ಶಿವನಂಜಯ್ಯ ಮದ್ದೂರು
ಮಂಡ್ಯ: ಕೊರೊನಾ ಸಂಕಷ್ಟ ಎಲ್ಲರನ್ನೂ ಬಾಧಿಸುತ್ತಿರುವ ಈ ಹೊತ್ತಲ್ಲಿ ವಕೀಲರೊಬ್ಬರು ತಮ್ಮ ಜೀವನೋಪಾಯಕ್ಕಾಗಿ ಪಾನಿಪುರಿ, ಗೋಬಿ ಮಂಚೂರಿ ಅಂಗಡಿ ಆರಂಭಿಸುವ ಮೂಲಕ ಬದುಕಿಗೆ ಮತ್ತೊಂದು ದಾರಿ ಕಂಡುಕೊಂಡಿದ್ದಾರೆ.
ಮದ್ದೂರು ತಾಲೂಕು ಕೃಷಿ ಕಾರ್ಮಿಕ ವಿ.ಕೆ.ಶ್ರೀನಿವಾಸ್ ಅವರ ಪುತ್ರ ವಿ.ಎಸ್.ಪ್ರತಾಪ್ ಕಳೆದ 6 ವರ್ಷದ ಹಿಂದೆ ಕಾನೂನು ಪದವಿ ಪಡೆದು ಬೆಂಗಳೂರಿನ ಹೈಕೋರ್ಟ್ ಸೇರಿದಂತೆ ಇತರೆ ಸಿವಿಲ್ ನ್ಯಾಯಾಲಯಗಳಲ್ಲಿ ಹಿರಿಯ ವಕೀಲರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಕಳೆದ ನಾಲ್ಕು ತಿಂಗಳ ಅವಧಿಯುದ್ಧಕ್ಕೂ ಕೋರ್ಟ್ ಬಂದ್ ಹಿನ್ನೆಲೆಯಲ್ಲಿ ವಿ.ಎಸ್. ಪ್ರತಾಪ್ ನಿರುದ್ಯೋಗಿಯಾದರು. ಆದರೆ ಧೃತಿಗೆಡಲಿಲ್ಲ, ಬೆಂಗಳೂರಿನಿಂದ ತವರೂರು ವಳಗೆರೆಹಳ್ಳಿಗೆ ವಾಪಸಾಗಿ ಹೊಸ ಉದ್ಯೋಗ ಆರಂಭಿಸಿದ್ದಾರೆ.
ನಮ್ಮ ಜೀವನ ನಮ್ಮ ಜವಾಬ್ದಾರಿ: ಕೊರೊನಾ ಎದುರು ಆತ್ಮವಿಶ್ವಾಸವೇ ಬದುಕಿನ ಸೂತ್ರ
ಎಂಜಿನಿಯರಿಂಗ್ ಪದವೀಧರೆಯನ್ನು ಎರಡು ವರ್ಷದ ಹಿಂದೆ ವಿವಾಹವಾದ ಪ್ರತಾಪ್ ಮದ್ದೂರು ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಕೀಲಿ ವೃತ್ತಿ ಹಿನ್ನೆಲೆ ನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಆದರೆ, ಕೊರೊನಾ ಸಂಕಷ್ಟ ಈಗ ಆ ಕೆಲಸವನ್ನು ಕಿತ್ತುಕೊಂಡಿದೆ. ಪರಿಣಾಮ ಆರ್ಥಿಕ ಸಂಕಷ್ಟ ಎದುರಾಗಿ ಮದ್ದೂರಿನ ಬಾಡಿಗೆ ಮನೆಯನ್ನು ಖಾಲಿ ಮಾಡಿ ಸ್ವಗ್ರಾಮ ವಳಗೆರೆಹಳ್ಳಿಗೆ ತೆರಳಿದರು.
ಪ್ರತಾಪ್ ಅವರಿಗೆ ಪಿತ್ರಾರ್ಜಿತವಾಗಿ ಬಂದ ಗ್ರಾಮದ ಮನೆ ಹೊರತುಪಡಿಸಿ ಹೆಚ್ಚಿನ ಆಸ್ತಿಪಾಸ್ತಿ ಇಲ್ಲ. ಸಂಸಾರ ನಿರ್ವಹಣೆ, ದೈನಂದಿನ ಖರ್ಚು ವೆಚ್ಚ ಭರಿಸಲಾಗದ ಸ್ಥಿತಿ ಬಂದೊದಗಿದ ವೇಳೆ ಸ್ವಾಭಿಮಾನಿ ಪ್ರತಾಪ್ ಧೃತಿಗೆಡದೆ ವಳಗೆರೆಹಳ್ಳಿ ಗ್ರಾಮದಲ್ಲೇ ಗೋಬಿ ಅಂಗಡಿ ತೆರೆದಿದ್ದಾರೆ.
ಬೆಂಗಳೂರಿಂದ ಗುಳೆ ಹೊರಟ ಉದ್ಯೋಗಸ್ಥರು, ಹಳ್ಳಿ ಜನರಿಗೆ ಕೊರೊನಾ ಭೀತಿ
ಕಾನೂನು ಪದವಿ ಬಳಿಕ ಹೈಕೋರ್ಟ್ನಲ್ಲಿ ಹಿರಿಯ ವಕೀಲರೊಬ್ಬರ ಮಾರ್ಗದರ್ಶನದಲ್ಲಿ ವಕೀಲಿ ಅಭ್ಯಾಸ ಮಾಡುತ್ತಿದ್ದೆ. ಕೋವಿಡ್-19 ಲಾಕ್ಡೌನ್ ಬಳಿಕ ಎದುರಾದ ಉದ್ಯೋಗ ಸಮಸ್ಯೆಯಿಂದ ಹೊರಬರಲು ಪಾನೀಪುರಿ, ಗೋಬಿ ಮಂಚೂರಿ ಅಂಗಡಿ ತೆರೆದಿದ್ದೇನೆ. ಸದ್ಯಕ್ಕೆ ಆರ್ಥಿಕ ಸಮಸ್ಯೆ ನೀಗಿಸುವುದೇ ಗುರಿಯಾಗಿದೆ.
ವಿ.ಎಸ್.ಪ್ರತಾಪ್, ವಕೀಲ, ವಳಗೆರೆಹಳ್ಳಿ, ಮದ್ದೂರು ತಾಲೂಕು
ಆತ್ಮಹತ್ಯೆ ಚಿಂತೆ ಬಿಡಿ.. ಧನಾತ್ಮಕ ಮನಸ್ಸಿನೊಂದಿಗೆ ಬಿಂದಾಸ್ ಆಗಿ ಬಾಳಿ..!
ಮಂಡ್ಯ: ಕೊರೊನಾ ಸಂಕಷ್ಟ ಎಲ್ಲರನ್ನೂ ಬಾಧಿಸುತ್ತಿರುವ ಈ ಹೊತ್ತಲ್ಲಿ ವಕೀಲರೊಬ್ಬರು ತಮ್ಮ ಜೀವನೋಪಾಯಕ್ಕಾಗಿ ಪಾನಿಪುರಿ, ಗೋಬಿ ಮಂಚೂರಿ ಅಂಗಡಿ ಆರಂಭಿಸುವ ಮೂಲಕ ಬದುಕಿಗೆ ಮತ್ತೊಂದು ದಾರಿ ಕಂಡುಕೊಂಡಿದ್ದಾರೆ.
ಮದ್ದೂರು ತಾಲೂಕು ಕೃಷಿ ಕಾರ್ಮಿಕ ವಿ.ಕೆ.ಶ್ರೀನಿವಾಸ್ ಅವರ ಪುತ್ರ ವಿ.ಎಸ್.ಪ್ರತಾಪ್ ಕಳೆದ 6 ವರ್ಷದ ಹಿಂದೆ ಕಾನೂನು ಪದವಿ ಪಡೆದು ಬೆಂಗಳೂರಿನ ಹೈಕೋರ್ಟ್ ಸೇರಿದಂತೆ ಇತರೆ ಸಿವಿಲ್ ನ್ಯಾಯಾಲಯಗಳಲ್ಲಿ ಹಿರಿಯ ವಕೀಲರ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಕಳೆದ ನಾಲ್ಕು ತಿಂಗಳ ಅವಧಿಯುದ್ಧಕ್ಕೂ ಕೋರ್ಟ್ ಬಂದ್ ಹಿನ್ನೆಲೆಯಲ್ಲಿ ವಿ.ಎಸ್. ಪ್ರತಾಪ್ ನಿರುದ್ಯೋಗಿಯಾದರು. ಆದರೆ ಧೃತಿಗೆಡಲಿಲ್ಲ, ಬೆಂಗಳೂರಿನಿಂದ ತವರೂರು ವಳಗೆರೆಹಳ್ಳಿಗೆ ವಾಪಸಾಗಿ ಹೊಸ ಉದ್ಯೋಗ ಆರಂಭಿಸಿದ್ದಾರೆ.
ನಮ್ಮ ಜೀವನ ನಮ್ಮ ಜವಾಬ್ದಾರಿ: ಕೊರೊನಾ ಎದುರು ಆತ್ಮವಿಶ್ವಾಸವೇ ಬದುಕಿನ ಸೂತ್ರ
ಎಂಜಿನಿಯರಿಂಗ್ ಪದವೀಧರೆಯನ್ನು ಎರಡು ವರ್ಷದ ಹಿಂದೆ ವಿವಾಹವಾದ ಪ್ರತಾಪ್ ಮದ್ದೂರು ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ವಕೀಲಿ ವೃತ್ತಿ ಹಿನ್ನೆಲೆ ನಿತ್ಯ ಬೆಂಗಳೂರಿಗೆ ಹೋಗಿ ಬರುತ್ತಿದ್ದರು. ಆದರೆ, ಕೊರೊನಾ ಸಂಕಷ್ಟ ಈಗ ಆ ಕೆಲಸವನ್ನು ಕಿತ್ತುಕೊಂಡಿದೆ. ಪರಿಣಾಮ ಆರ್ಥಿಕ ಸಂಕಷ್ಟ ಎದುರಾಗಿ ಮದ್ದೂರಿನ ಬಾಡಿಗೆ ಮನೆಯನ್ನು ಖಾಲಿ ಮಾಡಿ ಸ್ವಗ್ರಾಮ ವಳಗೆರೆಹಳ್ಳಿಗೆ ತೆರಳಿದರು.
ಪ್ರತಾಪ್ ಅವರಿಗೆ ಪಿತ್ರಾರ್ಜಿತವಾಗಿ ಬಂದ ಗ್ರಾಮದ ಮನೆ ಹೊರತುಪಡಿಸಿ ಹೆಚ್ಚಿನ ಆಸ್ತಿಪಾಸ್ತಿ ಇಲ್ಲ. ಸಂಸಾರ ನಿರ್ವಹಣೆ, ದೈನಂದಿನ ಖರ್ಚು ವೆಚ್ಚ ಭರಿಸಲಾಗದ ಸ್ಥಿತಿ ಬಂದೊದಗಿದ ವೇಳೆ ಸ್ವಾಭಿಮಾನಿ ಪ್ರತಾಪ್ ಧೃತಿಗೆಡದೆ ವಳಗೆರೆಹಳ್ಳಿ ಗ್ರಾಮದಲ್ಲೇ ಗೋಬಿ ಅಂಗಡಿ ತೆರೆದಿದ್ದಾರೆ.
ಬೆಂಗಳೂರಿಂದ ಗುಳೆ ಹೊರಟ ಉದ್ಯೋಗಸ್ಥರು, ಹಳ್ಳಿ ಜನರಿಗೆ ಕೊರೊನಾ ಭೀತಿ
ಕಾನೂನು ಪದವಿ ಬಳಿಕ ಹೈಕೋರ್ಟ್ನಲ್ಲಿ ಹಿರಿಯ ವಕೀಲರೊಬ್ಬರ ಮಾರ್ಗದರ್ಶನದಲ್ಲಿ ವಕೀಲಿ ಅಭ್ಯಾಸ ಮಾಡುತ್ತಿದ್ದೆ. ಕೋವಿಡ್-19 ಲಾಕ್ಡೌನ್ ಬಳಿಕ ಎದುರಾದ ಉದ್ಯೋಗ ಸಮಸ್ಯೆಯಿಂದ ಹೊರಬರಲು ಪಾನೀಪುರಿ, ಗೋಬಿ ಮಂಚೂರಿ ಅಂಗಡಿ ತೆರೆದಿದ್ದೇನೆ. ಸದ್ಯಕ್ಕೆ ಆರ್ಥಿಕ ಸಮಸ್ಯೆ ನೀಗಿಸುವುದೇ ಗುರಿಯಾಗಿದೆ.
ವಿ.ಎಸ್.ಪ್ರತಾಪ್, ವಕೀಲ, ವಳಗೆರೆಹಳ್ಳಿ, ಮದ್ದೂರು ತಾಲೂಕು
ಆತ್ಮಹತ್ಯೆ ಚಿಂತೆ ಬಿಡಿ.. ಧನಾತ್ಮಕ ಮನಸ್ಸಿನೊಂದಿಗೆ ಬಿಂದಾಸ್ ಆಗಿ ಬಾಳಿ..!