ನವೀನ್ ಮಂಡ್ಯ
ಜಿಲ್ಲಾಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮನ್ಮುಲ್) ಆಡಳಿತ ಮಂಡಳಿ ಚುನಾವಣೆಯಲ್ಲಿಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಜೆಡಿಎಸ್ಗೆ ಅಧಿಕಾರದ ಹಾದಿ ಸುಲಭವಾಗಿಲ್ಲ. ಕೇವಲ ಒಂದು ಸ್ಥಾನ ಗೆದ್ದಿರುವ ಬಿಜೆಪಿ ಅಧಿಕಾರ ಹಿಡಿಯಲು ಸರ್ವ ರೀತಿಯಲ್ಲೂಪ್ರಯತ್ನ ನಡೆಸುತ್ತಿದೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಗದ್ದುಗೆಗಾಗಿ ಗುದ್ದಾಟ ನಡೆಯುತ್ತಿದೆ.
12 ನಿರ್ದೇಶನ ಬಲದ ಮನ್ಮುಲ್ನಲ್ಲಿ8 ಸ್ಥಾನಗಳಲ್ಲಿಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ. ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಕೇವಲ ಒಂದು ಸ್ಥಾನ ಗೆದ್ದಿದೆ. ಆದರೆ, 8 ಸ್ಥಾನಗಳನ್ನು ಗೆದ್ದಿದ್ದರೂ ಗದ್ದುಗೆಗೇರಲು ಜೆಡಿಎಸ್ಗೆ ಕಷ್ಟವಾಗಿದೆ. ಕೇವಲ 1 ಸ್ಥಾನ ಗೆದ್ದಿರುವ ಬಿಜೆಪಿ ಮನ್ಮುಲ್ನ ಆಡಳಿತ ಚುಕ್ಕಾಣಿ ಹಿಡಿಯಲು 'ಅಧಿಕಾರ' ಪ್ರಯೋಗಿಸುವ ತಂತ್ರಗಾರಿಕೆ ಮೆರೆಯುತ್ತಿದೆ.
ಇಂತಹ ಸಂದರ್ಭದಲ್ಲಿಗದ್ದುಗೆಗೇರಲು ಪಣತೊಟ್ಟಿರುವ ಹಾಗೂ ಮನ್ಮುಲ್ ವರಿಷ್ಠರ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜೆಡಿಎಸ್, ಅನಿವಾರ್ಯವಾದರೆ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಾದರೂ ಅಧಿಕಾರ ಹಿಡಿಯುವ ಆಲೋಚನೆ ನಡೆಸಿದೆ. ಆದರೆ, ಮನ್ಮುಲ್ ಅಧ್ಯಕ್ಷ ಸ್ಥಾನವನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಂಡು ಜೆಡಿಎಸ್ ಅನ್ನು ಅಧಿಕಾರದಿಂದ ದೂರವಿಡಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಉದ್ದೇಶಿಸಿದ್ದು, ಇದಕ್ಕೆ ಬಿಜೆಪಿ ನೆರವು ಕೋರುತ್ತಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿಗೆದ್ದಿರುವ ಬಿಜೆಪಿಯ ಒಬ್ಬ ಮಹಿಳಾ ನಿರ್ದೇಶಕಿ, ಒಬ್ಬರು ನಾಮ ನಿರ್ದೇಶಿತ ಸದಸ್ಯರು ಹಾಗೂ ಮೂವರು ಸರಕಾರಿ ಅಧಿಕಾರಿಗಳ ನೆರವನ್ನು ಪಡೆಯುವುದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯೊಬ್ಬರನ್ನು ಸೆಳೆದುಕೊಂಡು ಅಧಿಕಾರ ಹಿಡಿಯುವುದು ಕಾಂಗ್ರೆಸ್ನ ತಂತ್ರಗಾರಿಕೆಯಾಗಿದೆ. ಮನ್ಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ8 ಸ್ಥಾನಗಳಲ್ಲಿಗೆಲುವು ಸಾಧಿಸುವ ಮೂಲಕ ಜೆಡಿಎಸ್ ಪ್ರಾಬಲ್ಯ ಮೆರೆದಿದೆ.
ಆದರೆ, ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಬಿಜೆಪಿಯ ಒಬ್ಬ ನಿರ್ದೇಶಕಿ ಹಾಗೂ ಒಬ್ಬ ನಾಮ ನಿರ್ದೇಶಿತ ಸದಸ್ಯರು ಸೇರಿದರೆ ಸಂಖ್ಯೆ 5 ತಲುಪುತ್ತದೆ. ಜತೆಗೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿಮತ ಚಲಾಯಿಸಲು ಅಧಿಕಾರ ಹೊಂದಿರುವ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಹಕಾರ ಇಲಾಖೆ ಜಂಟಿ ನಿರ್ದೇಶಕರು ಸೇರಿದರೆ ಇವರ ಸದಸ್ಯ ಬಲವೂ 8 ಆಗುತ್ತದೆ. ಇವರೊಂದಿಗೆ ಜೆಡಿಎಸ್ನಿಂದ ಒಬ್ಬರನ್ನೂ ಸೆಳೆದರೂ ಅಧಿಕಾರದ ಗದ್ದುಗೆ ಏರುವುದು ಸುಲಭವಾಗಲಿದೆ ಎನ್ನುವುದು ಕೈ-ಕಮಲ ನಾಯಕರ ಲೆಕ್ಕಾಚಾರ.
ಜೆಡಿಎಸ್ನಲ್ಲೇ ಪೈಪೋಟಿ: ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೇರಲು ಜೆಡಿಎಸ್ನಿಂದ ಗೆದ್ದಿರುವ ಪ್ರಭಾವಿ ನಿರ್ದೇಶಕರೇ ಪೈಪೋಟಿಗೆ ಬಿದ್ದಿದ್ದಾರೆ. ಎಸ್.ಪಿ.ಸ್ವಾಮಿ, ಎಚ್.ಟಿ.ಮಂಜು, ನೆಲ್ಲೀಗೆರೆ ಬಾಲು ಕೂಡ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ. ಆದರೆ, ಸಮಬಲ ಇರುವುದರಿಂದ ಅಧಿಕಾರ ಯಾರಿಗೂ ಸುಲಭದ ತುತ್ತಾಗಿಲ್ಲ. ಜೆಡಿಎಸ್ನಿಂದ ಗೆದ್ದಿರುವ ನಿರ್ದೇಶಕರು ಈಗಾಗಲೇ ಬಿಜೆಪಿಯಿಂದ ಗೆಲುವು ಸಾಧಿಸಿರುವ ಎಂ.ರೂಪಾ ಅವರನ್ನು ತಮ್ಮ ಕಡೆ ಸೆಳೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಲವು ರೀತಿಯ ಆಮಿಷಗಳನ್ನು ತೋರಿಸುತ್ತಿದ್ದರೂ ರೂಪಾ ಸುಲಭವಾಗಿ ಮಣಿಯದೆ ಪಕ್ಷದ ನಾಯಕರ ನಿರ್ಧಾರಕ್ಕೆ ಕಟಿಬದ್ಧರಾಗಿದ್ದಾರೆಂದು ತಿಳಿದುಬಂದಿದೆ.
ಇನ್ನೊಂದೆಡೆ ಕಾಂಗ್ರೆಸ್, ನೀವು ಯಾರು ಕರೆದರೂ ಹೋಗಬೇಡಿ. ನಿಮ್ಮನ್ನೇ ಅಧ್ಯಕ್ಷೆಯಾಗಿ ಮಾಡುತ್ತೇವೆ ಎಂದು ಅಧ್ಯಕ್ಷ ಗಾದಿಯ ಆಮಿಷ ನೀಡುವ ಮೂಲಕ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಬಿಜೆಪಿ ಬೆಂಬಲಿತ ನಿರ್ದೇಶಕಿ ಮನಸ್ಸು ಪರಿವರ್ತನೆಯಾಗದಂತೆ ಬುದ್ಧಿವಂತಿಕೆ ಮೆರೆದಿದ್ದಾರೆ. ಇನ್ನೊಂದೆಡೆ ರಾಜ್ಯ ಬಿಜೆಪಿ ನಾಯಕರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಮನ್ಮುಲ್ ಗದ್ದುಗೆ ಹಿಡಿಯುವುದಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವಾಮಿಗೆ ಶಾಸಕರ ಅಡ್ಡಗಾಲು: ಮದ್ದೂರು ತಾಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್.ಪಿ.ಸ್ವಾಮಿ, ಮನ್ಮುಲ್ ಅಧ್ಯಕ್ಷಗಾದಿಗೇರಲು ಸರ್ವ ರೀತಿಯಲ್ಲೂಪ್ರಯತ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣನವರೇ ಅಡ್ಡಗಾಲಾಗಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ತಮ್ಮಣ್ಣ ಅವರಿಗೆ ಆಪ್ತರಾಗಿರುವ ಎಸ್.ಪಿ.ಸ್ವಾಮಿ ಪತ್ನಿ ನಾಗರತ್ನ ಪ್ರಸ್ತುತ ಜಿಪಂ ಅಧ್ಯಕ್ಷೆಯಾಗಿದ್ದಾರೆ. ಆದರೆ, ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ತಮ್ಮಣ್ಣ- ಸ್ವಾಮಿ ನಡುವಿನ ಸಂಬಂಧ ಇತ್ತೀಚೆಗೆ ಸ್ವಲ್ಪಮಟ್ಟಿಗೆ ಹಳಸಿದೆ. ಹೀಗಾಗಿ ಸ್ವಾಮಿ ಅವರು ಜಿಲ್ಲೆಯ ಮತ್ತೊಬ್ಬ ಜೆಡಿಎಸ್ ನಾಯಕರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮೊರೆ ಹೋಗಿದ್ದಾರೆ. ಆದರೆ, ಮತ್ತೊಂದೆಡೆ ತಮ್ಮ ಆಪ್ತ ಎಚ್.ಟಿ.ಮಂಜು ಕೂಡ ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವುದು ಪುಟ್ಟರಾಜು ಅವರಿಗೆ ತಲೆನೋವಾಗಿದೆ.
ಸೋತರೂ ಅಧ್ಯಕ್ಷಗಾದಿ ಮೇಲೆ ಕದಲೂರು ಕಣ್ಣು!: ಮನ್ಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿಸೋತರೂ ಸಹ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರು ಈ ಅವಧಿಯಲ್ಲೂಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಅವರು ಬಿಜೆಪಿ ಪಡಸಾಲೆಯಲ್ಲಿಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ತಮ್ಮ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕೃಪಾಕಟಾಕ್ಷದಿಂದ ಮನ್ಮುಲ್ ನಿರ್ದೇಶಕರಾಗಿ ನಾಮನಿರ್ದೇಶನಗೊಳ್ಳುವ ಆಸೆ ರಾಮಕೃಷ್ಣ ಅವರದು. ಹೀಗಾಗಿ ಸಿಎಂ ಯಡಿಯೂರಪ್ಪ ಮೇಲೆ ಎಸ್.ಎಂ.ಕೃಷ್ಣ ಅವರ ಮೂಲಕ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಕದಲೂರು ರಾಮಕೃಷ್ಣರನ್ನು ಮನ್ಮುಲ್ಗೆ ನಾಮನಿರ್ದೇಶನ ಮಾಡುವ ವಿಚಾರದಲ್ಲಿಎಸ್.ಎಂ.ಕೃಷ್ಣರ ನಿಲುವು ಏನೆಂಬುದು ಸ್ಪಷ್ಟವಾಗಿಲ್ಲ.
ಬಿಜೆಪಿ ಮೂಲಗಳು ಹೇಳುವ ಪ್ರಕಾರ ಹಿಂದಿನ ಆಡಳಿತ ಮಂಡಳಿ ನಿರ್ದೇಶಕರು ಭ್ರಷ್ಟಾಚಾರ ಆರೋಪ ಹೊತ್ತಿದ್ದು, ಅವರನ್ನು ಅಧ್ಯಕ್ಷ ಸ್ಥಾನ ಮತ್ತು ನಾಮ ನಿರ್ದೇಶನ ಸ್ಥಾನಗಳಿಗೆ ನೇಮಿಸುವುದು ಬೇಡ. ಹೊಸ ಮುಖವನ್ನು ಅಧ್ಯಕ್ಷ ಗದ್ದುಗೆ ಮೇಲೆ ಕೂರಿಸುವ ಆಲೋಚನೆಯಲ್ಲಿರುವ ಮಾಹಿತಿಯಿದೆ. ಬಿಜೆಪಿ ಈ ನಿರ್ಧಾರಕ್ಕೆ ಬಂದಲ್ಲಿಕದಲೂರು ರಾಮಕೃಷ್ಣರ ಆಸೆ ಕಮರಿಹೋಗುವ ಸಾಧ್ಯತೆಗಳಿವೆ.
ಜಿಲ್ಲಾಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮನ್ಮುಲ್) ಆಡಳಿತ ಮಂಡಳಿ ಚುನಾವಣೆಯಲ್ಲಿಅತಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಜೆಡಿಎಸ್ಗೆ ಅಧಿಕಾರದ ಹಾದಿ ಸುಲಭವಾಗಿಲ್ಲ. ಕೇವಲ ಒಂದು ಸ್ಥಾನ ಗೆದ್ದಿರುವ ಬಿಜೆಪಿ ಅಧಿಕಾರ ಹಿಡಿಯಲು ಸರ್ವ ರೀತಿಯಲ್ಲೂಪ್ರಯತ್ನ ನಡೆಸುತ್ತಿದೆ. ಹೀಗಾಗಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಗದ್ದುಗೆಗಾಗಿ ಗುದ್ದಾಟ ನಡೆಯುತ್ತಿದೆ.
12 ನಿರ್ದೇಶನ ಬಲದ ಮನ್ಮುಲ್ನಲ್ಲಿ8 ಸ್ಥಾನಗಳಲ್ಲಿಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ. ಕಾಂಗ್ರೆಸ್ ಮೂರು ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಕೇವಲ ಒಂದು ಸ್ಥಾನ ಗೆದ್ದಿದೆ. ಆದರೆ, 8 ಸ್ಥಾನಗಳನ್ನು ಗೆದ್ದಿದ್ದರೂ ಗದ್ದುಗೆಗೇರಲು ಜೆಡಿಎಸ್ಗೆ ಕಷ್ಟವಾಗಿದೆ. ಕೇವಲ 1 ಸ್ಥಾನ ಗೆದ್ದಿರುವ ಬಿಜೆಪಿ ಮನ್ಮುಲ್ನ ಆಡಳಿತ ಚುಕ್ಕಾಣಿ ಹಿಡಿಯಲು 'ಅಧಿಕಾರ' ಪ್ರಯೋಗಿಸುವ ತಂತ್ರಗಾರಿಕೆ ಮೆರೆಯುತ್ತಿದೆ.
ಇಂತಹ ಸಂದರ್ಭದಲ್ಲಿಗದ್ದುಗೆಗೇರಲು ಪಣತೊಟ್ಟಿರುವ ಹಾಗೂ ಮನ್ಮುಲ್ ವರಿಷ್ಠರ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜೆಡಿಎಸ್, ಅನಿವಾರ್ಯವಾದರೆ ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಾದರೂ ಅಧಿಕಾರ ಹಿಡಿಯುವ ಆಲೋಚನೆ ನಡೆಸಿದೆ. ಆದರೆ, ಮನ್ಮುಲ್ ಅಧ್ಯಕ್ಷ ಸ್ಥಾನವನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಂಡು ಜೆಡಿಎಸ್ ಅನ್ನು ಅಧಿಕಾರದಿಂದ ದೂರವಿಡಲು ಜಿಲ್ಲೆಯ ಕಾಂಗ್ರೆಸ್ ನಾಯಕರು ಉದ್ದೇಶಿಸಿದ್ದು, ಇದಕ್ಕೆ ಬಿಜೆಪಿ ನೆರವು ಕೋರುತ್ತಿದ್ದಾರೆ ಎನ್ನಲಾಗಿದೆ.
ಚುನಾವಣೆಯಲ್ಲಿಗೆದ್ದಿರುವ ಬಿಜೆಪಿಯ ಒಬ್ಬ ಮಹಿಳಾ ನಿರ್ದೇಶಕಿ, ಒಬ್ಬರು ನಾಮ ನಿರ್ದೇಶಿತ ಸದಸ್ಯರು ಹಾಗೂ ಮೂವರು ಸರಕಾರಿ ಅಧಿಕಾರಿಗಳ ನೆರವನ್ನು ಪಡೆಯುವುದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯೊಬ್ಬರನ್ನು ಸೆಳೆದುಕೊಂಡು ಅಧಿಕಾರ ಹಿಡಿಯುವುದು ಕಾಂಗ್ರೆಸ್ನ ತಂತ್ರಗಾರಿಕೆಯಾಗಿದೆ. ಮನ್ಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿ8 ಸ್ಥಾನಗಳಲ್ಲಿಗೆಲುವು ಸಾಧಿಸುವ ಮೂಲಕ ಜೆಡಿಎಸ್ ಪ್ರಾಬಲ್ಯ ಮೆರೆದಿದೆ.
ಆದರೆ, ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳು ಬಿಜೆಪಿಯ ಒಬ್ಬ ನಿರ್ದೇಶಕಿ ಹಾಗೂ ಒಬ್ಬ ನಾಮ ನಿರ್ದೇಶಿತ ಸದಸ್ಯರು ಸೇರಿದರೆ ಸಂಖ್ಯೆ 5 ತಲುಪುತ್ತದೆ. ಜತೆಗೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿಮತ ಚಲಾಯಿಸಲು ಅಧಿಕಾರ ಹೊಂದಿರುವ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕರು, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಹಕಾರ ಇಲಾಖೆ ಜಂಟಿ ನಿರ್ದೇಶಕರು ಸೇರಿದರೆ ಇವರ ಸದಸ್ಯ ಬಲವೂ 8 ಆಗುತ್ತದೆ. ಇವರೊಂದಿಗೆ ಜೆಡಿಎಸ್ನಿಂದ ಒಬ್ಬರನ್ನೂ ಸೆಳೆದರೂ ಅಧಿಕಾರದ ಗದ್ದುಗೆ ಏರುವುದು ಸುಲಭವಾಗಲಿದೆ ಎನ್ನುವುದು ಕೈ-ಕಮಲ ನಾಯಕರ ಲೆಕ್ಕಾಚಾರ.
ಜೆಡಿಎಸ್ನಲ್ಲೇ ಪೈಪೋಟಿ: ಮನ್ಮುಲ್ ಅಧ್ಯಕ್ಷ ಸ್ಥಾನಕ್ಕೇರಲು ಜೆಡಿಎಸ್ನಿಂದ ಗೆದ್ದಿರುವ ಪ್ರಭಾವಿ ನಿರ್ದೇಶಕರೇ ಪೈಪೋಟಿಗೆ ಬಿದ್ದಿದ್ದಾರೆ. ಎಸ್.ಪಿ.ಸ್ವಾಮಿ, ಎಚ್.ಟಿ.ಮಂಜು, ನೆಲ್ಲೀಗೆರೆ ಬಾಲು ಕೂಡ ಅಧ್ಯಕ್ಷ ಸ್ಥಾನದ ರೇಸ್ನಲ್ಲಿದ್ದಾರೆ. ಆದರೆ, ಸಮಬಲ ಇರುವುದರಿಂದ ಅಧಿಕಾರ ಯಾರಿಗೂ ಸುಲಭದ ತುತ್ತಾಗಿಲ್ಲ. ಜೆಡಿಎಸ್ನಿಂದ ಗೆದ್ದಿರುವ ನಿರ್ದೇಶಕರು ಈಗಾಗಲೇ ಬಿಜೆಪಿಯಿಂದ ಗೆಲುವು ಸಾಧಿಸಿರುವ ಎಂ.ರೂಪಾ ಅವರನ್ನು ತಮ್ಮ ಕಡೆ ಸೆಳೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಲವು ರೀತಿಯ ಆಮಿಷಗಳನ್ನು ತೋರಿಸುತ್ತಿದ್ದರೂ ರೂಪಾ ಸುಲಭವಾಗಿ ಮಣಿಯದೆ ಪಕ್ಷದ ನಾಯಕರ ನಿರ್ಧಾರಕ್ಕೆ ಕಟಿಬದ್ಧರಾಗಿದ್ದಾರೆಂದು ತಿಳಿದುಬಂದಿದೆ.
ಇನ್ನೊಂದೆಡೆ ಕಾಂಗ್ರೆಸ್, ನೀವು ಯಾರು ಕರೆದರೂ ಹೋಗಬೇಡಿ. ನಿಮ್ಮನ್ನೇ ಅಧ್ಯಕ್ಷೆಯಾಗಿ ಮಾಡುತ್ತೇವೆ ಎಂದು ಅಧ್ಯಕ್ಷ ಗಾದಿಯ ಆಮಿಷ ನೀಡುವ ಮೂಲಕ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಬಿಜೆಪಿ ಬೆಂಬಲಿತ ನಿರ್ದೇಶಕಿ ಮನಸ್ಸು ಪರಿವರ್ತನೆಯಾಗದಂತೆ ಬುದ್ಧಿವಂತಿಕೆ ಮೆರೆದಿದ್ದಾರೆ. ಇನ್ನೊಂದೆಡೆ ರಾಜ್ಯ ಬಿಜೆಪಿ ನಾಯಕರೂ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಮನ್ಮುಲ್ ಗದ್ದುಗೆ ಹಿಡಿಯುವುದಕ್ಕೆ ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ವಾಮಿಗೆ ಶಾಸಕರ ಅಡ್ಡಗಾಲು: ಮದ್ದೂರು ತಾಲೂಕಿನಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಸ್.ಪಿ.ಸ್ವಾಮಿ, ಮನ್ಮುಲ್ ಅಧ್ಯಕ್ಷಗಾದಿಗೇರಲು ಸರ್ವ ರೀತಿಯಲ್ಲೂಪ್ರಯತ್ನಿಸುತ್ತಿದ್ದಾರೆ. ಆದರೆ, ಇದಕ್ಕೆ ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣನವರೇ ಅಡ್ಡಗಾಲಾಗಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ತಮ್ಮಣ್ಣ ಅವರಿಗೆ ಆಪ್ತರಾಗಿರುವ ಎಸ್.ಪಿ.ಸ್ವಾಮಿ ಪತ್ನಿ ನಾಗರತ್ನ ಪ್ರಸ್ತುತ ಜಿಪಂ ಅಧ್ಯಕ್ಷೆಯಾಗಿದ್ದಾರೆ. ಆದರೆ, ಜಿಪಂ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವಾಗಿ ತಮ್ಮಣ್ಣ- ಸ್ವಾಮಿ ನಡುವಿನ ಸಂಬಂಧ ಇತ್ತೀಚೆಗೆ ಸ್ವಲ್ಪಮಟ್ಟಿಗೆ ಹಳಸಿದೆ. ಹೀಗಾಗಿ ಸ್ವಾಮಿ ಅವರು ಜಿಲ್ಲೆಯ ಮತ್ತೊಬ್ಬ ಜೆಡಿಎಸ್ ನಾಯಕರಾದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮೊರೆ ಹೋಗಿದ್ದಾರೆ. ಆದರೆ, ಮತ್ತೊಂದೆಡೆ ತಮ್ಮ ಆಪ್ತ ಎಚ್.ಟಿ.ಮಂಜು ಕೂಡ ಅಧ್ಯಕ್ಷ ಸ್ಥಾನದ ರೇಸ್ನಲ್ಲಿರುವುದು ಪುಟ್ಟರಾಜು ಅವರಿಗೆ ತಲೆನೋವಾಗಿದೆ.
ಸೋತರೂ ಅಧ್ಯಕ್ಷಗಾದಿ ಮೇಲೆ ಕದಲೂರು ಕಣ್ಣು!: ಮನ್ಮುಲ್ ಆಡಳಿತ ಮಂಡಳಿ ಚುನಾವಣೆಯಲ್ಲಿಸೋತರೂ ಸಹ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರು ಈ ಅವಧಿಯಲ್ಲೂಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಅವರು ಬಿಜೆಪಿ ಪಡಸಾಲೆಯಲ್ಲಿಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ತಮ್ಮ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕೃಪಾಕಟಾಕ್ಷದಿಂದ ಮನ್ಮುಲ್ ನಿರ್ದೇಶಕರಾಗಿ ನಾಮನಿರ್ದೇಶನಗೊಳ್ಳುವ ಆಸೆ ರಾಮಕೃಷ್ಣ ಅವರದು. ಹೀಗಾಗಿ ಸಿಎಂ ಯಡಿಯೂರಪ್ಪ ಮೇಲೆ ಎಸ್.ಎಂ.ಕೃಷ್ಣ ಅವರ ಮೂಲಕ ಪ್ರಭಾವ ಬೀರುತ್ತಿದ್ದಾರೆ ಎನ್ನಲಾಗಿದೆ. ಕದಲೂರು ರಾಮಕೃಷ್ಣರನ್ನು ಮನ್ಮುಲ್ಗೆ ನಾಮನಿರ್ದೇಶನ ಮಾಡುವ ವಿಚಾರದಲ್ಲಿಎಸ್.ಎಂ.ಕೃಷ್ಣರ ನಿಲುವು ಏನೆಂಬುದು ಸ್ಪಷ್ಟವಾಗಿಲ್ಲ.
ಬಿಜೆಪಿ ಮೂಲಗಳು ಹೇಳುವ ಪ್ರಕಾರ ಹಿಂದಿನ ಆಡಳಿತ ಮಂಡಳಿ ನಿರ್ದೇಶಕರು ಭ್ರಷ್ಟಾಚಾರ ಆರೋಪ ಹೊತ್ತಿದ್ದು, ಅವರನ್ನು ಅಧ್ಯಕ್ಷ ಸ್ಥಾನ ಮತ್ತು ನಾಮ ನಿರ್ದೇಶನ ಸ್ಥಾನಗಳಿಗೆ ನೇಮಿಸುವುದು ಬೇಡ. ಹೊಸ ಮುಖವನ್ನು ಅಧ್ಯಕ್ಷ ಗದ್ದುಗೆ ಮೇಲೆ ಕೂರಿಸುವ ಆಲೋಚನೆಯಲ್ಲಿರುವ ಮಾಹಿತಿಯಿದೆ. ಬಿಜೆಪಿ ಈ ನಿರ್ಧಾರಕ್ಕೆ ಬಂದಲ್ಲಿಕದಲೂರು ರಾಮಕೃಷ್ಣರ ಆಸೆ ಕಮರಿಹೋಗುವ ಸಾಧ್ಯತೆಗಳಿವೆ.