ಆ್ಯಪ್ನಗರ

ಮನ್‌ಮುಲ್‌ನಲ್ಲಿಜೆಡಿಎಸ್‌ ಅಧಿಧಿಕಾರ: ಸಿಎಸ್‌ಪಿ ವಿಶ್ವಾಸ

ಸಿಎಸ್‌ಪಿ ವಿಶ್ವಾಸ ವಿಕ ಸುದ್ದಿಲೋಕ ಮಂಡ್ಯ ಮಂಡ್ಯ ಜಿಲ್ಲಾಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮನ್‌ಮುಲ್‌) ಆಡಳಿತ ಮಂಡಳಿ ಚುನಾವಣೆಯಲ್ಲಿ12 ಸ್ಥಾನಗಳ ಪೈಕಿ 8ರಲ್ಲಿಜೆಡಿಎಸ್‌ ...

Vijaya Karnataka 10 Sep 2019, 5:00 am
ಮಂಡ್ಯ: ಮಂಡ್ಯ ಜಿಲ್ಲಾಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮನ್‌ಮುಲ್‌) ಆಡಳಿತ ಮಂಡಳಿ ಚುನಾವಣೆಯಲ್ಲಿ12 ಸ್ಥಾನಗಳ ಪೈಕಿ 8ರಲ್ಲಿಜೆಡಿಎಸ್‌ ಗೆದ್ದಿರುವ ಹಿನ್ನೆಲೆಯಲ್ಲಿಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಶಾಸಕ, ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web jds will get mandya diary power says cs puttaraju
ಮನ್‌ಮುಲ್‌ನಲ್ಲಿಜೆಡಿಎಸ್‌ ಅಧಿಧಿಕಾರ: ಸಿಎಸ್‌ಪಿ ವಿಶ್ವಾಸ


''ಬಿಜೆಪಿಗೆ ನೈತಿಕತೆ ಇಲ್ಲದಿದ್ದರೂ ರಾಜ್ಯದಲ್ಲಿಆಡಳಿತ ನಡೆಸುತ್ತಿದೆ. ಇದೀಗ ಮನ್‌ಮುಲ್‌ನಲ್ಲೂವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಆದರೆ ಇದಕ್ಕೆ ಜೆಡಿಎಸ್‌ ಅವಕಾಶ ಮಾಡಿಕೊಡುವುದಿಲ್ಲ. ಮನ್‌ಮುಲ್‌ ಆಡಳಿತ ಮಂಡಳಿ ಚುಕ್ಕಾಣಿಯನ್ನು ಜೆಡಿಎಸ್‌ ಹಿಡಿಯಲಿದೆ,'' ಎಂದು ಸುದ್ದಿಗೋಷ್ಠಿಯಲ್ಲಿವಿಶ್ವಾಸ ವ್ಯಕ್ತಪಡಿಸಿದರು.

''ಅಗತ್ಯ ಬಿದ್ದರೆ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೇವೆ. ಮನ್‌ಮುಲ್‌ನಲ್ಲಿಭ್ರಷ್ಟಾಚಾರ ನಡೆಸಿದ್ದರಿಂದ ಹಳೇ ಆಡಳಿತ ಮಂಡಳಿಯನ್ನು ಜನ ಮನೆಗೆ ಕಳುಹಿಸಿದ್ದಾರೆ,'' ಎಂದರು.

ಜಿಟಿಡಿಗೆ ನೋವಾಗಿದೆ: ಮತ್ತೆ ಆಪರೇಷನ್‌ ಕಮಲ ವಿಚಾರ ಪ್ರಸ್ತಾಪಿಸಿದ ಅವರು, ''ಈಗ ಪಕ್ಷ ಬಿಟ್ಟು ಹೋದವರು ಸಾಕಷ್ಟು ಅನುಭವಿಸುತ್ತಿದ್ದಾರೆ. ಮತ್ತೆ ಹೋದರೆ 17 ಶಾಸಕರಿಗಾದ ಪರಿಸ್ಥಿತಿ ಇವರಿಗೂ ಆಗಲಿದೆ,'' ಎಂದು ಎಚ್ಚರಿಸಿದರು. ಮಾಜಿ ಸಚಿವ ಜಿ.ಟಿ.ದೇವೇಗೌಡ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಜಿಟಿಡಿ ಅವರಿಗೆ ನೋವಾಗಿರೋದು ಸತ್ಯ. ಪಕ್ಷದ ನಾಯಕರು ಅದನ್ನು ಸರಿಪಡಿಸಲಿದ್ದಾರೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ