ಆ್ಯಪ್ನಗರ

ಮಂಡ್ಯ: ಕೆಆರ್‌ಎಸ್ ಭರ್ತಿಗೆ ಎರಡೂವರೆ ಅಡಿ ಬಾಕಿ

ಈ ವರ್ಷ ಜಲಾಶಯ ತುಂಬುವುದೇ ಅನುಮಾನವಾಗಿತ್ತು. ಹೀಗಾಗಿ ಕನ್ನಂಬಾಕಟ್ಟೆ ತುಂಬಲೆಂದು ಪ್ರಾರ್ಥಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.7 ರಂದು ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮ ಮತ್ತು ವಿಶೇಷ ಪೂಜೆ ಮಾಡಿಸಿದ್ದರು.

Vijaya Karnataka Web 25 Oct 2021, 10:16 pm
ಮಂಡ್ಯ: ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಜೀವನಾಡಿ ಕೆಆರ್‌ಎಸ್ ಜಲಾಶಯ ಭರ್ತಿಗೆ ಇನ್ನು ಒಂದೂವರೆ ಅಡಿಯಷ್ಟೇ ಬಾಕಿಯಿದೆ. ಇನ್ನೆರಡು ದಿನಗಳಲ್ಲಿ ಕಟ್ಟೆ ಭರ್ತಿಯಾಗುವ ಸಾಧ್ಯತೆಯಿದೆ. ಗರಿಷ್ಠ 124.80 ಅಡಿಯುಳ್ಳ ಜಲಾಶಯದ ನೀರಿನ ಮಟ್ಟವು ಸೋಮವಾರ ರಾತ್ರಿ 9ರ ವೇಳೆಗೆ 123 ಅಡಿ ತಲುಪಿದೆ.
Vijaya Karnataka Web ಕೆಆರ್‌ಎಸ್‌
ಕೆಆರ್‌ಎಸ್‌


ಕಾವೇರಿ ಕಣಿವೆ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕನ್ನಂಬಾಡಿಕಟ್ಟೆಗೆ ಒಳ ಹರಿವಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಭಾನುವಾರ ಸಂಜೆ 13,204 ಕ್ಯುಸೆಕ್‌ ಇದ್ದ ಒಳ ಹರಿವಿನ ಪ್ರಮಾಣವು ಸೋಮವಾರ ಬೆಳಗ್ಗೆ 16,385 ಕ್ಯುಸೆಕ್‌ಗೆ ಹಾಗೂ ರಾತ್ರಿ ವೇಳೆಗೆ 17,870 ಕ್ಯುಸೆಕ್‌ಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚುವರಿಯಾಗಿ 10,000 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಶ್ರೀರಂಗಪಟ್ಟಣ: ಭಾರಿ ಮಳೆಗೆ ಮನೆಗಳು ಕುಸಿತ

ಕಳೆದ ವರ್ಷ ಇದೇ ಅವಧಿಯಲ್ಲಿ 6747 ಕ್ಯುಸೆಕ್ ಮಾತ್ರವಷ್ಟೇ ಒಳಹರಿವಿತ್ತು. 4649 ಕ್ಯುಸೆಕ್ ನೀರನ್ನು ಕಟ್ಟೆಯಿಂದ ಹೊರ ಬಿಡಲಾಗುತ್ತಿತ್ತು. ಆದರೆ, ಈ ವರ್ಷ ಹೊರ ಹರಿವಿನ ಪ್ರಮಾಣವನ್ನು ಸೋಮವಾರ ರಾತ್ರಿ 3474ಕ್ಕೆ ಇಳಿಸಲಾಗಿದೆ. ಅಲ್ಲದೆ ಮೂರ್ನಾಲ್ಕು ದಿನಗಳಿಂದ ಹೊರ ಹರಿವಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇದೇ ಅವಧಿಯಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಲಾಶಯದ ನೀರಿನ ಮಟ್ಟ ದಿನೇದಿನೇ ಏರಿಕೆಯಾಗುತ್ತಿದೆ.

ಮಂಡ್ಯದಲ್ಲಿ ವರುಣ ದೇವನ ರುದ್ರ ನರ್ತನ: ನದಿಗಳಂತಾದ ರಸ್ತೆಗಳು!

ಈ ವರ್ಷ ಜಲಾಶಯ ತುಂಬುವುದೇ ಅನುಮಾನವಾಗಿತ್ತು. ಹೀಗಾಗಿ ಕನ್ನಂಬಾಕಟ್ಟೆ ತುಂಬಲೆಂದು ಪ್ರಾರ್ಥಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅ.7 ರಂದು ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮ ಮತ್ತು ವಿಶೇಷ ಪೂಜೆ ಮಾಡಿಸಿದ್ದರು. ಕಾಕತಾಳೀಯ ಎಂಬಂತೆ ಆಗಿನಿಂದಲೇ ಒಳ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಕಟ್ಟೆಯ ಭರ್ತಿಯಂಚು ತಲುಪಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ