ಆ್ಯಪ್ನಗರ

ಐಟಿ ದಾಳಿ, ಭಯೋತ್ಪಾದಕರ ದಾಳಿಯಲ್ಲ: ಸಿ.ಟಿ.ರವಿ

ಸಿಟಿರವಿ ವಿಕ ಸುದ್ದಿಲೋಕ ಮಂಡ್ಯ ಐಟಿ ದಾಳಿ ರಾಜಕೀಯ ಪ್ರೇರಿತ ದಾಳಿ ಎಂದು ಬೊಬ್ಬೆ ಹೊಡೆಯಲು ಅದೇನು ಭಯೋತ್ಪಾದಕರ ದಾಳಿಯಲ್ಲ...

Vijaya Karnataka 31 Mar 2019, 5:00 am
ಮಂಡ್ಯ: ಐಟಿ ದಾಳಿ ರಾಜಕೀಯ ಪ್ರೇರಿತ ದಾಳಿ ಎಂದು ಬೊಬ್ಬೆ ಹೊಡೆಯಲು ಅದೇನು ಭಯೋತ್ಪಾದಕರ ದಾಳಿಯಲ್ಲ. ದಾಳಿ ಬೇಡವನ್ನೆಲು ಅವರೇನು ಸಂವಿಧಾನಕ್ಕೂ ಮೀರಿದವರೇ? ನಿಜವಾದ ಭಯೋತ್ಪಾದಕರಿಂದ ದಾಳಿ ನಡೆದಾಗ ಬೀದಿಗಿಳಿಯದವರು ಈಗ ಬೀದಿಗೆ ಬಂದಿರುವುದನ್ನು ನೋಡಿದರೆ ಜನರಿಗೆ ಇವರೇನು ಸಂದೇಶ ಕೊಡಲು ಹೊರಟಿದ್ದಾರೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
Vijaya Karnataka Web it attack not terrorist attacks ct ravi
ಐಟಿ ದಾಳಿ, ಭಯೋತ್ಪಾದಕರ ದಾಳಿಯಲ್ಲ: ಸಿ.ಟಿ.ರವಿ


ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ಬೇಹುಗಾರಿಕೆ ಇಲಾಖೆ ಮಾಹಿತಿ ಆಧರಿಸಿ ರಾಜ್ಯದಲ್ಲಿ ಐಟಿ ದಾಳಿ ನಡೆದಿದೆ. ನೂರಾರು ಕೋಟಿ ರೂ.ಗಳನ್ನು ಗುತ್ತಿಗೆದಾರರಿಗೆ ಬಿಲ್‌ ಮಾಡಿಕೊಡಲಾಗಿದೆ. ಹೆಚ್ಚುವರಿಯಾಗಿಯೂ ಹಣ ಡ್ರಾ ಮಾಡಲಾಗಿದೆ. ಇದು ಚುನಾವಣಾ ಅಕ್ರಮಕ್ಕೆ ಬಳಕೆಯಾಗಬಹುದೆಂಬ ಸಂಶಯದಿಂದ ನಡೆದಿರುವ ದಾಳಿ ಇದಾಗಿದೆ. ಇದೇನು ಭಯೋತ್ಪಾದಕರ ದಾಳಿ ಅಲ್ಲವಲ್ಲ,'' ಎಂದರು.

''ಬೀದಿಗಿಳಿಯುವ ಮೂಲಕ ನಿಮಗೂ- ಕಪ್ಪು ಹಣ ಹೊಂದಿರುವವರಿಗೂ ಗಟ್ಟಿ ಸಂಬಂಧವಿದೆ ಎಂಬ ಸಂದೇಶ ನೀಡುತ್ತಿದ್ದೀರಾ? ಗುತ್ತಿಗೆದಾರರು, ಎಂಜಿನಿಯರ್‌ಗಳ ಮನೆ ಮೇಲೆ ನಡೆದ ದಾಳಿ ರಾಜಕೀಯ ದಾಳಿ ಹೇಗಾಗುತ್ತದೆ? ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರ ಮನೆ ಮೇಲೆ ದಾಳಿ ನಡೆದಿದೆಯೇ? ಗೌಪ್ಯತನ ಕಾಪಾಡುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಐಟಿ ದಾಳಿ ಬಗ್ಗೆ ಮೊದಲೇ ಮುನ್ಸೂಚನಾ ಹೇಳಿಕೆ ಕೊಟ್ಟು ಭ್ರಷ್ಟರಿಗೆ ಸಿಗ್ನಲ್‌ ಕೊಟ್ಟಿದ್ದಾರೆ. ಸಿಎಂ ಕೊಟ್ಟ ಮಾಹಿತಿ ಅಕ್ರಮ ಹಣ ಮುಚ್ಚಿಡಲು ನೆರವಾಗಿದೆ,'' ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ