ಆ್ಯಪ್ನಗರ

ಮಂಡ್ಯ: ಮೂರು ದಿನಗಳಲ್ಲಿ ಮೂರು ಅಡಿ ಹೆಚ್ಚಾದ ಕೆಆರ್‌ಎಸ್ ಜಲಾಶಯದ ಮಟ್ಟ

ಭಾರಿ ಮಳೆಯಿಂದಾಗಿ ಕೆಆರ್‌ಎಸ್‌ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ, ನೀರಿನ ಮಟ್ಟವೂ ಏರಿಕೆಯಾಗುತ್ತಿರುವುದರಿಂದ ನಾಲೆಗಳಿಗೆ ನೀರು ಹರಿಸುವಂತೆ ರೈತರ ಬೇಡಿಕೆ ಹೆಚ್ಚಾಗಿದೆ.

Vijaya Karnataka Web 8 Jul 2019, 7:50 pm
ಮಂಡ್ಯ: ಕೊಡಗು ಮತ್ತು ವಯನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹಂತ ಹಂತವಾಗಿ ಹೆಚ್ಚುತ್ತಿದೆ. ಪರಿಣಾಮ ಕೇವಲ ಮೂರು ದಿನಗಳ ಅಂತರದಲ್ಲಿ ಜಲಾಶಯದ ನೀರಿನ ಮಟ್ಟವು 3 ಅಡಿಯಷ್ಟು ಹೆಚ್ಚಾಗಿದೆ.
Vijaya Karnataka Web ಕೆಆರ್‌ಎಸ್‌
ಕೆಆರ್‌ಎಸ್‌


ವಾಸ್ತವವಾಗಿ ಕಳೆದ 12 ದಿನಗಳಿಂದಲೂ ಜಲಾಶಯದ ಒಳ ಹರಿವು ಪ್ರಮಾಣ ಸಣ್ಣದಾಗಿ ಹೆಚ್ಚಾಗುತ್ತಿತ್ತು. ಜೂ.27ರಂದು 303 ಕ್ಯುಸೆಕ್‌ ಇದ್ದ ಒಳ ಹರಿವು 28ರಂದು 655 ಕ್ಯುಸೆಕ್‌, 29ರಂದು 956 ಕ್ಯುಸೆಕ್‌ಗೆ ಹೆಚ್ಚಾಗಿತ್ತು. ಪುನಃ ಜೂ.30ರಂದು 907 ಕ್ಯುಸೆಕ್‌, ಜು.1ರಂದು 669, ಜು.3ರಂದು 650 ಹಾಗೂ ಜು.4ರಂದು 622 ಕ್ಯುಸೆಕ್‌ಗೆ ಇಳಿಕೆಯಾಗಿತ್ತು.

ಆದರೆ, ಪುನಃ ಜು.5ರಿಂದ ಗಣನೀಯ ಪ್ರಮಾಣದಲ್ಲಿ ಒಳ ಹರಿವು ಹೆಚ್ಚಾಗಿದೆ.

ಅದರಂತೆ ಜು.5ರಂದು 1441 ಕ್ಯುಸೆಕ್‌ ಒಳ ಹರಿವಿನೊಂದಿಗೆ ಜಲಾಶಯದ ನೀರಿನ ಮಟ್ಟವು 80.40 ಅಡಿ ಇತ್ತು. ಜು.6ರಂದು 2222 ಕ್ಯುಸೆಕ್‌, ಜು.7ರಂದು 4651 ಕ್ಯುಸೆಕ್‌ಗೆ ಹೆಚ್ಚಾಗಿತ್ತು.

ಸೋಮವಾರ (ಜು.8) ಒಮ್ಮೆಗೆ 12,039 ಕ್ಯುಸೆಕ್‌ಗೆ ಏರಿಕೆ ಕಂಡು ಪುನಃ ಸಂಜೆ ವೇಳೆಗೆ 8943 ಕ್ಯುಸೆಕ್‌ಗೆ ಕುಸಿದಿದೆ. ಆದರೆ, ಕಳೆದ ಮೂರು ದಿನಗಳ ಅವಯಲ್ಲಿ ಜಲಾಶಯದ ನೀರಿನ ಮಟ್ಟವು 3 ಅಡಿ ಹೆಚ್ಚಾಗಿರುವುದು ಮಂಡ್ಯ ಜಿಲ್ಲೆಯ ರೈತರಿಗೆ ಖುಷಿ ತಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ