ಆ್ಯಪ್ನಗರ

ತುಂಬುತಿದೆ ಕೆಆರ್‌ಎಸ್‌ ಜಲಾಶಯ: 100 ಅಡಿ ದಾಟಿದ ನೀರಿನ ಮಟ್ಟ

ಉತ್ತರ ಕರ್ನಾಟಕದಲ್ಲಿ ಮಾತ್ರವಲ್ಲದೇ ಈಗ ಕಾವೇರಿ ನದಿ ಪಾತ್ರದಲ್ಲೂ ಧಾರಾಕಾರ ಮಳೆಯಾಗಿದೆ. ಇದರಿಂದ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ.

Vijaya Karnataka Web 9 Aug 2019, 7:33 pm
ಮಂಡ್ಯ: ಕೆ.ಆರ್.ಎಸ್. ಜಲಾಶಯಕ್ಕೆ 73284 ಕ್ಯುಸೆಕ್ ನೀರು ಹರಿದುಬರುತ್ತಿದ್ದು ಜಲಾಶಯದ ನೀರಿನ ಮಟ್ಟವು 102 ಅಡಿ ತಲುಪಿದೆ.
Vijaya Karnataka Web ಕೆಆರ್‌ಎಸ್‌
ಕೆಆರ್‌ಎಸ್‌


ಶುಕ್ರವಾರ ಮಧ್ಯಾಹ್ನದ ವೇಳೆಗೆ ನೂರರ ಗಡಿದಾಟಿದ ಜಲಾಶಯದ ನೀರಿನ ಮಟ್ಟವು ಸಂಜೆವೇಳೆಗೆ ಇನ್ನು ಎರಡು ಅಡಿಯಷ್ಟು ಹೆಚ್ಚಾಗಿತ್ತು. ಗರಿಷ್ಠ 124.80 ಅಡಿಯುಳ್ಳ ಜಲಾಶಯವು 49.452 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಪ್ರಸ್ತುತ 24.417 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು ಜಲಾಶಯದ ಹೊರಹರಿವಿನ ಪ್ರಮಾಣವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.

ಆದಾಗ್ಯೂ 469 ಕ್ಯುಸೆಕ್ ಸೋರಿಕೆ ನೀರು ನಾಲೆಗಳಲ್ಲಿ ಹರಿದು ಹೋಗುತ್ತಿದೆ.

ಸ್ಟಾಂಡರ್ಡ್ ವೆಜಿನ ಮಾಹಿತಿ ಪ್ರಕಾರ ಕಾವೇರಿ ನದಿಯಿಂದ 59360 ಕ್ಯುಸೆಕ್, ಹೇಮಾವತಿ ನದಿಯಿಂದ 30000 ಕ್ಯುಸೆಕ್ ಹಾಗೂ ಲಕ್ಷ್ಮಣತೀರ್ಥ ನದಿಯಿಂದ 20199 ಕ್ಯುಸೆಕ್ ಸೇರಿದಂತೆ 1,10,159 ನೀರು ಜಲಾಶಯ ದತ್ತ ಹರಿದುಬರುತ್ತಿದೆ.

ಇದೇ ಪ್ರಮಾಣದ ನೀರು ಹರಿದುಬಂದರೆ ಶನಿವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟವು 110 ಅಡಿ ತಲುಪುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ