ಆ್ಯಪ್ನಗರ

ಭೂಮಿಗೆ ಏಕರೂಪದ ಬೆಲೆ ನಿಗದಿಗೆ ಒತ್ತಾಯ

ತಾಲೂಕಿನ ಕೊತ್ತತ್ತಿ ಹೋಬಳಿಯ ಎಲೆಚಾಕನಹಳ್ಳಿ ಹಾಗೂ ತೂಬಿನಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ವಶಪಡಿಸಿಕೊಂಡಿರುವ ಭೂಮಿಗೆ ಏಕ ಪ್ರಕಾರದ ಬೆಲೆ ಪಡಿಸಿಸುವಂತೆ ಒತ್ತಾಯಿಸಿ ತೂಬಿನಕೆರೆಯಲ್ಲಿ ಸಂತ್ರಸ್ತ ರೈತರು ಶನಿವಾರ ಪ್ರತಿಭಟನೆ ನಡೆಸಿದರು.

Vijaya Karnataka 31 Dec 2017, 5:15 am
ಮಂಡ್ಯ: ತಾಲೂಕಿನ ಕೊತ್ತತ್ತಿ ಹೋಬಳಿಯ ಎಲೆಚಾಕನಹಳ್ಳಿ ಹಾಗೂ ತೂಬಿನಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ವಶಪಡಿಸಿಕೊಂಡಿರುವ ಭೂಮಿಗೆ ಏಕ ಪ್ರಕಾರದ ಬೆಲೆ ಪಡಿಸಿಸುವಂತೆ ಒತ್ತಾಯಿಸಿ ತೂಬಿನಕೆರೆಯಲ್ಲಿ ಸಂತ್ರಸ್ತ ರೈತರು ಶನಿವಾರ ಪ್ರತಿಭಟನೆ ನಡೆಸಿದರು.
Vijaya Karnataka Web insist on the price of a homogenous price
ಭೂಮಿಗೆ ಏಕರೂಪದ ಬೆಲೆ ನಿಗದಿಗೆ ಒತ್ತಾಯ


ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಶಾಮಿಯಾನ ಹಾಕಿಕೊಂಡು ದಿನವಡೀ ಧರಣಿ ನಡೆಸಿದ ರೈತರು, ತಮ್ಮಿಂದ ವಶಪಡಿಸಿ ಕೊಂಡಿರುವ ಭೂಮಿಗೆ ನ್ಯಾಯ ಯುತ ಬೆಲೆ ಕೊಡ ಬೇಕೆಂದು ಆಗ್ರಹಿಸಿದರು. ಇಂದು ಶಾಂತಿಯುತವಾಗಿ ಹೋರಾಟ ನಡೆಸಲಾಗು ತ್ತಿದೆ. ತಮ್ಮ ಬೇಡಿಕೆ ಈಡೇರಿಕೆಗೆ ಸರಕಾರ ತಕ್ಷಣ ಕ್ರಮ ವಹಿಸಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರ್ನಾಟಕ ಗೃಹ ಮಂಡಳಿಯು 2014ರಲ್ಲಿ 199 ಎಕರೆ ಭೂಮಿಯನ್ನು ರೈತರಿಂದ ಪಡೆದುಕೊಳ್ಳುತ್ತೇವೆಂದು ಪ್ರಕಟಿಸಿ, 2017ರ ನವೆಂಬರ್‌ನಲ್ಲಿ ಸರಕಾರ ಆದೇಶ ಹೊರಡಿಸಿದೆ. ಇದರಲ್ಲಿ ಒಂದು ಎಕರೆಗೆ 1.73 ಲಕ್ಷ ರೂ.ಗಳನ್ನು ನಿಗಧಿಪಡಿಸಿ, 126 ಎಕರೆ ಹಾಗೂ 46 ಎಕರೆ ಪ್ರತ್ಯೇಕ ಭೂಮಿಗೆ 11 ಲಕ್ಷ ರೂ.ಗಳನ್ನು ನಿಗಧಿ ಮಾಡಿ ಮಂಡಳಿ ಆದೇಶ ನೀಡಿದೆ. ಅಂದಿನ ಸಚಿವರಾಗಿದ್ದ ಅಂಬರೀಶ್ ಅವರು ರೈತರಿಗೆ ಒಂದು ಎಕರೆ ಭೂಮಿಗೆ 52 ಲಕ್ಷ ರೂ. ನೀಡುತ್ತೇವೆಂದು ನಂಬಿಸಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಎಲೆಚಾಕನಹಳ್ಳಿ ಹಾಗೂ ತೂಬಿನಕೆರೆ ವ್ಯಾಪ್ತಿಗೆ ಸೇರಿದ ಭೂಮಿಗೆ ರೈಲ್ವೆ ಇಲಾಖೆ ಒಂದು ಎಕರೆಗೆ 40 ಲಕ್ಷರೂ.ಗಳನ್ನು 2013-14ನೇ ಸಾಲಿನಲ್ಲಿ ರೈತರಿಗೆ ನೀಡಿದೆ. ಅಲ್ಲದೆ, ಇತ್ತೀಚೆಗೆ ಮೈಸೂರು-ಬೆಂಗಳೂರು ಹೆದ್ದಾರಿಗೆ 1 ಗುಂಟೆಗೆ 27 ಲಕ್ಷ ರೂ.ಗಳನ್ನು ಪ್ರಕಟಿಸಿದೆ. ಆದರೆ ಕೆಎಚ್‌ಬಿ ಹಾಗೂ ಜಿಲ್ಲಾಡಳಿತದವರು ರೈತರನ್ನು ಕಡೆಗಣಿಸಿ ವಂಚಿಸಲಾಗಿದೆ. ಎಲೆಚಾಕನಹಳ್ಳಿ ಹಾಗೂ ತೂಬಿನಕೆರೆ ಗ್ರಾಮಸ್ಥರು ತುಂಡು ಭೂಮಿ ಹೊಂದಿದ್ದಾರೆ. ಆರ್ಥಿಕವಾಗಿ ಶಕ್ತರಲ್ಲ, ರೈತರೆಲ್ಲರೂ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿದಾಗ ಅವರು ನಿಮಗೆ ಅನ್ಯಾಯವಾಗಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಜಾರಿಕೆಯ ಉತ್ತರ ನೀಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಈ ಭಾಗದ ರಾಜಕೀಯ ಪ್ರಾತಿನಿಧ್ಯ ಪಡೆದ ಜನಪ್ರತಿನಿಧಿಗಳೂ ಸಹ ನಮ್ಮ ನೋವನ್ನು ಕೇಳುವವರಿಲ್ಲದಂತಾಗಿದೆ. ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ಸಲುವಾಗಿ ಈ ಹೋರಾಟ ಮಾಡುವ ಅನಿವಾರ‌್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ರೈತರು ಬಳಲಿ ಬೆಂಡಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದೇವೆ. ಈ ಭಾಗದ ಜಮೀನಿಗೆ ಏಕಪ್ರಕಾರದ ಬೆಲೆ ನಿಗದಿ ಮಾಡಿ ನ್ಯಾಯಯುತ ಬೆಲೆ ಕೊಡಿಸಿಕೊಡಬೇಕು. ಇಲ್ಲವಾದರೆ ರೈತರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಶಂಕರೇಗೌಡ, ಗಣೇಶಪ್ಪ, ಜಯಶಂಕರ್, ಬಸವರಾಜು, ಕೃಷ್ಣೇಗೌಡ, ಪ್ರಸನ್ನ, ರಾಮಚಂದ್ರು, ರೆಡ್ಡಿ ಗೋಪಾಲ್, ವಿಷಕಂಠು, ಶಿವಣ್ಣ, ಕುಮಾರ್, ಚನ್ನೇಗೌಡ, ಸತೀಶ್, ಚಂದ್ರಶೇಖರ್ ಆರಾಧ್ಯ, ಚಿಕ್ಕಸಿದ್ದ0್ಯು, ಶಿವರಾಮು, ಕೆಂಪೇಗೌಡ, ಜವರಯ್ಯ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ