ಆ್ಯಪ್ನಗರ

ತಪ್ಪು ಮಾಡಿದ್ದರೆ ಬಂಧಿಸಿ

ಕೆ.ಆರ್‌.ಪೇಟೆ: ''ರೈತ ಹೋರಾಟಗಾರರು ತಪ್ಪು ಮಾಡಿದ್ದರೆ ಬಂಧಿಸಿ, ಜೈಲಿಗೆ ಕಳುಹಿಸಿ. ನಮ್ಮದೇನು ತಕರಾರಿಲ್ಲ. ಆದರೆ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡದೆ ಅಮಾಯಕರನ್ನು ಬಂಧಿಸಿರುವುದು ಎಷ್ಟು ಸರಿ?'' ಎಂದು ರೈತ ಹೋರಾಟಗಾರ ಮಂದಗೆರೆ ಜಯರಾಂ ಡಿವೈಎಸ್‌ಪಿ ಧರ್ಮೇಂದ್ರ ಅವರನ್ನು ಪ್ರಶ್ನಿಸಿದರು.

Vijaya Karnataka 29 Jun 2018, 5:00 am
ಕೆ.ಆರ್‌.ಪೇಟೆ ಪೊಲೀಸ್‌ ಠಾಣೆ ಎದುರು ಧರಣಿ
Vijaya Karnataka Web if wrong get arrested
ತಪ್ಪು ಮಾಡಿದ್ದರೆ ಬಂಧಿಸಿ


ರೈತ ಹೋರಾಟಗಾರರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ

ಕೆ.ಆರ್‌.ಪೇಟೆ: ''ರೈತ ಹೋರಾಟಗಾರರು ತಪ್ಪು ಮಾಡಿದ್ದರೆ ಬಂಧಿಸಿ, ಜೈಲಿಗೆ ಕಳುಹಿಸಿ. ನಮ್ಮದೇನು ತಕರಾರಿಲ್ಲ. ಆದರೆ, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಮಾಡದೆ ಅಮಾಯಕರನ್ನು ಬಂಧಿಸಿರುವುದು ಎಷ್ಟು ಸರಿ?'' ಎಂದು ರೈತ ಹೋರಾಟಗಾರ ಮಂದಗೆರೆ ಜಯರಾಂ ಡಿವೈಎಸ್‌ಪಿ ಧರ್ಮೇಂದ್ರ ಅವರನ್ನು ಪ್ರಶ್ನಿಸಿದರು.

ಪಟ್ಟಣದ ಪೊಲೀಸ್‌ ಠಾಣೆ ಮುಂಭಾಗ ರೈತ ಹೋರಾಟಗಾರರಾದ ಮೇಲೆ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು, ಜಾತಿ ನಿಂದನೆ ಆರೋಪದಡಿಯಲ್ಲಿ ಬಂಧಿಸಿರುವ ರೈತ ಮುಖಂಡ ಸಿಂದಘಟ್ಟ ರವಿ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ನೂರಾರು ರೈತರು ಪಟ್ಟಣ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

''ತಾಲೂಕಿನ ಮಾಕವಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ವಿಶಾಲಮೂರ್ತಿ ಅವರು ಕಚೇರಿಗೆ ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚೆ ಮಾಡಲು ಬಂದಿದ್ದ ರೈತ ಮುಖಂಡ ವಿರುದ್ಧ ಜಾತಿನಿಂದನೆ ಮತ್ತು ಹಲ್ಲೆ ಪ್ರಕರಣದ ಸುಳ್ಳು ಕೇಸನ್ನು ಮಾಡಿಸುವ ಮೂಲಕ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಹೊರಟಿದ್ದಾರೆ. ಸುಳ್ಳು ಮೊಕದ್ದಮೆಯ ಹಿನ್ನೆಲೆಯಲ್ಲಿ ತಪ್ಪು ಮಾಡದ ರೈತ ಹೋರಾಟಗಾರರು ಬಂಧಿಗಳಾಗಿ ಜೈಲು ಸೇರುವಂತಾಗಿದೆ. ಕೂಡಲೇ ಎರಡೂ ಕಡೆಯ ಮೊಕದ್ದಮೆಯನ್ನು ದಾಖಲಿಸಿ ಕ್ರಮ ತೆಗೆದುಕೊಳ್ಳಬೇಕು'' ಎಂದು ಡಿವೈಎಸ್‌ಪಿ ಅವರನ್ನು ಒತ್ತಾಯಿಸಿದರು.

ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರುಗಳೆರಡೂ ದಾಖಲಾಗಿವೆ. ರೈತ ಹೋರಾಟಗಾರರ ವಿರುದ್ಧ ಸುಳ್ಳು ದೂರು ದಾಖಲಿಸಿ ಶಿಕ್ಷೆಗೆ ಒಳಪಡಿಸಬೇಕೆಂಬ ದುರುದ್ದೇಶ ಪೊಲೀಸರಿಗಿಲ್ಲ. ಸತ್ಯಾಸತ್ಯತೆಯನ್ನು ಪರಿಶೀಲಿಸಿ ತಪ್ಪು ಮಾಡಿದವರನ್ನು ಮಾತ್ರ ಶಿಕ್ಷೆಗೆ ಒಳಪಡಿಸುತ್ತೇವೆ. ನಿಷ್ಪಕ್ಷ ಪಾತ ತನಿಖೆಯನ್ನು ಖುದ್ದು ನಾನೇ ನಡೆಸುತ್ತೇನೆ. ರೈತ ಮುಖಂಡರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ಬಳಿ ಇರುವ ಸಾಕ್ಷ್ಯಾಧಾರಗಳನ್ನು ಪೊಲೀಸರ ಮುಂದೆ ತನಿಖೆ ಸಮಯದಲ್ಲಿ ಹಾಜರುಪಡಿಸಬೇಕು'' ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ತಮ್ಮ ಪ್ರತಿಭಟನೆ ವಾಪಸ್‌ ಪಡೆದುಕೊಂಡರು.

ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳ ಸಬ್‌ಇನ್ಸ್‌ಪೆಕ್ಟರ್‌ಗಳು ಹಾಗೂ ಶಸಸ್ತ್ರ ಮೀಸಲು ಪಡೆಯ ತುಕಡಿಯ ಪೊಲೀಸರಿಂದ ಭದ್ರತೆ ಒದಿಗಸಲಾಗಿತ್ತು.

ರೈತ ಮುಖಂಡ ರಾಜೇಗೌಡ, ಡಿವೈಎಸ್‌ಪಿ ಧರ್ಮೇಂದ್ರ ಅವರೊಂದಿಗೆ ಮಾತನಾಡಿ, ''ರೈತರನ್ನು ರಾತ್ರಿ ಸಮಯದಲ್ಲಿ ಮನೆಯ ಬಾಗಿಲು ಬಡಿದು ಏಳಿಸಿ ಬಂಧಿಸುವ ಅಗತ್ಯವಿಲ್ಲ. ನಿಮ್ಮ ತನಿಖೆಯ ಸಮಯ ತಿಳಿಸಿದರೆ ನಾವೆ ಬಂದು ನಿಮ್ಮ ಕೆಲಸಕ್ಕೆ ಸಹಕರಿಸುತ್ತೇವೆ. ಪ್ರಸ್ತುತ ಬಂಧನದಲ್ಲಿರುವ ರೈತ ಮುಖಮಡ ರವಿ ಅವರನ್ನು ಬಿಡುಗಡೆ ಮಾಡಲು ಮುಂದಾಗಬೇಕು''ಎಂದು ಮನವಿ ಮಾಡಿದರು.

ತಾಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್‌, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ನೀತಿಮಂಗಲ ಮಹೇಶ್‌, ಉಪಾಧ್ಯಕ್ಷ ರಾದ ಬೂಕನಕೆರೆ ನಾಗರಾಜು, ರೈತ ಮುಖಂಡರಾದ ಕಾರಿಗನಹಳ್ಳಿ ಪುಟ್ಟೇಗೌಡ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ