ಆ್ಯಪ್ನಗರ

ಕೆಆರ್‌ಎಸ್‌ ಭರ್ತಿಗೆ ಕೇವಲ ಎರಡೂವರೆ ಅಡಿ ಬಾಕಿ: ಪ್ರವಾಹದ ಮುನ್ನೆಚ್ಚರಿಕೆ

ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ 'ಧಿಜೀವನಾಡಿ' ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟವು 121.40 ಅಡಿ ತಲುಪಿದ್ದು, ಕಟ್ಟೆ ಭರ್ತಿಯಾಗಲು ಕೇವಲ ಎರಡೂವರೆ ಅಡಿಯಷ್ಟೇ ಬಾಕಿಯಿದೆ.

Vijaya Karnataka 14 Jul 2018, 5:00 am
ಮಂಡ್ಯ: ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ 'ಧಿಜೀವನಾಡಿ' ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟವು 121.40 ಅಡಿ ತಲುಪಿದ್ದು, ಕಟ್ಟೆ ಭರ್ತಿಯಾಗಲು ಕೇವಲ ಎರಡೂವರೆ ಅಡಿಯಷ್ಟೇ ಬಾಕಿಯಿದೆ.
Vijaya Karnataka Web just 2 5 feet for the krs filling pending precautionary for flood
ಕೆಆರ್‌ಎಸ್‌ ಭರ್ತಿಗೆ ಕೇವಲ ಎರಡೂವರೆ ಅಡಿ ಬಾಕಿ: ಪ್ರವಾಹದ ಮುನ್ನೆಚ್ಚರಿಕೆ


ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗುವುದರಿಂದ ನದಿ ತೀರದ ಸಾರ್ವಜನಿಕರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರು ರಕ್ಷ ಣೆಗೆ ಎಚ್ಚರ ವಹಿಸಬೇಕು. ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಬೇಕು ಎಂದು ಕೃಷ್ಣರಾಜಸಾಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಬಸವರಾಜೇಗೌಡ ತಿಳಿಸಿದ್ದಾರೆ.

ಗುರುವಾರ ಸಂಜೆ 119.10 ಅಡಿ ಇದ್ದ ಜಲಾಶಯದ ನೀರಿನ ಮಟ್ಟವು ಶುಕ್ರವಾರ ಬೆಳಗ್ಗೆ 120.20 ಅಡಿ ತಲುಪಿತ್ತು. ಸಂಜೆ ವೇಳೆಗೆ ಇನ್ನೂ ಒಂದು ಅಡಿ ಹೆಚ್ಚಾಯಿತು. ಜಲಾಶಯಕ್ಕೆ ಪ್ರಸ್ತುತ 37,950 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, 3916 ಕ್ಯೂಸೆಕ್‌ ನೀರನ್ನು ಕಟ್ಟೆಯಿಂದ ಹೊರ ಬಿಡಲಾಗಿದೆ. ಇದರಲ್ಲಿ ನದಿಗೆ 1305 ಕ್ಯೂಸೆಕ್‌ ಮತ್ತು ನಾಲೆಗಳಿಗೆ 2611 ಕ್ಯೂಸೆಕ್‌ ಬಿಡುಗಡೆ ಮಾಡಲಾಗಿದೆ.

ಗರಿಷ್ಠ 124.80 ಅಡಿಯ ಜಲಾಶಯವು 49.452 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ‌ ಹೊಂದಿದೆ. ಪ್ರಸ್ತುತ ಜಲಾಶಯದಲ್ಲಿ 44.846 ಟಿಎಂಸಿ ನೀರು ಸಂಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ