ಆ್ಯಪ್ನಗರ

ಜೆಡಿಎಸ್ ಕಾರ‌್ಯಕರ್ತರ ಬೈಕ್ ರ‌್ಯಾಲಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಗಮನದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ‌್ಯಕರ್ತರು ಮಂಡ್ಯದಿಂದ ತೂಬಿನಕೆರೆ ಮಾರ್ಗವಾಗಿ ಅರಕೆರೆ ಗ್ರಾಮದವರೆಗೆ ಬೈಕ್‌ರ‌್ಯಾಲಿ ನಡೆಸಿದರು.

Vijaya Karnataka 6 Nov 2017, 5:16 am
ಮಂಡ್ಯ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಗಮನದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ‌್ಯಕರ್ತರು ಮಂಡ್ಯದಿಂದ ತೂಬಿನಕೆರೆ ಮಾರ್ಗವಾಗಿ ಅರಕೆರೆ ಗ್ರಾಮದವರೆಗೆ ಬೈಕ್‌ರ‌್ಯಾಲಿ ನಡೆಸಿದರು.
Vijaya Karnataka Web jds activists bike rally
ಜೆಡಿಎಸ್ ಕಾರ‌್ಯಕರ್ತರ ಬೈಕ್ ರ‌್ಯಾಲಿ


ಜೆಡಿಎಸ್ ಮುಖಂಡ ಕೆ.ಕೆ.ರಾಧಾಕೃಷ್ಣ ಕೀಲಾರ ನೇತೃತ್ವದಲ್ಲಿ ನೂರಾರು ಮಂದಿ ಜೆಡಿಎಸ್ ಕಾರ‌್ಯಕರ್ತರು ಮಂಡ್ಯ ನಗರದಿಂದ ಬೈಕ್ ರ‌್ಯಾಲಿ ಹೊರಟರು. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆದ ಬಳಿಕ ಪ್ರಥಮ ಬಾರಿಗೆ ಮಂಡ್ಯಕ್ಕೆ ಆಗಮಿಸುತ್ತಿರುವ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಮಂಡ್ಯ, ಮೇಲುಕೋಟೆ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ನೂರಾರು ಮಂದಿ ರ‌್ಯಾಲಿಯಲ್ಲಿ ತೆರಳಿದರು.

ಇತ್ತ ಮಂಡ್ಯದಿಂದ ಹೊರಟ ಜೆಡಿಎಸ್ ಕಾರ‌್ಯಕರ್ತರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳು ತಾಲೂಕಿನ ತೂಬಿನಕೆರೆ ಹೆಲಿಪ್ಯಾಡ್ ಬಳಿ ತಮ್ಮ ನೆಚ್ಚಿನ ನಾಯಕನ ಸ್ವಾಗತಕ್ಕೆ ತೆರಳಿದರು. ಆದರೆ, ಕುಮಾರಸ್ವಾಮಿ ಬರುವುದು ತಡವಾಗಿದ್ದರಿಂದ ಅವರ ಆಗಮನಕ್ಕಾಗಿ ಕಾರ‌್ಯಕರ್ತರು ತಾಸುಗಟ್ಟಲೆ ಕಾಯುವಂತಾಗಿತ್ತು. ಕುಮಾರಸ್ವಾಮಿ ಬಂದ ನಂತರ ಅವರನ್ನು ಸ್ವಾಗತಿಸಿ, ಅರಕೆರೆಯತ್ತ ಪಯಣ ಬೆಳೆಸಿದರು.

ಇದಕ್ಕೂ ಮೊದಲು ಮಂಡ್ಯದಲ್ಲಿ ರ‌್ಯಾಲಿಯ ನೇತೃತ್ವ ವಹಿಸಿದ್ದ ಕೆ.ಕೆ.ರಾಧಾಕೃಷ್ಣ ಕೀಲಾರ ಮಾತನಾಡಿ, ಅರಕೆರೆ ಗ್ರಾಮಕ್ಕೆ ಆಗಮಿಸುತ್ತಿರುವ ಕುಮಾರಸ್ವಾಮಿ ಅವರು ಶ್ರೀರಂಗಪಟ್ಟಣ ಕ್ಷೇತ್ರದ ಪ್ರಭಾವಿ ಮುಖಂಡ ರವೀಂದ್ರ ಶ್ರೀಕಂಠಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಶ್ರೀರಂಗಪಟ್ಟಣದ ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ಕುಮಾರಸ್ವಾಮಿವರನ್ನು ಬೆಂಬಲಿಸಿ ರ‌್ಯಾಲಿ ಹೊರಟಿದ್ದೇವೆ ಎಂದು ತಿಳಿಸಿದರು.

2018ರಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯಾಗಲು ಈ ಬೈಕ್ ಜಾಥಾ ಮುನ್ನುಡಿ ಬರೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೀಲಾರ ಚನ್ನೇಗೌಡ, ದರ್ಶನ್, ಕೃಷ್ಣ ಸೇರಿದಂತೆ ಇತರ ಕಾರ‌್ಯಕರ್ತರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ