ಆ್ಯಪ್ನಗರ

ವೈದ್ಯಾಧಿಕಾರಿಗೆ ಆವಾಜ್‌ ಹಾಕಿದ ಕೆಆರ್‌ ಪೇಟೆ ಶಾಸಕ

ಫೋನ್ ಕರೆ ಮಾಡಿ ಆವಾಜ್ ಹಾಕಿರುವ ಶಾಸಕ, ಊರಿಗೆ ಹೋಗ್ಬೇಕಾ? ಇಲ್ಲ ಕೈ ಕಾಲು ಮುರಿಸಿಕೊಳ್ಳಬೇಕಾ ನೀನು? ಎಂದು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿರುವುದು ಇದೀಗ ಬಯಲಾಗಿದೆ.

Vijaya Karnataka Web 20 May 2019, 7:07 pm
ಮಂಡ್ಯ: ಮದ್ದೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗೆ ಕೆ ಆರ್ ಪೇಟೆ ಶಾಸಕ ಕೆ ಸಿ ನಾರಾಯಣ ಗೌಡ ಅವರು ಫೋನ್‌ನಲ್ಲಿ ಧಮ್ಕಿ ಹಾಕಿದ ಘಟನೆ ನಡೆದಿದೆ.
Vijaya Karnataka Web ಜೆಡಿಎಸ್‌
ಜೆಡಿಎಸ್‌


ಫೋನ್ ಕರೆ ಮಾಡಿ ಆವಾಜ್ ಹಾಕಿರುವ ಶಾಸಕ, ಊರಿಗೆ ಹೋಗ್ಬೇಕಾ? ಇಲ್ಲ ಕೈ ಕಾಲು ಮುರಿಸಿಕೊಳ್ಳಬೇಕಾ ನೀನು? ಎಂದು ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿರುವುದು ಇದೀಗ ಬಯಲಾಗಿದೆ.

ನಾಳೆ ಬೆಳಿಗ್ಗೆ 8-9 ಗಂಟೆಗೆ ಬಂದು ಸಿಗಬೇಕು ನೀನು. ಏನ್ ತಿಳ್ಕೊಂಡಿದಿಯಪ್ಪ? ಯಾವ ಊರು? ಏನ್ ಬ್ಯಾಕ್ ಗ್ರೌಂಡ್ ನಿಂದು? ಎಲ್ಲಿಯವನು ನೀನು? ಬೆಂಗಳೂರಲ್ಲಿ ಯಾರ ಕುಟುಂಬದಲ್ಲಿ ಹುಟ್ಟಿದ್ದೀಯ ನೀನು? ತಂದೆ-ತಾಯಿ, ಸಿಸ್ಟರ್ ಇಲ್ವಾ ನಿನಗೆ. ಒಬ್ಬ ಹೆಣ್ಣು ಮಗಳಿಗೆ ಏನ್ ಮಾತಾಡಿದ್ದೀಯ ನೀನು? ಆ ಹೆಣ್ಣು ಮಗಳ ಹತ್ತಿರ ಮೊದಲು ಕ್ಷಮೆ ಕೇಳು.
ಆಮೇಲೆ ಡ್ಯೂಟಿಗೆ ಬಾ ನೀನು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮಂಡ್ಯದವರು ನಾವು. ಇಲ್ಲ ಅಂದ್ರೆ ಬೇರೆ ಥರ ಆಗುತ್ತೆ. ಯಾವ ಮೂಲೆಯಲ್ಲಿ ಇದ್ದರೂ ಬಿಡಲ್ಲ. 8 ಗಂಟೆಗೆ ಡ್ಯೂಟಿಗೆ ಕರೆಯೋಕೆ ಏನ್ ರೈಟ್ಸ್ ನಿನಗೆ? ಎಂದು ಪ್ರಶ್ನಿಸಿದರು.

ಮದ್ದೂರು ಸಾರ್ವಜನಿಕ ಆಸ್ಪತ್ರೆಯ ಕ್ಲರ್ಕ್ ಆಗಿರುವ ತುಳಸಿ ಎಂಬ ಮಹಿಳೆಗೆ ಮದ್ದೂರು ತಾಲೂಕು ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಮುರಳಿ ಕೃಷ್ಣ ಅವರು ಮೆಮೋ ನೀಡಿದ್ದರು ಎಂಬ ಹಿನ್ನೆಲೆಯಲ್ಲಿ ಶಾಸಕರು ಆಡಳಿತ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ