ಆ್ಯಪ್ನಗರ

ಇಂದು ಚೆಲುವನಾರಾಯಣನಿಗೆ ಕೃಷ್ಣರಾಜಮುಡಿ ಕಿರೀಟ ಧಾರಣೆ

ಯದುವಂಶದ ಆರಾಧ್ಯದೈವ ಚೆಲುವನಾರಾಯಣಸ್ವಾಮಿಗೆ ಜು.23ರಂದು ಐತಿಹಾಸಿಕ ಕೃಷ್ಣರಾಜಮುಡಿ ಕಿರೀಟ ಧಾರಣೆ ಸಂಭ್ರಮಕ್ಕೆ ಮೇಲುಕೋಟೆ ಸಾಕ್ಷಿಯಾಗಲಿದೆ.

Vijaya Karnataka 23 Jul 2019, 5:00 am
ಮೇಲುಕೋಟೆ (ಮಂಡ್ಯ ಜಿಲ್ಲೆ): ಯದುವಂಶದ ಆರಾಧ್ಯದೈವ ಚೆಲುವನಾರಾಯಣಸ್ವಾಮಿಗೆ ಜು.23ರಂದು ಐತಿಹಾಸಿಕ ಕೃಷ್ಣರಾಜಮುಡಿ ಕಿರೀಟ ಧಾರಣೆ ಸಂಭ್ರಮಕ್ಕೆ ಮೇಲುಕೋಟೆ ಸಾಕ್ಷಿಯಾಗಲಿದೆ.
Vijaya Karnataka Web krishnarajamudi is crowned chelvanarayan today
ಇಂದು ಚೆಲುವನಾರಾಯಣನಿಗೆ ಕೃಷ್ಣರಾಜಮುಡಿ ಕಿರೀಟ ಧಾರಣೆ


ಅಂದು ರಾತ್ರಿ 7ಕ್ಕೆ ಚೆಲುವನಾರಾಯಣಸ್ವಾಮಿಗೆ ಕೆಂಪು ಮತ್ತು ಬಿಳಿಯ ಅಮೂಲ್ಯವಾದ ವಜ್ರಗಳಿಂದ ಕೂಡಿದ ಐತಿಹಾಸಿಕ ಕಿರೀಟ ಮತ್ತು ಗಂಡುಭೇರುಂಡ ಪದಕ ತೊಡಿಸಿ ಉತ್ಸವ ನೆರವೇರಿಸಲಾಗುತ್ತದೆ. ಅರ್ಧ ಚಂದ್ರ ಪ್ರಭಾವಳಿಯಲ್ಲಿ ಶ್ರೀ ದೇವಿ ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ಕಿರೀಟಧಾರಣ ಮಹೋತ್ಸವ ನಡೆಯಲಿದೆ. ಒಂದು ಗಂಟೆಯ ಅವಧಿಯಲ್ಲಿ ಮಾತ್ರ ಕೃಷ್ಣರಾಜಮುಡಿ ಉತ್ಸವ ಮಂಗಳವಾದ್ಯ ದಿವ್ಯಪ್ರಬಂಧ ಪಾರಾಯಣದೊಂದಿಗೆ ಚತುವೀರ್‍ದಿಗಳಲ್ಲಿ ನಡೆಯಲಿದೆ. ನಂತರ ದೇವಾಲಯದ ಒಳಭಾಗ ಪಡಿಯೇತ್ತ ನೆರವೇರುತ್ತದೆ.

ಮಂಗಳವಾರ ರಾತ್ರಿ ಚೆಲುವನಿಗೆ ಕೃಷ್ಣರಾಜಮುಡಿ ಕಿರೀಟಧಾರಣೆ ನಂತರ ಜು.28ರವರೆಗೆ 5 ದಿನ ನಡೆಯುವ ಉತ್ಸವಗಳಲ್ಲಿ ಸ್ವಾಮಿಗೆ ನಾನಾ ಅಲಂಕಾರ ಮಾಡಲಾಗುತ್ತದೆ. 24ರ ಬುಧವಾರ ಸಂಜೆ 5ಕ್ಕೆ ಪ್ರಹ್ಲಾದ ಪರಿಪಾಲನ, ಜುಲೈ 25ರ ಸಂಜೆ 5ಕ್ಕೆ ಗಜೇಂದ್ರಮೋಕ್ಷ , 26ರ ಬೆಳಗ್ಗೆ 11ಕ್ಕೆ ರಥೋತ್ಸವದ ಸಾಂಕೇತಿಕ ಉತ್ಸವ, 27ರಂದು ರಾತ್ರಿ 7ಕ್ಕೆ ತೆಪೊ್ಪೕತ್ಸವದ ಸಾಂಕೇತಿಕ ಉತ್ಸವ, 28ರ ಬೆಳಗ್ಗೆ 11ಕ್ಕೆ ಕಲ್ಯಾಣಿಯಲ್ಲಿ ತೀರ್ಥಸ್ನಾನ, ಪಟ್ಟಾಭಿಷೇಕ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ