ಆ್ಯಪ್ನಗರ

ಅನಂತ್‌ಕುಮಾರ್‌ಗೆ ಜೆಡಿಎಸ್‌ ಕಾರ‍್ಯಕರ್ತರಿಂದ ಪುಟಗೋಸಿ ರವಾನೆ

ವಿಕ ಸುದ್ದಿಲೋಕ ಮಂಡ್ಯ ಜೆಡಿಎಸ್‌ 'ಪುಟಗೋಸಿ ಪಕ್ಷ ' ಎಂದಿದ್ದ ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆಗೆ ಜೆಡಿಎಸ್‌ ಯುವ ಘಟಕದ ಕಾರ‍್ಯಕರ್ತರು ಅಂಚೆ ಮೂಲಕ ಪುಟಗೋಸಿ ರವಾನಿಸುವ ...

Vijaya Karnataka 5 Jun 2018, 5:00 am
ಮಂಡ್ಯ: ಜೆಡಿಎಸ್‌ 'ಪುಟಗೋಸಿ ಪಕ್ಷ ' ಎಂದಿದ್ದ ಕೇಂದ್ರ ಸಚಿವ ಅನಂತ್‌ಕುಮಾರ್‌ ಹೆಗಡೆಗೆ ಜೆಡಿಎಸ್‌ ಯುವ ಘಟಕದ ಕಾರ‍್ಯಕರ್ತರು ಅಂಚೆ ಮೂಲಕ ಪುಟಗೋಸಿ ರವಾನಿಸುವ ಮೂಲಕ ನಗರದಲ್ಲಿ ಸೋಮವಾರ ವಿಭಿನ್ನ ಪ್ರತಿಭಟನೆ ನಡೆಸಿದರು.
Vijaya Karnataka Web jds workers sent putagosi to central minister ananth kumar hegde
ಅನಂತ್‌ಕುಮಾರ್‌ಗೆ ಜೆಡಿಎಸ್‌ ಕಾರ‍್ಯಕರ್ತರಿಂದ ಪುಟಗೋಸಿ ರವಾನೆ


ನಗರದ ವಿವಿ ರಸ್ತೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಎದುರು ಜಮಾವಣೆಗೊಂಡ ಕಾರ‍್ಯಕರ್ತರು ಪುಟಗೋಸಿಯನ್ನು ಹೊಸದಿಲ್ಲಿಯಲ್ಲಿರುವ ಅನಂತಕುಮಾರ್‌ ಹೆಗಡೆಯವರ ಕಚೇರಿಗೆ ಪೋಸ್ಟ್‌ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಜೆಡಿಎಸ್‌ ಮುಖಂಡ ಗೋಪಾಲಪುರ ಶ್ರೀನಿವಾಸ್‌ ಮಾತನಾಡಿ, ಜೆಡಿಎಸ್‌ ಪುಟಗೋಸಿ ಪಕ್ಷವಲ್ಲ , ಕಾರ‍್ಯಕರ್ತರ ಪಕ್ಷ. ಜೆಡಿಎಸ್‌ ಪಕ್ಷಕ್ಕೆ ಅವಮಾನ ಮಾಡಿದರೆ ಪಕ್ಷದ ಕಾರ‍್ಯಕರ್ತರಿಗೆ ಅವಮಾನ ಮಾಡಿದಂತೆ. ಮಾನ ಮುಚ್ಚಲು ಬಳಸುವ ಪುಟಗೋಸಿ ಬಗ್ಗೆ ಮಾತನಾಡಬಾರದು. ಹೀಗಾಗಿ ಇದರ ಬೆಲೆ ತಿಳಿಸಲು ಅನಂತಕುಮಾರ್‌ ಹೆಗಡೆಯವರಿಗೆ ಪುಟಗೋಸಿ ರವಾನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗೌರವಾನ್ವಿತ ಕೇಂದ್ರ ಸಚಿವ ಸ್ಥಾನದಲ್ಲಿರುವ ಅನಂತಕುಮಾರ್‌ ಹೆಗಡೆಯವರು ಜೆಡಿಎಸ್‌ ಪಕ್ಷದ ಹಗುರವಾಗಿ ಮಾತನಾಡಬಾರದು. ಒಬ್ಬರನ್ನು ಓಲೈಸುವ ಸಲುವಾಗಿ, ಮತ್ತೊಬ್ಬರನ್ನು ಟೀಕಿಸುವ ಬರದಲ್ಲಿ ಸಂವಿಧಾನ ಬದಲಾವಣೆ, ಪುಟಗೋಸಿ ಪಕ್ಷದಂತಹ ಪದಗಳನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ನಾಗೇಶ್‌, ಯುವ ಘಟಕದ ರಾಜ್ಯ ಕಾರ‍್ಯದರ್ಶಿ ಪ್ರದೀಪ್‌, ಮುಖಂಡರಾದ ಸೂನಗನಹಳ್ಳಿ ಅನಿಲ್‌, ಶ್ರೀಧರ್‌, ಸಿದ್ದೇಶ್‌, ಗೋವಿಂದರಾಜು, ಅಶೋಕ್‌ ಕುಮಾರ್‌, ಸಿ.ಆರ್‌.ರಾಕೇಶ್‌, ಸಿ.ಬಿ.ಉಮೇಶ್‌, ನಾಗೇಶ್‌, ಸುಬ್ಬು, ವಚನ್‌ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ