ಆ್ಯಪ್ನಗರ

ಕಬಡ್ಡಿ: ಕ್ರೀಡಾಪಟುಗಳಿಗೆ ಬೀಳ್ಕೊಡುಗೆ

ಒರಿಸ್ಸಾದ ಕಟಕ್‌ನಲ್ಲಿ ಡಿ.12ರಿಂದ ನಡೆಯಲಿರುವ 20 ವರ್ಷದೊಳಗಿನವರ 22ನೆ ಜ್ಯೂನಿಯರ್ ಬಾಲಕ, ಬಾಲಕಿಯರ ನ್ಯಾಷನಲ್ ಕಬಡ್ಡಿ ಚಾಂಪಿಯನ್‌ಷಿಪ್ ಟೂರ್ನಿಗೆ ತೆರಳುತ್ತಿರುವ ಮಂಡ್ಯದ ಬಾಲಕ, ಬಾಲಕಿಯರ ತಂಡಗಳಿಗೆ ನಗರದಲ್ಲಿ ಶನಿವಾರ ಬೀಳ್ಕೊಡುಗೆ ನೀಡಲಾಯಿತು.

Vijaya Karnataka 11 Dec 2017, 5:15 am
ಮಂಡ್ಯ: ಒರಿಸ್ಸಾದ ಕಟಕ್‌ನಲ್ಲಿ ಡಿ.12ರಿಂದ ನಡೆಯಲಿರುವ 20 ವರ್ಷದೊಳಗಿನವರ 22ನೆ ಜ್ಯೂನಿಯರ್ ಬಾಲಕ, ಬಾಲಕಿಯರ ನ್ಯಾಷನಲ್ ಕಬಡ್ಡಿ ಚಾಂಪಿಯನ್‌ಷಿಪ್ ಟೂರ್ನಿಗೆ ತೆರಳುತ್ತಿರುವ ಮಂಡ್ಯದ ಬಾಲಕ, ಬಾಲಕಿಯರ ತಂಡಗಳಿಗೆ ನಗರದಲ್ಲಿ ಶನಿವಾರ ಬೀಳ್ಕೊಡುಗೆ ನೀಡಲಾಯಿತು.
Vijaya Karnataka Web kabaddi flee to athletes
ಕಬಡ್ಡಿ: ಕ್ರೀಡಾಪಟುಗಳಿಗೆ ಬೀಳ್ಕೊಡುಗೆ


ಟೂರ್ನಿಗೆ ಆಯ್ಕೆಯಾಗಿರುವ ಕ್ರೀಡಾಪುಟಗಳು ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಮಂಡ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಮಂಡ್ಯ ಕಬಡ್ಡಿ ಸ್ಲೋರ್ಟ್ಸ್ ಕ್ಲಬ್ ಹಾಗೂ ಪಿಇಟಿ ಸಂಸ್ಥೆ ಏರ್ಪಡಿಸಿದ್ದ ಬಾಲಕ-ಬಾಲಕಿಯರ ಕರ್ನಾಟಕ ರಾಜ್ಯ ಜ್ಯೂನಿಯರ್ ಕಬಡ್ಡಿ ತಂಡಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದಿದ್ದರು.

ಬಳಿಕ ಮಾತನಾಡಿದ ಪಿಇಟಿ ಅಧ್ಯಕ್ಷ ಎಚ್.ಡಿ. ಚೌಡಯ್ಯ, ಕಳೆದ ಎಂಟು ದಿನಗಳಿಂದ ಇವರು ನಿರಂತರವಾಗಿ ತರಬೇತಿ ಪಡೆಯುತ್ತಿದ್ದು, ಉತ್ಸಾಹದಿಂದ ಟೂರ್ನಿಯಲ್ಲಿ ಪಾಲ್ಗೊಳ್ಳಿ. ಸ್ಪರ್ಧೆಗಳಲ್ಲಿ ಗೆಲುವು-ಸೋಲು ಸಾಮಾನ್ಯ. ಕೌಶಲ್ಯ ಹಾಗೂ ಸ್ಪರ್ಧಾ ಮನೋಭಾವ ಬಹಳ ಮುಖ್ಯ ಎಂದು ಹೇಳಿದರು.

ಕಬಡ್ಡಿ ಆಟವನ್ನು ಯಾಂತ್ರಿಕ ಮತ್ತು ತಾಂತ್ರಿಕವಾಗಿ ಆಡುವ ಮೂಲಕ ಉತ್ತಮ ಪ್ರದರ್ಶನ ನೀಡುವುದು ಬಹಳ ಮುಖ್ಯ. ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಸಮಯಪ್ರಜ್ಞೆ, ಶಿಸ್ತು ಬಹಳ ಮುಖ್ಯ. ಸಂಯಮ, ತಾಳ್ಮೆ ಇರಬೇಕು. ಆಟವಾಡುವಾಗ ಕೋಪ ಮಾಡಿಕೊಳ್ಳಬಾರದು. ತೀರ್ಪುಗಾರರು ತೀರ್ಪು ನೀಡುವಾಗ ತಲೆ ಬಾಗಬೇಕು. ಇಂತಹ ಮೌಲ್ಯಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೀರಿ. ವಿಜಯಶಾಲಿಯಾಗಿ ಎಂದು ಶುಭ ಹಾರೈಸಿದರು.

ಮಂಡ್ಯ ಆರ್ಗ್ಯಾನಿಕ್‌ನ ಮಧುಚಂದನ್, ನಿವೃತ್ತ ದೈಹಿಕ ಶಿಕ್ಷಕ ಎಂ.ಶಿವಲಿಂಗಯ್ಯ, ಎಂ.ಎಸ್. ಶಂಕರೇಗೌಡ, ಕೆ.ಸಿ.ರವೀಂದ್ರ, ಗಾಣದಾಳು ವಿಜ0ುಕುಮಾರ್, ಚಂದಗಾಲು ಪ್ರಶಾಂತ್, ಬಾಲಾಜಿ, ಚಿನ್ನೇಗೌಡ, ಪಾರ್ಥಸಾರಥಿ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ