ಆ್ಯಪ್ನಗರ

ಕೆ.ಆರ್‌. ಪೇಟೆಯಲ್ಲಿ ಮಾಧುಸ್ವಾಮಿ ಮೇಲೆ ಹಲ್ಲೆಗೆ ಯತ್ನಿಸಿದ ಜೆಡಿಎಸ್‌ ಕಾರ್ಯಕರ್ತರು

ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಮೆರವಣಿಗೆ ಮಾಡುತ್ತಿದ್ದ ವೇಳೆ ಸಚಿವ ಮಾಧುಸ್ವಾಮಿ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಜತೆಗೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರ ಮೇಲೂ ಹಲ್ಲೆಗೆ ಪ್ರಯತ್ನಿಸಲಾಗಿದೆ.

Vijaya Karnataka Web 18 Nov 2019, 4:21 pm
ಕೆ.ಆರ್.ಪೇಟೆ: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಮೆರವಣಿಗೆ ಮಾಡುತ್ತಿದ್ದ ವೇಳೆ ಸಚಿವ ಮಾಧುಸ್ವಾಮಿ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ಜತೆಗೆ ಬಿಜೆಪಿ ಅಭ್ಯರ್ಥಿ ಮೇಲೂ ಹಲ್ಲೆಗೆ ಪ್ರಯತ್ನಿಸಲಾಗಿದೆ.
Vijaya Karnataka Web madhu swamy
ಸಚಿವ ಮಾಧುಸ್ವಾಮಿ


ಈ ಘಟನೆಯಿಂದ ಅಸಮಾಧಾನಗೊಂಡಿರುವ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರು ಎಸ್ಪಿ ಪರಶುರಾಂ ಹಾಗೂ ಇತರೆ ಪೊಲೀಸರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ನಾರಾಯಣಗೌಡರ ಪತ್ನಿ ಕೂಡಾ ಘಟನೆಗೆ ಅಸಮಾಧಾನಗೊಂಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಮಾಜಿ ಶಾಸಕ ಪುಟ್ಟೇಗೌಡ ಮನೆಗೆ ಬಿಎಸ್‌ವೈ, ಮಾಧು ಸ್ವಾಮಿ

ಘಟನೆಯಿಂದ ಕೋಪಗೊಂಡ ನಾರಾಯಣಗೌಡ ಅವರು ಜೆಡಿಎಸ್ ಅಭ್ಯರ್ಥಿ, ಕಾರ್ಯಕರ್ತರ ಬಳಿಗೆ ತೆರಳಲು ಮುಂದಾದರು. ಆದರೆ, ಪೊಲೀಸರು ನಾರಾಯಣಗೌಡರನ್ನ ಸಮಾಧಾನಪಡಿಸಿ ಒಳಗೆ ಕರೆದೊಯ್ದರು.

ಅವರೇನು ಗೂಂಡಾಗಿರಿ ಮಾಡೋಕೆ ಬಂದಿದ್ದಾರ? ಎಂದು ಪೊಲೀಸರನ್ನು ಪ್ರಶ್ನಿಸಿದರು. ನಾನೇ ಅವರನ್ನ ಕೇಳ್ತೀನಿ ಬಿಡಿ. ನಾನೂ ಆ ಪಕ್ಷದಲ್ಲಿದ್ದವನು. ನಾನು ಅಂತಹ ಕಲ್ಚರ್ ಕಲಿತಿಲ್ಲ ಎಂದು ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ