ಆ್ಯಪ್ನಗರ

​ಐಟಿ ರಾಜಕೀಯವಾಗಿ ದುರುಪಯೋಗ: ಸಿಎಂ

ಇನ್‌ಕಂ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ ಅವರ ಬಳಿ ಇದೆ, ಉದ್ದೇಶ ಪೂರ್ವಕವಾಗಿ ದಾಳಿ ನಡೆಸುವ ಮೂಲಕ ಆ ಇಲಾಖೆಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka Web 12 Jan 2018, 4:42 pm
ಮಳವಳ್ಳಿ: ಇನ್‌ಕಂ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ ಅವರ ಬಳಿ ಇದೆ, ಉದ್ದೇಶ ಪೂರ್ವಕವಾಗಿ ದಾಳಿ ನಡೆಸುವ ಮೂಲಕ ಆ ಇಲಾಖೆಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Vijaya Karnataka Web it dept misused by central govt
​ಐಟಿ ರಾಜಕೀಯವಾಗಿ ದುರುಪಯೋಗ: ಸಿಎಂ


ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ ಬಿಜೆಪಿಯವರಿಂದ ಕಾಂಗ್ರೆಸ್ ವಿರುದ್ಧ ಚಾರ್ಜ್ ಶೀಟ್ ಸಿದ್ಧತೆ ವಿಚಾರಕ್ಕೆ ಪ್ರತಿಕ್ರಿಯಿಸಿ. ನಮ್ಮಲ್ಲೂ ಕೇಂದ್ರ ಸರಕಾರದ ವಿರುದ್ಧದ ಚಾರ್ಜ್ ಶೀಟ್ ಇದೆ ಎಂದರು.

ಬಂಡಾಯ ಶಾಸಕರನ್ನು ಪಕ್ಷ ಕ್ಕೆ ಸೇರಿಸುವ ವಿಚಾರದಲ್ಲಿ ಹೈ ಕಮಾಂಡ್ ಜತೆ ಮಾತಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು. ನಾಳೆ ದೆಹಲಿಯಲ್ಲಿ ನಾಯಕನ್ನು ಭೇಟಿ ಮಾಡುತ್ತಿದ್ದು.ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ರಾಹುಲ್ ಗಾಂಧಿ ಜ.27ರಿಂದ 29ರವರೆಗೆ ರಾಜ್ಯ ಪ್ರವಾಸ ಮಾಡುವರು ಎಂದರು.

ಕಾವೇರಿ ಅಂತಿಮ ತೀರ್ಪು ರಾಜ್ಯದ ಪರ ಬರುವ ಆಶಾಭಾವವಿದೆ ಎಂದ ಮುಖ್ಯಮಂತ್ರಿ ಜ..16ರಿಂದ ಬಜೆಟ್ ಸಿದ್ಧತೆ ಕಾರ್ಯ ನಡೆಯುವುದು ಎಂದು ಹೇಳಿದರು.
ಮಳವಳ್ಳಿಯ ಜನರು ನನಗೆ ಪ್ರೀತಿ, ಸಹಕಾರ ಕೊಟ್ಟಿದ್ದೀರಿ.ಶಿವಣ್ಣ, ನರೇಂದ್ರ ಸ್ವಾಮಿ ಆಪ್ತರು.ಇಬ್ಬರ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇವೆ. ಇಬ್ಬರೂ ಸೇರಿ ಚುನಾವಣೆ ಮಾಡಬೇಕು.ಇದೇ ನಿಮ್ಮ ಅಭಿಪ್ರಾಯ ಕೂಡ ಆಗಿದೆ ಎಂದು ಸಿಎಂ ಹೇಳಿದರು.

ನರೇಂದ್ರ ಸ್ವಾಮಿ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದಿದ್ದಾರೆ. ನನ್ನ ಕ್ಷೇತ್ರಕ್ಕೂ ಅಷ್ಟು ಅನುದಾನ, ಯೋಜನೆ ಕೊಟ್ಟಿಲ್ಲ. ಮುಂದೆ ಅವರು ಶಾಸಕರಾಗುವುದರಲ್ಲಿ ಅನುಮಾನವಿಲ್ಲ. ಮಳವಳ್ಳಿ ಕ್ಷೇತ್ರದಲ್ಲಿ ಕೆರೆ ತುಂಬಿಸುವ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ ಎಂದು ಹೇಳಿದರು.

ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಸತ್ಯ.ಸರಕಾರಿ ದುಡ್ಡಿಂದ ಸಮಾವೇಶ ಮಾಡುತ್ತಾನೆ ಎಂದು ಕೆಲವರು ಹೇಳುತ್ತಾರೆ. ಮೋದಿ ಸ್ವಂತ ದುಡ್ಡಿಂದ ವಿದೇಶಕ್ಕೆ ಹೋಗುತ್ತಾರೆಯೇ ಎಂದು ಸಿಎಂ ಪ್ರಶ್ನಿಸಿದರು.

'ಬಿಜೆಪಿಯವರಿಗೆ ಎರಡು ನಾಲಿಗೆ, ಈ ಹಿಂದೆ ಯಡಿಯೂರಪ್ಪ ಸಾಲಮನ್ನಾ ಸಾಧ್ಯವಿಲ್ಲ ಅಂದಿದ್ದರು .ಇಂದು ಧಿಕಾರಕ್ಕೆ ಬಂದರೆ ಮನ್ನಾ ಮಾಡುತ್ತೇನೆ ಅನ್ನುತ್ತಾರೆ, ಇವರದ್ದು ಎರಡು ನಾಲಿಗೆ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಕೆಜೆಪಿ ಅಧ್ಯಕ್ಷರಾಗಿದ್ದಾಗ ಟಿಪ್ಪು ಜಯಂತಿ ಮಾಡಿ ತಲೆಗೆ ಪೇಟ, ಕೈಯಲ್ಲಿ ಖಡ್ಗ, ಪಕ್ಕದಲ್ಲಿ ಶೋಭಾ ನಿಂತಿದ್ದರು.ಇವತ್ತು ಟಿಪ್ಪು ಮತಾಂಧ, ದೇಶದ್ರೋಹಿ ಅನ್ನುತ್ತಾರೆ. ಬಿಜೆಪಿಯವರು ಇತಿಹಾಸ ಅರಿಯಬೇಕು. ಟಿಪ್ಪು ದೇಶ ಪ್ರೇಮಿ ಎಂದರು.

ತಾವು ಅಧಿಕಾರಕ್ಕೆ ಬಂದರೆ ಸಿ.ಎಂ. ಸಿದ್ದರಾಮಯ್ಯ ಭಾಗ್ಯ ರದ್ದು‌ಪಡಿಸುವುದಾಗಿ ಹೇಳುತ್ತಾರೆ. ಇಂಥವರಿಗೆ ಮತ ನೀಡಬೇಡಿ ಎಂದು ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಮನವಿ ಸ್ವೀಕರಿಸಲು ನಿರಾಕರಿಸಿದ್ದಕ್ಕೆ ಸಿಎಂ ವಿರುದ್ಧ ಸದಸ್ಯರು ಘೋಷಣೆ ಕೂಗಿದರು. ಸಾಧನಾ ಸಮಾವೇಶದ ವೇದಿಕೆಯಲ್ಲೇ ಸಿಎಂ ತೂಕಡಿಸುತ್ತಲೇ ನಿದ್ದೆಗೆ ಜಾರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ