ಆ್ಯಪ್ನಗರ

ಶ್ರೀರಂಗಪಟ್ಟಣದಲ್ಲಿ ನಾಳೆ ಕನ್ನಡ ಸಾಹಿತ್ಯ ಸಮ್ಮೇಳನ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಜು.31ರಂದು ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಂ.ಸುರೇಂದ್ರ ಹೇಳಿದರು.

Vijaya Karnataka 30 Jul 2018, 5:00 am
ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ತಾಲೂಕು 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಜು.31ರಂದು ಪಟ್ಟಣದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಂ.ಸುರೇಂದ್ರ ಹೇಳಿದರು.
Vijaya Karnataka Web kannada sahitya sammelan in srirangapatna tomorrow
ಶ್ರೀರಂಗಪಟ್ಟಣದಲ್ಲಿ ನಾಳೆ ಕನ್ನಡ ಸಾಹಿತ್ಯ ಸಮ್ಮೇಳನ


ಸಮ್ಮೇಳನಾಧ್ಯಕ್ಷ ಹಿರಿಯ ಗಾಂಧಿವಾದಿ ಡಾ.ಬಿ.ಸುಜಯಕುಮಾರ್‌ ಅವರನ್ನು ಅಂದು ಬೆಳಗ್ಗೆ 9ಕ್ಕೆ ಶ್ರೀರಂಗನಾಥಸ್ವಾಮಿ ದೇಗುಲ ಆವರಣದಿಂದ ಟಿಎಪಿಸಿಎಂಎಸ್‌ ಕಲ್ಯಾಣ ಮಂಟಪದವರೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರೊ.ಕರಿಮುದ್ದೀನ್‌ ಸಮ್ಮೇಳನ ಉದ್ಘಾಟಿಸುವರು. ಶಾಸಕ ರವೀಂದ್ರ ಶ್ರೀಕಂಠಯ್ಯ ಅಧ್ಯಕ್ಷ ತೆ ವಹಿಸುವರು. ಪುಸ್ತಕ ಮಳಿಗೆಯನ್ನು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಜಿ.ಪಂ.ಅಧ್ಯಕ್ಷೆ ನಾಗರತ್ನಸ್ವಾಮಿ, ಸ್ತ್ರೀ ಶಕ್ತಿ ಸಂಘಟನೆಗಳ ಮಳಿಗೆಗಳನ್ನು ಕೆ.ಟಿ.ಶ್ರೀಕಂಠೇಗೌಡ ಚಾಲನೆ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ ಚಾಮಲಾಪುರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎ.ಜೆ.ಸದಾಶಿವ, ಪುರಸಭೆ, ತಾ.ಪಂ. ಹಾಗೂ ಜಿ.ಪಂ.ನ ಎಲ್ಲಾ ಸದಸ್ಯರು ಭಾಗವಹಿಸುವರು. ಮುಖ್ಯದ್ವಾರಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರನ್ನು ವೇದಿಕೆಗೆ ನಗುವನಹಳ್ಳಿ ಪಿ.ರತ್ನ ಅವರ ಹೆಸರು ಇಡಲಾಗಿದೆ.

ಮಧ್ಯಾಹ್ನ 1.30ರಿಂದ 2ರವರೆಗೆ ನಡೆಯುವ ಮೊದಲನೇ ಗೋಷ್ಠಿಯನ್ನು ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಉದ್ಘಾಟಿಸುವರು. ಜಿ.ಪಂ.ಮಾಜಿ ಅಧ್ಯಕ್ಷ ಎಸ್‌.ಲಿಂಗಣ್ಣ ಅಧ್ಯಕ್ಷ ತೆ ವಹಿಸುವರು, 'ಮರೆಯಾಗುತ್ತಿರುವ ಶ್ರೀರಂಗಪಟ್ಟಣದ ಸ್ಮಾರಕಗಳು' ಕುರಿತು ಪತ್ರಕರ್ತ ಗಣಂಗೂರು ನಂಜೇಗೌಡ, 'ಶಹರ್‌ಗಂಜಾಂ ಒಂದು ಅವಲೋಕನ' ಕುರಿತು ಮಹಾರಾಜ ಪದವಿ ಪೂರ್ವ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಪಿ.ನಮಿತಗಂಜಾಂ ವಿಷಯ ಮಂಡಿಸುವರು. 3.30 ರಿಂದ ಸಂಜೆ 5ರವರೆಗೆ ನಡೆಯುವ ಕವಿಗೋಷ್ಠಿಯನ್ನು ಕಸಾಪ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಉದ್ಘಾಟಿಸುವರು. ಪ್ರೊ.ಧನಂಜಯಪಾಲಹಳ್ಳಿ ಅಧ್ಯಕ್ಷ ತೆ ವಹಿಸುವರು, 20 ಮಂದಿ ಕವಿಗಳು ಕವಿತೆ ವಾಚಿಸುವರು. ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ರವೀಂದ್ರಶ್ರೀಕಂಠಯ್ಯ ವಹಿಸುವರು. ಮೈಸೂರು ಶಾಸ್ತ್ರೀಯ ಅತ್ಯುನ್ನತ ಕನ್ನಡ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಕೆ.ದುರ್ಗಾದಾಸ್‌ ಸಮಾರೋಪ ಭಾಷಣ ಮಾಡುವರು. ನಾನಾ ಕ್ಷೇತ್ರದಲ್ಲಿ ಸಾಧ ಮಾಡಿದ ಎಚ್‌.ಶ್ರೀಧರ್‌, ನರಸಿಂಹಮೂರ್ತಿ, ಸುಬ್ಬೇಗೌಡ, ಎಸ್‌.ವಿ ಶ್ರೀನಿಧಿ, ಡಾ.ಎಂ.ಎಸ್‌ ಮಹದೇವ, ಲಾಲಿಪಾಳ್ಯರವಿ, ಜಿ.ಎಲ್‌ ರಾಮಲಿಂಗಯ್ಯ, ಗುಣಸಾಗರಿನಾಗರಾಜು, ವಿಜಯಲಕ್ಷ್ಮಿ, ಗಾಮನಹಳ್ಳಿಸ್ವಾಮಿ, ಲಾಲಿಪಾಳ್ಯಮಹದೇವ, ಪ್ರೊ.ಲಕ್ಷ್ಮೀಶ ಅವರನ್ನು ಸನ್ಮಾನಿಸಲಾಗುವುದು. ಸಂಜೆ 6.30 ಕ್ಕೆ ಮೈಸೂರಿನ ಮೈ.ಮ ನಾಗರಾಜು ಮತ್ತು ತಂಡದಿಂದ ಮುದುಕನ ಮದುವೆ ನಾಟಕ ಆಯೋಜಿಸಲಾಗಿದೆ.

2000 ಮಂದಿ ಆಗಮಿಸುವ ನಿರೀಕ್ಷೆಯಿದ್ದು ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲಾ ಸದಸ್ಯರು ತಪ್ಪದೇ ಹಾಜರಾಗಿ ಸಮ್ಮೇಳನ ಯಶಸ್ವಿಗೊಳಿಸಬೇಕು ಅವರು ಕೋರಿದರು.

ಕಸಾಪ ಕೋಶಾಧ್ಯಕ್ಷ ಎಚ್‌.ಟಿ ರಾಜಶೇಖರ್‌, ಉಪಾಧ್ಯಕ್ಷ ಎಂ.ದಿನೇಶ್‌, ಕಾರ‍್ಯದರ್ಶಿ ಗೌರಿಶಂಕರ್‌, ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಎಂ.ಸುರೇಶ್‌, ದೈಹಿಕ ಶಿಕ್ಷ ಕರ ಸಂಘದ ಅಧ್ಯಕ್ಷ ಎಂ.ಕೆ ಸೋಮಶೇಖರ್‌ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ