇಕು,'' ಎಂದು ಹೇಳಿದರು.

ಮಹಾ ಮಂಡಳ ಅಧ್ಯಕ್ಷ ಬಿ.ಎಂ ರಘು ಅಧ್ಯಕ್ಷ ತೆ ವಹಿಸಿದ್ದರು. ಮೈಸೂರು ಕಾಡಾ ಆಡಳಿತಾಧಿಕಾರಿ ಶಾಂತಕುಮಾರ್‌, ಕಾವೇರಿ ನೀರಾವರಿ ನಿಗಮ ಮುಖ್ಯ ಎಂಜಿನಿಯರ್‌ ಪ್ರಕಾಶ್‌, ಗೊರೂರು ಹೇಮಾವತಿ ಮುಖ್ಯ ಎಂಜಿನಿಯರ್‌ ಮಂಜಪ್ಪ, ಕೆಆರ್‌ಎಸ್‌ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳ ಉಪಾಧ್ಯಕ್ಷ ಮಂಗಲ ಯೋಗೇಶ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ