ಆ್ಯಪ್ನಗರ

ಕೆಆರ್‌ಎಸ್‌: 93 ಅಡಿಗೆ ಏರಿದ ನೀರಿನ ಮಟ್ಟ

93 ಅಡಿಗೆ ಏರಿದ ನೀರಿನ ಮಟ್ಟ ವಿಕ ಸುದ್ದಿಲೋಕ ಮಂಡ್ಯ ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಆರ್‌ಎಸ್‌ ಜಲಾಶಯದ ಒಳ ಹರಿವಿನ ಪ್ರಮಾಣ ಪ್ರಸ್ತುತ 37,375 ...

Vijaya Karnataka 9 Aug 2019, 5:00 am
ಮಂಡ್ಯ: ಕೊಡಗಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆಆರ್‌ಎಸ್‌ ಜಲಾಶಯದ ಒಳ ಹರಿವಿನ ಪ್ರಮಾಣ ಪ್ರಸ್ತುತ 37,375 ಕ್ಯೂಸೆಕ್‌ ದಾಖಲಾಗಿದೆ.
Vijaya Karnataka Web krs dam 93 feet high water level
ಕೆಆರ್‌ಎಸ್‌: 93 ಅಡಿಗೆ ಏರಿದ ನೀರಿನ ಮಟ್ಟ


ಹೀಗಾಗಿ ಇನ್ನೆರಡು ದಿನಗಳಲ್ಲಿ ನೂರಡಿ ದಾಟಲಿದ್ದು, ಇದೇ ಪ್ರಮಾಣದ ನೀರು ಎಂಟತ್ತು ದಿನಗಳು ಹರಿದು ಬಂದರೆ ಜಲಾಶಯ ಭರ್ತಿಯಾಗುವ ಸಾಧ್ಯತೆಯಿದೆ. ಹೀಗಾಗಿ ಕನ್ನಂಬಾಡಿಕಟ್ಟೆ ನೀರಿನ ಮಟ್ಟವು ನೂರಡಿಯನ್ನೇ ಮುಟ್ಟುವುದಿಲ್ಲ ಎಂಬ ಪರಿಸ್ಥಿತಿಯಿಂದ ಭರ್ತಿಯಾಗುವ ನಿರೀಕ್ಷೆ ಹುಟ್ಟಿಸಿದೆ.

ಒಂದೇ ದಿನದಲ್ಲಿ 6.60 ಅಡಿ ಏರಿಕೆ: ಒಂದೇ ದಿನದಲ್ಲಿ ಜಲಾಶಯದ ನೀರಿನ ಮಟ್ಟವು 6.60 ಅಡಿ ಹೆಚ್ಚಾಗಿದೆ. ಆ.7ರಂದು ಬೆಳಗ್ಗೆ 86.90 ಅಡಿ ಇದ್ದ ಜಲಾಶಯದ ನೀರಿನ ಮಟ್ಟವು ಸಂಜೆ ವೇಳೆಗೆ 88.60 ಅಡಿ ತಲುಪಿತ್ತು. ಪುನಃ ಆ.8ರಂದು 91 ಅಡಿಗೇರಿತ್ತು. ಸಂಜೆ ವೇಳೆಗೆ 93.50 ಅಡಿ ಮುಟ್ಟಿದೆ. ಇದರ ನಡುವೆ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ಸ್ಥಗಿತಗೊಳಿಸಲಾಗಿದೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ನದಿಗೆ 80,000 ಕ್ಯೂಸೆಕ್‌ ನೀರನ್ನು ಬಿಡುತ್ತಿರುವುದರಿಂದ ಕಾವೇರಿ ನೀರಿಗಾಗಿ ತಮಿಳುನಾಡಿನ ತಗಾದೆ ಇಲ್ಲ. ಹೀಗಾಗಿ ಕನ್ನಂಬಾಡಿಕಟ್ಟೆಯಿಂದ ಕಾವೇರಿ ನದಿ ಮೂಲಕ ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ಆದಾಗ್ಯೂ 421 ಕ್ಯೂಸೆಕ್‌ ಸೋರಿಕೆ ನೀರು ನದಿಗೆ ಹೋಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ